ಬ್ರೇಕಿಂಗ್ ನ್ಯೂಸ್
07-05-26 12:52 pm HK News Staffer ದೇಶ - ವಿದೇಶ
ಚೆನ್ನೈ, ಮೇ 7: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಡಿಎಂಕೆ - ಎಐಎಡಿಎಂಕೆ ಬಹುಕಾಲದ ವೈರತ್ವ ಬದಿಗಿಟ್ಟು ಒಂದಾಗಲಿದೆ ಎನ್ನುವ ವದಂತಿ ನಡುವೆಯೇ ನಿರ್ಗಮಿತ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಇಂಗ್ಲಿಷ್ ದೈನಿಕ ಒಂದಕ್ಕೆ ಪ್ರತಿಕ್ರಿಯಿಸಿ, ಮೈತ್ರಿ ವದಂತಿಯನ್ನು ತಳ್ಳಿಹಾಕಿದ್ದಾರೆ. ಡಿಎಂಕೆ ಪಕ್ಷವು ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚಿಸುವುದಕ್ಕೆ ಕಾಯಲು ಸಿದ್ಧವಾಗಿದೆ. ಆರು ತಿಂಗಳ ಕಾಲ ಯಾವುದೇ ಅಡ್ಡಿಯಿಲ್ಲದೇ ಬೆಳವಣಿಗೆಯನ್ನು ಗಮನಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಸ್ಟಾಲಿನ್ ಹೇಳಿಕೆಯಿಂದ ಮೈತ್ರಿ ಸಾಧ್ಯತೆಗಳ ಕುರಿತು ಹರಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ರಾಜ್ಯದಲ್ಲಿ ಸಂವಿಧಾನಾತ್ಮಕ ಸಂಕಷ್ಟ ಅಥವಾ ಮತ್ತೊಂದು ಚುನಾವಣೆ ಎದುರಿಸುವಂತಹ ಸ್ಥಿತಿ ಬರಬಾರದು ಎಂದು ಹೇಳಿದ ಸ್ಟಾಲಿನ್, ಹೊಸ ಸರ್ಕಾರವು ತಮ್ಮ ಸರ್ಕಾರ ಜಾರಿಗೆ ತಂದಿದ್ದ ಎಲ್ಲಾ ಯೋಜನೆಗಳನ್ನು ಮುಂದುವರಿಸಬೇಕು. ಜೊತೆಗೆ, ಟಿವಿಕೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು ಎಂದು ಹೇಳಿದರು.
ಮಹಿಳೆಯರಿಗೆ 2,500 ರೂ. ಪ್ರತಿ ತಿಂಗಳು ನೀಡುವ ವಿಜಯ್ ಭರವಸೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ಟಾಲಿನ್, ಅದು ಈಡೇರಿಸಲು ಕಷ್ಟದ ಭರವಸೆ. ಕನಿಷ್ಠ ನಾವು ನೀಡಿದಂತೆ 1,000 ರೂ. ಆದರೂ ನೀಡಿ ಎಂದು ಹೇಳಿದರು.
ತಮಿಳುನಾಡು ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಏಕಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತಕ್ಕೆ ಅಗತ್ಯವಿದ್ದ 118 ಸ್ಥಾನ ಪಡೆಯಲು ವಿಫಲವಾಗಿದೆ. ಕಾಂಗ್ರೆಸ್ ಬೆಂಬಲ ನೀಡಿದ ನಂತರ ಟಿವಿಕೆ ಬಲ 112ಕ್ಕೇರಿದ್ದರೂ, ಸರ್ಕಾರ ರಚಿಸಲು ಇನ್ನೂ ಐದು ಸ್ಥಾನಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಪಕ್ಷವು ಸಿಪಿಐ ಮತ್ತು ವಿಡುತಲೈ ಚಿರುಥೈಗಲ್ ಕಚ್ಚಿ ಪಕ್ಷಗಳ ಬೆಂಬಲ ಯಾಚಿಸಿದೆ. ವಿಜಯ್ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದರೂ, ಪೂರ್ಣ ಬಹುಮತ ತೋರಿಸಿದ ನಂತರವೇ ಬನ್ನಿ ಎಂದು ಹೇಳಿದ್ದಾರೆನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ವಿಜಯ್ ಪಕ್ಷವನ್ನು ಬದಿಗಿಟ್ಟು ಡಿಎಂಕೆ - ಎಐಎಡಿಎಂಕೆ ಸೇರಿ ಸರ್ಕಾರ ರಚಿಸಲಿದೆ ಎಂಬ ವದಂತಿ ಹರಡಿತ್ತು. ಆದರೆ ಸ್ಟಾಲಿನ್ ಈ ವದಂತಿಯನ್ನು ತಳ್ಳಿಹಾಕಿದ್ದು ಸರ್ಕಾರ ರಚನೆಯ ಕಸರತ್ತಿನಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.
ಚುನಾವಣೆಯಲ್ಲಿ ಡಿಎಂಕೆ 59 ಸ್ಥಾನ, ಎಐಎಡಿಎಂಕೆ 47, ಟಿವಿಕೆ 108, ಪಿಎಂಕೆ 4, ಕಾಂಗ್ರೆಸ್ 5, ಐಯುಎಂಎಲ್ 2, ಸಿಪಿಐ 2, ಸಿಪಿಎಂ 2 ಸ್ಥಾನಗಳನ್ನು ಗೆದ್ದರೆ, ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ ಒಂದು ಸ್ಥಾನ ಗೆದ್ದಿವೆ.
06-05-26 07:41 pm
HK News Desk
ಗದಗದತ್ತ ಹೊರಟಿದ್ದ ಪಲ್ಲಕ್ಕಿ ಬಸ್ಸಿಗೆ ಬೆಂಕಿ ; ನಡು...
05-05-26 03:52 pm
ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ; ಶಾಸಕ ಡಿಎನ್ ಜೀ...
05-05-26 03:37 pm
ಚಿಕ್ಕಮಗಳೂರು ; ಕೆರೆಯಲ್ಲಿ ಬಾತುಕೋಳಿ ಹಿಡಿಯಲು ಹೋಗಿ...
04-05-26 10:33 pm
ಶೃಂಗೇರಿ ; ದಿಢೀರ್ ಮಾಜಿಯಾದ ಕಾಂಗ್ರೆಸ್ ಶಾಸಕ ರಾಜೇಗ...
04-05-26 07:16 pm
07-05-26 12:52 pm
HK News Staffer
ವಿಜಯ್ ಪಕ್ಷಕ್ಕೆ ಕಾಂಗ್ರೆಸ್ ಬೇಷರತ್ ಬೆಂಬಲ ; ಲೋಕಸಭ...
06-05-26 11:02 pm
ಸಾಮಾನ್ಯ ಆಟೋ ಚಾಲಕನನ್ನು ಶಾಸಕನಾಗಿಸಿದ 'ದಳಪತಿ' ; ಎ...
05-05-26 10:30 pm
ಎಲ್ಲರ ಲೆಕ್ಕ ತಲೆಕೆಳಗಾಗಿಸಿದ ದಳಪತಿ ; ಕರುಣಾನಿಧಿ ಹ...
05-05-26 10:27 pm
ಚುನಾವಣೆಯಲ್ಲಿ ನಾನು ಸೋತಿಲ್ಲ, ಯಾವುದೇ ಕಾರಣಕ್ಕೂ ರಾ...
05-05-26 08:34 pm
05-05-26 11:01 pm
HK News Desk
ಕೋರ್ಟ್ ಜಟಾಪಟಿ ಬಳಿಕ ಉಳ್ಳಾಲ ದರ್ಗಾ ಆಡಳಿತ ಸಮಿತಿಗೆ...
02-05-26 11:05 pm
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
07-05-26 12:17 pm
HK News Staffer
ಬೆಂಗಳೂರಿನ ಇಸ್ರೋ ಕ್ಯಾಂಪಸ್ನಲ್ಲಿ ಭದ್ರತಾ ಆತಂಕ ;...
06-05-26 11:06 pm
Karkala, Fraud: ಆಯುರ್ವೇದ ಔಷದಿ ಸೇವಿಸಿದರೆ ಕ್ಯಾನ...
06-05-26 01:53 pm
ಯಾದಗಿರಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯ ಪ್ರೇಮ...
06-05-26 11:54 am
ಕಾರಿಗೆ ಬೆಂಕಿಯಿಟ್ಟು ಪ್ರಿಯತಮೆ ಕನ್ನಡ ಉಪನ್ಯಾಸಕಿಯನ...
06-05-26 10:44 am