ಬ್ರೇಕಿಂಗ್ ನ್ಯೂಸ್
09-03-21 05:54 pm Headline Karnataka News Network ದೇಶ - ವಿದೇಶ
ದಮ್ಮಾಮ್, ಮಾ.9: ಇರಾನ್ ಪ್ರೇರಿತ ಯೆಮೆನ್ ಬಂಡುಕೋರರು ಸೌದಿ ಅರೇಬಿಯಾದ ಎರಡು ಅತಿದೊಡ್ಡ ಪೆಟ್ರೋಲಿಯಂ ಸ್ಥಾವರಗಳನ್ನು ಗುರಿಯಾಗಿರಿಸಿ ಮಿಸೈಲ್ ದಾಳಿ ನಡೆಸಿದ್ದಾರೆ. ಡ್ರೋಣ್ ಮೂಲಕ ದಾಳಿ ಆಗಿರುವುದನ್ನು ಸೌದಿ ಅರೇಬಿಯಾ ಸರಕಾರ ದೃಢಪಡಿಸಿದೆ. ದಮ್ಮಾಮ್ ಬಳಿಯಿರುವ ರಾಸ್ ತನುರಾ ಪೋರ್ಟ್ ಮತ್ತು ಡಹ್ರಾನ್ ಸ್ಥಾವರ ಜಗತ್ತಿನ ಅತಿ ದೊಡ್ಡ ಪೆಟ್ರೋಲಿಯಂ ಸ್ಥಾವರಗಳಲ್ಲಿ ಒಂದಾಗಿದ್ದು ಆದಿತ್ಯವಾರ ಅದರ ಮೇಲೆ ಬಾಂಬ್ ದಾಳಿ ನಡೆದಿದೆ.
ಸಮುದ್ರ ಪ್ರದೇಶದಿಂದ ಮಿಸೈಲ್ ಮತ್ತು ಡ್ರೋಣ್ ದಾಳಿ ಮಾಡಿದ್ದು ಅದನ್ನು ತಡೆದಿದ್ದೇವೆ ಎಂದು ಸೌದಿ ಅರೇಬಿಯಾ ಸಚಿವಾಲಯ ಹೇಳಿಕೊಂಡಿದೆ. ಡಹ್ರಾನ್ ಸಿಟಿಯಲ್ಲಿರುವ ಆರಾಮ್ಕೋ ತೈಲ ಸ್ಥಾವರ ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ದಾಳಿ ಘಟನೆಯಲ್ಲಿ ಯಾವುದೇ ಸಾವು – ನೋವು ಆಗಿಲ್ಲ ಎಂದು ಸಚಿವಾಲಯದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇರಾನ್ ಪ್ರೇರಿತ ಯೆಮೆನ್ ಪ್ರಾಂತದ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ನಡುವಿನ ಸಂಘರ್ಷ ಹಲವು ವರ್ಷಗಳಿಂದ ನಡೆಯುತ್ತಿದೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಯೆಮೆನ್ ಬಂಡುಕೋರರ ಸಂಘರ್ಷ ಕೊನೆಗಾಣಿಸುವ ಮಾತನ್ನಾಡಿದ್ದರು. ಮಾತುಕತೆ ಮೂಲಕ ಸುದೀರ್ಘ ಕಾಲದ ಸಮರವನ್ನು ಕೊನೆಗಾಣಿಸುವುದಾಗಿ ಹೇಳಿದ್ದರು. ಸೌದಿ ಅರೇಬಿಯಾಗೆ ಅಮೆರಿಕದ ಮಿಲಿಟರಿ ಬೆಂಬಲ ಇದ್ದು, ಯೆಮನ್ ವಿರುದ್ಧ ದಾಳಿ ನಡೆಸಲು ನೆರವು ನೀಡಿತ್ತು. ಆದರೆ, ಬೈಡನ್ ಅಧಿಕಾರಕ್ಕೆ ಬಂದ ಬಳಿಕ ಮಿಲಿಟರಿ ಬೆಂಬಲವನ್ನು ಹಿಂತೆಗೆಯುವ ಮಾತನ್ನಾಡಿದ್ದರು.
ಇದೇ ವೇಳೆ, ಯೆಮೆನ್ ಪ್ರಾಂತದ ಹೌತಿ ಬಂಡುಕೋರರ ಪರವಾಗಿ ಅದರ ಬ್ರಿಗೇಡಿಯರ್ ಒಬ್ಬ ಹೇಳಿಕೆ ಬಿಡುಗಡೆ ಮಾಡಿದ್ದು, ಜಗತ್ತಿನ ಅತಿ ದೊಡ್ಡ ತೈಲ ಸ್ಥಾವರಕ್ಕೆ 14 ಡ್ರೋಣ್ ಮತ್ತು ಎಂಟು ಮಿಸೈಲ್ ದಾಳಿ ನಡೆಸಲಾಗಿದೆ ಎಂದಿದ್ದಾನೆ. ದಾಳಿಯಿಂದ ದೊಡ್ಡ ಹಾನಿ ಆಗಿದ್ದಾದರೆ, ತೈಲ ಬೆಲೆ ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಭಾರತಕ್ಕೂ ತೈಲವನ್ನು ಇರಾನ್ ಮತ್ತು ಸೌದಿಯಿಂದ ಆಮದು ಮಾಡಲಾಗುತ್ತಿದೆ.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
10-09-25 11:02 am
Mangalore Correspondent
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm