ಬ್ರೇಕಿಂಗ್ ನ್ಯೂಸ್
22-04-26 09:10 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 22: ಭಾರತಕ್ಕೆ ತೈಲ ಹೊತ್ತು ಬರುತ್ತಿದ್ದ ಮತ್ತೆ ಮೂರು ಹಡಗುಗಳನ್ನು ಇರಾನ್ ವಶಕ್ಕೆ ಪಡೆದಿದೆ. ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (ಐಆರ್ ಜಿಸಿ) ಹಾರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಬರುತ್ತಿದ್ದ ಹಡಗಿನ ಮೇಲೆ ದಾಳಿ ಮಾಡಿ ವಶಪಡಿಸಿದೆ. ಐಆರ್ ಜಿಸಿ ಅವುಗಳನ್ನು ಇರಾನ್ ಜಲಗಡಿಯೊಳಕ್ಕೆ ಕರೆದೊಯ್ದಿದೆ ಎಂದು ಇರಾನ್ ಟಿವಿ ಮಾಧ್ಯಮಗಳು ವರದಿ ಮಾಡಿವೆ.
ಎರಡು ಹಡಗುಗಳು ಭಾರತದ ಗುಜರಾತಿನ ಮುಂದ್ರಾ ಬಂದರಿಗೆ ಬರುತ್ತಿತ್ತು. ಪನಾಮಾ ಧ್ವಜ ಹೊತ್ತಿದ್ದ ಎಂಎಸ್ ಸಿ ಫ್ರಾನ್ಸೆಸ್ಕಾ ಮತ್ತು ಲೈಬೀರಿಯಾ ಧ್ವಜ ಹೊಂದಿದ್ದ ಎಪಾಮಿನೋಡ್ಸ್ ಎಂಬ ಹೆಸರಿನ ಹಡಗುಗಳನ್ನು ಐಆರ್ ಜಿಸಿ ವಶಕ್ಕೆ ಪಡೆದಿದೆ. ಭಾರತದತ್ತ ಬರುತ್ತಿದ್ದ ಮತ್ತೊಂದು ಗ್ರೀಕ್ ಮೂಲದ ಯುಫೋರಿಯಾ ಹೆಸರಿನ ಹಡಗನ್ನೂ ಇರಾನ್ ವಶಕ್ಕೆ ಪಡೆದಿದೆ.
ಹಡಗಿನ ಮೇಲೆ ಐಆರ್ಜಿಸಿ ಗನ್ಬೋಟ್ ನಿಂದ ದಾಳಿ ನಡೆಸಿತ್ತು. ಗುಂಡು ಹಾರಿಸುವ ಮೊದಲು IRGC ಯಾವುದೇ ಎಚ್ಚರಿಕೆ ನೀಡಲಿಲ್ಲ. ಯುಕೆ ಏಜೆನ್ಸಿಯ ಪ್ರಕಾರ, ಯಾವುದೇ ಸಾವು- ನೋವು ಸಂಭವಿಸಿಲ್ಲ. ಏತನ್ಮಧ್ಯೆ, ಹಡಗು ಇರಾನಿನ ಸಶಸ್ತ್ರ ಪಡೆಗಳ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ನಂತರ ಗುಂಡು ಹಾರಿಸಲಾಗಿದೆ ಎಂದು ಇರಾನಿನ ಸುದ್ದಿ ಸಂಸ್ಥೆ ನೂರ್ ನ್ಯೂಸ್ ಹೇಳಿಕೊಂಡಿದೆ. ಫಾಸ್ಕ್ ನ್ಯೂಸ್ ಏಜೆನ್ಸಿ ಇದನ್ನು ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ನಿಯಂತ್ರಣವನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಇರಾನ್ನ ಪ್ರಯತ್ನ ಎಂದು ಬಣ್ಣಿಸಿದೆ.
ಕಳೆದ ವಾರ ಭಾರತದ ಜಗ್ ಆರ್ನವ್ ಮತ್ತು ಸನ್ಮಾರ್ ಹೆರಾಲ್ಡ್ ಎಂಬೆರಡು ಹಡಗುಗಳ ಮೇಲೆ ಇರಾನ್ ದಾಳಿ ಮಾಡಿತ್ತು. ಜಗ್ ಆರ್ನವ್ ಹಡಗು ಸೌದಿ ಅರೇಬಿಯಾದಿಂದ ಮತ್ತು ಸನ್ಮಾರ್ ಹೆರಾಲ್ಡ್ ಹಡಗು ಇರಾಕಿನಿಂದ ತೈಲ ಹೊತ್ತು ಬರುತ್ತಿತ್ತು. ಸ್ನೇಹಿತ ರಾಷ್ಟ್ರಗಳ ಮೇಲೆ ತಡೆ ಹೇರಲ್ಲ ಎಂಬ ಇರಾನ್ ಹೇಳಿಕೆಯ ನಡುವೆಯೂ ಭಾರತದ ಹಡಗುಗಳ ಮೇಲೆ ದಾಳಿ ನಡೆಸಿರುವುದು ಪರಿಸ್ಥಿತಿ ಗಂಭೀರತೆ ಸೃಷ್ಟಿಸಿದೆ.
ಇದೇ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆರಡು ವಾರಗಳ ಕಾಲ ಕದನ ವಿರಾಮ ಘೋಷಣೆ ಮಾಡಿದೆ. ಆದರೆ ಹೊರ್ಮುಜ್ ಜಲಸಂಧಿಯ ಮೇಲಿನ ಹಿಡಿತವನ್ನು ಸಡಿಲಿಸುವುದಿಲ್ಲ ಎಂದು ಹೇಳಿದೆ. ಟ್ರಂಪ್ ಕದನ ವಿರಾಮ ಘೋಷಣೆ ಬೆನ್ನಲ್ಲೇ ಭಾರತದತ್ತ ತೆರಳುತ್ತಿದ್ದ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿ ವಶಕ್ಕೆ ಪಡೆದಿದೆ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm