ಬ್ರೇಕಿಂಗ್ ನ್ಯೂಸ್
27-02-21 10:44 pm Headline Karnataka News Network ದೇಶ - ವಿದೇಶ
ಮುಂಬೈ, ಫೆ 27: ಕಕ್ಷಿದಾರರನ್ನು ಪ್ರತಿನಿಧಿಸುವ ವೇಳೆ ವಕೀಲರೊಬ್ಬರು ನ್ಯಾಯಾಲಯ ಕೊಠಡಿಯಲ್ಲಿ ಮುಖಕ್ಕೆ ಧರಿಸಿದ್ದ ಮಾಸ್ಕ್ ತೆಗೆದುಹಾಕಿದ್ದಕ್ಕೆ ಪ್ರಕರಣದ ಅಹವಾಲು ಆಲಿಸುವುದನ್ನು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಫೆಬ್ರವರಿ 22ನೇ ತಾರೀಕಿನಂದು ನಡೆದ ಘಟನೆಯ ಈ ಆದೇಶವು ಶನಿವಾರದಂದು ಲಭ್ಯವಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಒಬ್ಬರೇ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದ ನ್ಯಾ. ಪೃಥ್ವಿರಾಜ್ ಚವ್ಹಾಣ್ ಫೆಬ್ರವರಿ 22ರಂದು ಅಹವಾಲು ಆಲಿಸುತ್ತಿದ್ದರು. ಆ ವೇಳೆ ಕಕ್ಷಿದಾರರ ಪರ ವಕೀಲರು ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ನ್ಯಾಯಾಲಯದ ಕೊಠಡಿಯಲ್ಲಿ ಮಾಸ್ಕ್ ತೆಗೆದುಹಾಕಿದ್ದರು.
ವ್ಯಕ್ತಿಗಳ ಉಪಸ್ಥಿತಿಯಲ್ಲೇ ಪ್ರಕರಣದ ಅಹವಾಲು ಕೇಳುವ ವೇಳೆಯಲ್ಲಿ ಪಾಲಿಸಲೇಬೇಕೆಂದು ಹೈಕೋರ್ಟ್ ರೂಪಿಸಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ ಬಗ್ಗೆ ನ್ಯಾಯಮೂರ್ತಿ ಚವ್ಹಾಣ್ ಮಾತನಾಡಿ, ಎಲ್ಲ ಸಮಯದಲ್ಲಿ ಮಾಸ್ಕ್ ಧರಿಸಿರುವುದು ಕಡ್ಡಾಯ ಎಂದಿದ್ದರು. ಆ ನಂತರ ಇದೇ ಪ್ರಕರಣದ ವಿಚಾರಣೆ ಬಂದಾಗ ಅದರ ಅಹವಾಲು ಆಲಿಸುವುದಕ್ಕೆ ನ್ಯಾಯಮೂರ್ತಿ ಚವ್ಹಾಣ್ ನಿರಾಕರಿಸಿದ್ದಾರೆ. “ಬೋರ್ಡ್ನಿಂದ ಈ ವಿಷಯ ತೆಗೆಯಬೇಕು,” ಎಂದು ಆದೇಶ ಹೇಳಿದೆ.
ಸರದಿ ಬರುವ ತನಕ ಇತರರು ಕಾಯುತ್ತಿರಬೇಕು:
ನ್ಯಾ. ಚವ್ಹಾಣ್ ಅವರು ಪ್ರಕರಣಗಳಿಗೆ ಸಂಬಂಧಿಸಿದ ವಕೀಲರಿಗೆ ಮಾತ್ರ ನ್ಯಾಯಾಲಯ ಕೊಠಡಿಯೊಳಗೆ ಪ್ರವೇಶಿಸಲು ಅವಕಾಶ ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ಇತರ ವಕೀಲರು ಮತ್ತು ಅವರ ಕಕ್ಷಿದಾರರು ತಮ್ಮ ಸರದಿಯ ಸಂಖ್ಯೆ ಬರುವ ತನಕ ಮತ್ತೊಂದು ಕೊಠಡಿಯಲ್ಲಿ ಕಾಯಬೇಕಾಗುತ್ತದೆ. ಪುಣೆ ಹೊರತುಪಡಿಸಿ ಮಹಾರಾಷ್ಟ್ರದಲ್ಲಿ ಹೈಕೋರ್ಟ್ ಮತ್ತು ಇತರ ಎಲ್ಲ ಸಹವರ್ತಿ ಕೋರ್ಟ್ಗಳಲ್ಲಿ ಎಂಟು ತಿಂಗಳ ನಂತರ ವ್ಯಕ್ತಿಯ ಸಮ್ಮುಖದಲ್ಲೇ ಅಹವಾಲು ಆಲಿಸುವುದಕ್ಕೆ ಆರಂಭಿಸಲಾಗಿದೆ.
ಕೊರೊನಾ ಆರಂಭವಾದಾಗಿನಿಂದ ಕೋರ್ಟ್ಗಳು ಆನ್ಲೈನ್ನಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಅಹವಾಲು ಆಲಿಸುತ್ತಿದ್ದವು. ಫೆಬ್ರವರಿ ಮಧ್ಯಭಾಗದಿಂದ ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಹೊಸದಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಪೆಬ್ರವರಿ 26ಕ್ಕೆ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು 21,38,154 ದಾಖಲಾಗಿದ್ದವು. ಆ ಪೈಕಿ ಮುಂಬೈನಲ್ಲೇ 3,23,879 ಪ್ರಕರಣಗಳು ದಾಖಲಾಗಿವೆ.
A single-judge bench of Justice Prithviraj Chavan was on February 22 hearing an appeal matter during which the appellant's advocate removed his mask in the courtroom contrary to guidelines.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm