ಬ್ರೇಕಿಂಗ್ ನ್ಯೂಸ್
14-04-26 10:48 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 14: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಸೇನಾ ದಾಳಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಇರಾನ್ ಇದೀಗ ತನ್ನ ನೆರೆಹೊರೆಯ ಐದು ಅರಬ್ ರಾಷ್ಟ್ರಗಳಿಂದ ಪರಿಹಾರ ಕೊಡುವಂತೆ ಆಗ್ರಹಿಸಿದೆ.
ಭಾರೀ ನಷ್ಟದ ಕಾರಣ ಇರಾನ್ ತನ್ನ ನೆರೆಯ ಐದು ಅರಬ್ ರಾಷ್ಟ್ರಗಳಿಂದ ಪರಿಹಾರ ಕೋರಿದ್ದು, ತಮ್ಮ ಪ್ರದೇಶಗಳನ್ನು ತನ್ನ ದೇಶದ ವಿರುದ್ಧದ ದಾಳಿಗಳಿಗೆ ಬಳಸಲು ಅವಕಾಶ ನೀಡುವ ಮೂಲಕ "ಅಮೆರಿಕ-ಇಸ್ರೇಲಿ ಆಕ್ರಮಣ"ಕ್ಕೆ ಅನುವು ಮಾಡಿಕೊಟ್ಟಿದೆ ಎಂಬುದಾಗಿ ಇರಾನ್ ಮಾಧ್ಯಮ ಪ್ರೆಸ್ ಟಿವಿ ವರದಿ ಮಾಡಿದೆ.
ಇರಾನ್ನ ರಾಯಭಾರಿ ಮತ್ತು ಖಾಯಂ ಪ್ರತಿನಿಧಿ ಅಮೀರ್- ಸಯೀದ್ ಇರವಾನಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಭದ್ರತಾ ಮಂಡಳಿಯ ಅಧ್ಯಕ್ಷ ಜಮಾಲ್ ಫೇರ್ಸ್ ಅಲ್ರೋವೈ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಬಹ್ರೇನ್, ಸೌದಿ ಅರೇಬಿಯಾ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಜೋರ್ಡಾನ್ ಮಾಡಿದ ಪರಿಹಾರದ ಬೇಡಿಕೆಗಳನ್ನು ತಿರಸ್ಕರಿಸಿದರು. ಪ್ರಸ್ತುತ ಸಂದರ್ಭಗಳಲ್ಲಿ, ಈ ಐದು ದೇಶಗಳು "ಅಮೆರಿಕ-ಇಸ್ರೇಲ್ ಆಕ್ರಮಣಕ್ಕೆ ಅನುಕೂಲ ಮಾಡಿಕೊಟ್ಟ ಕಾರಣ ವಿಶ್ವಸಂಸ್ಥೆ ಚಾರ್ಟರ್ನ 51ನೇ ವಿಧಿಯನ್ನು (ಸ್ವ-ರಕ್ಷಣೆಯ ಹಕ್ಕು) ಕಾನೂನುಬದ್ಧವಾಗಿ ಅನ್ವಯಿಸಲು ಸಾಧ್ಯವಿಲ್ಲ" ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಟೆಹ್ರಾನ್ "ಆಕ್ರಮಣಶೀಲತೆಯ ಬಲಿಪಶು" ಎಂದು ಪ್ರತಿಪಾದಿಸಿಕೊಂಡಿದ್ದು, ಅದರ ಅಂತರ್ಗತ ಸ್ವ-ರಕ್ಷಣೆಯ ಹಕ್ಕನ್ನು ಚಲಾಯಿಸುತ್ತಿದೆ ಎಂದು ರಾಯಭಾರಿ ಪತ್ರದಲ್ಲಿ ಬರೆದಿದ್ದಾರೆ.
ಪತ್ರದ ಪ್ರಕಾರ, ಕೆಲವು ಸಂದರ್ಭಗಳಲ್ಲಿ, "ಇರಾನ್ನೊಳಗಿನ ನಾಗರಿಕ ಗುರಿಗಳ ವಿರುದ್ಧ ಕಾನೂನುಬಾಹಿರ ಸಶಸ್ತ್ರ ದಾಳಿಗಳನ್ನು ಆ ರಾಷ್ಟ್ರಗಳು ನೇರವಾಗಿ ನಡೆಸಿವೆ" ಎಂದು ಹೇಳಿದೆ. ಇರಾನ್ನ ಮಿಷನ್ ಐದು ದೇಶಗಳು ತಮ್ಮ ಪ್ರದೇಶಗಳನ್ನು ದಾಳಿಗಳಿಗೆ ಬಳಸಲು ಅವಕಾಶ ನೀಡುವ ಮೂಲಕ ಮತ್ತು ಕೆಲವು ಸಂದರ್ಭಗಳಲ್ಲಿ, ಅಂತಹ ಕ್ರಮಗಳಲ್ಲಿ ನೇರವಾಗಿ ಭಾಗವಹಿಸುವ ಮೂಲಕ "ಅಂತರಾಷ್ಟ್ರೀಯವಾಗಿ ಅಪರಾಧ ಕೃತ್ಯಗಳನ್ನು" ಎಸಗಿವೆ. ತಕ್ಷಣವೇ ಆ ಕೃತ್ಯಗಳನ್ನು ನಿಲ್ಲಿಸುವಂತೆ ಕರೆ ನೀಡಿದೆ.
ಈ ರೀತಿಯ ನೆರವು ಅಂತರಾಷ್ಟ್ರೀಯ ನೀತಿಗಳ ಉಲ್ಲಂಘನೆಯಾಗಿದ್ದು, ತಪ್ಪು ಕೃತ್ಯಗಳ ಪರಿಣಾಮವಾಗಿ ಉಂಟಾದ ಎಲ್ಲಾ ವಸ್ತು ಮತ್ತು ನೈತಿಕ ಹಾನಿಗಳಿಗೆ ಪರಿಹಾರವನ್ನು ಒಳಗೊಂಡಂತೆ ಇಸ್ಲಾಮಿಕ್ ಗಣರಾಜ್ಯ ಇರಾನ್ಗೆ ಸಂಪೂರ್ಣ ಪರಿಹಾರವನ್ನು ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm