ಬ್ರೇಕಿಂಗ್ ನ್ಯೂಸ್
27-04-26 02:48 pm HK News Staffer ದೇಶ - ವಿದೇಶ
ವಾಷಿಂಗ್ಟನ್, ಎಪ್ರಿಲ್ 27: ಅಮೆರಿಕದ ಶಕ್ತಿಕೇಂದ್ರ ವೈಟ್ ಹೌಸ್ ವರದಿಗಾರರ ಒಕ್ಕೂಟದ ಔತಣಕೂಟ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ ಆರೋಪದಲ್ಲಿ ಬಂಧನಕ್ಕೀಡಾದ ಕೋಲ್ ಅಲೆನ್ ಎಂಬ ವ್ಯಕ್ತಿ ಘಟನೆಗೂ ಮುನ್ನ ತನ್ನ ಕುಟುಂಬ ಸದಸ್ಯರಿಗೆ ದಾಳಿಯ ಬಗ್ಗೆ ಪತ್ರವನ್ನು ಕಳುಹಿಸಿದ್ದಾನೆ ಎಂಬುದು ಬಯಲಾಗಿದೆ. ಈ ಬಗ್ಗೆ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಸಂದೇಶದಲ್ಲಿ ಅಲೆನ್ ತನ್ನ ಕೃತ್ಯವನ್ನು “ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್” ಎಂದು ಕರೆದುಕೊಂಡಿದ್ದು, ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿರುವ ತನ್ನ ಯೋಜನೆಯನ್ನು ವಿವರಿಸಿದ್ದಾನೆ. ಆಡಳಿತಾಂಗದ ಪ್ರಮುಖ ಅಧಿಕಾರಿಗಳು (ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಹೊರತುಪಡಿಸಿ) ತನ್ನ ಗುರಿಗಳಾಗಿದ್ದಾರೆ. ಉನ್ನತ ಹುದ್ದೆಯಿಂದ ಕೆಳಗಿನ ವರೆಗೆ ಆದ್ಯತೆಯಲ್ಲಿ ದಾಳಿ ಮಾಡಲು ಯೋಜಿಸಿದ್ದೇನೆ ಎಂದು ಬರೆದಿದ್ದಾನೆ. ಗುಂಡಿನ ದಾಳಿ ನಡೆಯುವ ಸುಮಾರು 10 ನಿಮಿಷಗಳ ಮೊದಲು ತನ್ನ ಕುಟುಂಬಕ್ಕೆ ಈ ಮೆಸೇಜ್ ಕಳುಹಿಸಿದ್ದಾನೆ ಎಂದು ಹೇಳಲಾಗಿದೆ.
ಅಲೆನ್ ಬರೆದಿರುವುದರಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ವಿರುದ್ಧ ಸ್ಪಷ್ಟ ಮತ್ತು ಹಿಂಸಾತ್ಮಕ ಉದ್ದೇಶ ವ್ಯಕ್ತವಾಗಿದೆ. ಪೀಡೋಫೈಲ್ ಒಬ್ಬ ಅತ್ಯಾಚಾರಿ ಮತ್ತು ದೇಶದ್ರೋಹಿ. ನನ್ನ ಕೈಗಳನ್ನು ಅವನ ಅಪರಾಧಗಳಿಂದ ಕಲುಷಿತಗೊಳಿಸಲು ನಾನು ಸಮ್ಮತಿಸುವುದಿಲ್ಲ ಎಂದು ಅಧ್ಯಕ್ಷ ಟ್ರಂಪ್ ಉಲ್ಲೇಖಿಸಿ ಅವನು ಬರೆದಿದ್ದಾನೆ.
ತಾನು ಆಯ್ಕೆ ಮಾಡಿಕೊಂಡ ತಂತ್ರಗಳನ್ನೂ ವಿವರಿಸಿದ್ದು, ಹಾನಿಯನ್ನು ಕಡಿಮೆ ಮಾಡಲು, ಸ್ಲಗ್ಗಳ ಬದಲು ಬಕ್ಶಾಟ್ ಬಳಸುತ್ತೇನೆ (ಗೋಡೆಗಳ ಮೂಲಕ ಸೀಮಿತ ಪ್ರವೇಶ) ಎಂದು ಹೇಳಿದ್ದಾನೆ. ಜೊತೆಗೆ, ಅಗತ್ಯವಿದ್ದರೆ ಹೆಚ್ಚಿನ ಹಿಂಸಾಚಾರದ ಸಾಧ್ಯತೆಯನ್ನೂ ಹೇಳಿಕೊಂಡಿದ್ದಾನೆ.
“ಅವಶ್ಯಕವೆನಿಸಿದರೆ ಗುರಿಗಳನ್ನು ತಲುಪಲು ಇಲ್ಲಿರುವ ಬಹುತೇಕ ಎಲ್ಲರನ್ನೂ ಎದುರಿಸುತ್ತೇನೆ. ಯಾಕೆಂದರೆ ಅವರು ಪೀಡೋಫೈಲ್, ಅತ್ಯಾಚಾರಿ ಮತ್ತು ದೇಶದ್ರೋಹಿಯ ಭಾಷಣಕ್ಕೆ ಸಹಭಾಗಿಗಳಾಗಿದ್ದಾರೆ. ಆದರೆ ಅದು ಅಷ್ಟರ ಮಟ್ಟಿಗೆ ಹೋಗಬಾರದು ಎಂದು ನಾನು ಆಶಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ.
ಘೋಷಣಾ ಪತ್ರದಲ್ಲಿ ಅಲೆನ್ ತನ್ನ ಕ್ರೈಸ್ತ ನಂಬಿಕೆಗಳ ಬಗ್ಗೆ ಹಲವಾರು ಉಲ್ಲೇಖಗಳನ್ನು ಮಾಡಿದ್ದಾನೆ ಮತ್ತು ಅವುಗಳನ್ನು ವಿಮರ್ಶೆಗೆ ಪ್ರತಿಯಾಗಿ ವಿವರಿಸಿದ್ದಾನೆ. ಅವನು ಅಮೆರಿಕದ ವೆನಿಜುವೆಲಾದ ಮದ್ದಿನ ವ್ಯವಹಾರಗಳ ವಿರುದ್ಧದ ಕ್ರಮಗಳು ಮತ್ತು ವಲಸೆ ನಿಯಂತ್ರಣ ನೀತಿಗಳಂತಹ ವಿವಾದಾತ್ಮಕ ರಾಜಕೀಯ ವಿಷಯಗಳನ್ನೂ ಉಲ್ಲೇಖಿಸಿದ್ದಾನೆ. ಆರೋಪಿ ಅಲೆನ್ ಕ್ಯಾಲಿಫೋರ್ನಿಯಾದಿಂದ ರೈಲಿನಲ್ಲಿ ಪ್ರಯಾಣಿಸಿ, ಕಾರ್ಯಕ್ರಮ ನಡೆದ ವಾಷಿಂಗ್ಟನ್ ಹೊಟೇಲ್ ನಲ್ಲಿ ಕೆಲವು ದಿನಗಳ ಹಿಂದೆ ಅತಿಥಿಯಾಗಿ ಉಳಿದುಕೊಂಡಿದ್ದ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm