ಬ್ರೇಕಿಂಗ್ ನ್ಯೂಸ್
07-01-21 03:06 pm Headline Karnataka News Network ದೇಶ - ವಿದೇಶ
ತಿರುವನಂತಪುರ, ಜ.7: ಕೊರೊನಾ ಲಾಕ್ಡೌನ್ ಎಫೆಕ್ಟ್ ಬರೀಯ ಭಾರತದಲ್ಲಿ ಮಾತ್ರ ಆಗಿದ್ದಲ್ಲ. ಇಡೀ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಇದರ ಪರಿಣಾಮ ತೀವ್ರವಾಗಿ ತಟ್ಟಿದೆ. ವರದಿ ಪ್ರಕಾರ, ಕೇರಳದಲ್ಲಿ ಅತಿ ಹೆಚ್ಚು ಮಂದಿ ಇದರ ಎಫೆಕ್ಟ್ ತಟ್ಟಿದೆ ಅನ್ನುವ ಮಾಹಿತಿ ಲಭಿಸಿದೆ.
ಕಳೆದ ಮೇ ತಿಂಗಳಿಂದ ಜನ.4ರ ನಡುವೆ ಕೇರಳಕ್ಕೆ ಕೊಲ್ಲಿ ಸೇರಿದಂತೆ ವಿದೇಶಿ ರಾಷ್ಟ್ರಗಳಿಂದ 8.40 ಲಕ್ಷ ಮಂದಿ ತಾಯ್ನಾಡಿಗೆ ಮರಳಿದ್ದಾರೆ. ಈ ಪೈಕಿ 5.52 ಲಕ್ಷ ಮಂದಿ ತಮ್ಮ ಉದ್ಯೋಗವನ್ನೇ ಕಳಕೊಂಡಿದ್ದಾರೆ. ಹೌದು.. ಇಂಥ ವರದಿಯೊಂದನ್ನು ಕೇರಳ ಸರಕಾರವೇ ಬಿಡುಗಡೆ ಮಾಡಿದೆ. ಇದರಿಂದ ದೊಡ್ಡ ಆರ್ಥಿಕ ನಷ್ಟ ಕೇರಳಕ್ಕೆ ಆಗಲಿದೆ ಎನ್ನುವ ಮಾತು ಕೇಳಿಬಂದಿದೆ.

ಕೇರಳ ಸರಕಾರದ ಎನ್ಆರ್ ಐ ಘಟಕ ಈ ಮಾಹಿತಿಗಳನ್ನು ಅದಿಕೃತವಾಗಿ ಬಿಡುಗಡೆ ಮಾಡಿದೆ. ಕಳೆದ 30 ದಿನಗಳಲ್ಲಿ ಮತ್ತೆ 1.40 ಲಕ್ಷ ಮಂದಿ ಊರಿಗೆ ಮರಳಿದ್ದಾರೆ. ಇದಲ್ಲದೆ, 2.8 ಲಕ್ಷ ಮಂದಿಯ ವೀಸಾ ಅವಧಿ ಮುಗಿದು ಇನ್ನಿತರ ಕಾರಣಕ್ಕೆ ಮತ್ತೆ ವಿದೇಶಕ್ಕೆ ಹೋಗುವ ಅವಕಾಶವನ್ನು ಕಳಕೊಂಡಿದ್ದಾರೆ.
ಕೇರಳದ ಮಟ್ಟಿಗೆ ದೊಡ್ಡ ಆರ್ಥಿಕತೆಯ ಮೂಲವಾಗಿದ್ದ ವಿದೇಶಿ ಉದ್ಯೋಗ ಕೊರೊನಾ ಲಾಕ್ಡೌನ್ ಕಾರಣದಿಂದ ಉದ್ಯೋಗ ನಷ್ಟವಾಗಿದ್ದು ಮತ್ತೊಂದು ಹೊಡೆತ ನೀಡಲಿದೆ. ವಿದೇಶಗಳಲ್ಲಿ ಉದ್ಯೋಕ ಕಳಕೊಂಡವರು ಇನ್ನಷ್ಟು ಮಂದಿ ತಾಯ್ನಾಡಿಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 2018ರಲ್ಲಿ ಕೇರಳಕ್ಕೆ ವಿದೇಶಿ ವಿನಿಮಯದ ರೂಪದಲ್ಲಿ 85 ಸಾವಿರ ಕೋಟಿ ರೂಪಾಯಿ ಹರಿದು ಬಂದಿತ್ತು. 2020ರಲ್ಲಿ ಇದು ಒಂದು ಲಕ್ಷ ಕೋಟಿಗೆ ಸಮೀಪಿಸುವ ಅಂದಾಜಿತ್ತು. ಆದರೆ, ಇದರ ನಡುವಲ್ಲೇ ಹೊಡೆತ ಬಿದ್ದಿದ್ದು 15ರಿಂದ 20 ಪರ್ಸೆಂಟ್ ಕಡಿತವಾಗಲಿದೆ ಅನ್ನುವ ಮಾತನ್ನು ತಜ್ಞರು ಹೇಳುತ್ತಿದ್ದಾರೆ.
AMIDST the Covid-19 pandemic-induced economic crisis, 5.52 lakh people who have returned to Kerala from abroad since May last year have given the loss of jobs as reason, according to government data.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:44 pm
HK News Staffer
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
15-07-26 07:40 pm
HK News Staffer
ಉಡುಪಿ ; ಹೆದ್ದಾರಿ ಮಧ್ಯದಲ್ಲೇ ಟೇಬಲ್ ಹಾಕಿ ಟಿವಿ, ಮ...
15-07-26 07:02 pm
ಮುಕ್ಕ ಶ್ರೀನಿವಾಸ್ ಕಾಲೇಜು ಎಂಬಿಬಿಎಸ್ ವಿದ್ಯಾರ್ಥಿನ...
15-07-26 01:17 pm
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm