ಬ್ರೇಕಿಂಗ್ ನ್ಯೂಸ್
09-04-26 07:43 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 9: ಮಧ್ಯಪ್ರಾಚ್ಯದಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ಇರಾನ್ -ಅಮೆರಿಕ ಸಮ್ಮತಿಸಿದರೂ ಹರ್ಮುಜ್ ಜಲಸಂಧಿಯ ಬಿಕ್ಕಟ್ಟು ಏಷ್ಯನ್ ದೇಶಗಳಿಗೆ ದೊಡ್ಡದಾಗಿ ತಟ್ಟುವ ಭೀತಿ ಉಂಟಾಗಿದೆ. ಜಲಸಂಧಿಯಲ್ಲಿ ಹಾದು ಹೋಗುವ ಪ್ರತಿ ನೌಕೆಗೆ 2 ದಶಲಕ್ಷ ಡಾಲರ್ (ಸುಮಾರು 18 ಕೋಟಿ ರೂ.) ಟೋಲ್ ವಿಧಿಸುವುದಾಗಿ ಇರಾನ್ ಘೋಷಿಸಿದೆ. ಇದೇ ವೇಳೆ, ಅಮೆರಿಕವೂ ಸುಂಕದಲ್ಲಿ ಪಾಲು ಕೇಳಿದ್ದು ಯುದ್ಧ ನಷ್ಟ ಭರಿಸಿಕೊಳ್ಳಲು ಮುಂದಾಗಿದೆ.
ಯುದ್ಧದ ಸಮಯದಲ್ಲಿ ಭಾರತ ಸೇರಿದಂತೆ ಕೆಲವೇ ಮಿತ್ರ ದೇಶಗಳನ್ನು ಹೊರತುಪಡಿಸಿ ಹರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿತ್ತು. ಆದರೆ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳಿಗೆ ಇದೇ ದೊಡ್ಡ ತಲೆನೋವಾಗಿತ್ತು. ಆನಂತರ, ಅಮೆರಿಕ ಮುಂದಿಟ್ಟ ಒಪ್ಪಂದದ ಷರತ್ತಿನಂತೆ ಹರ್ಮುಜ್ ಜಲಸಂಧಿಯನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸಲು ಇರಾನ್ ಒಪ್ಪಿದೆ. ಆದರೆ, ಟೋಲ್ ವಿಧಿಸುವ ಮೂಲಕ ಹಣ ಸಂಗ್ರಹಿಸಲಿದ್ದು, ಯುದ್ಧದಿಂದ ಉಂಟಾದ ನಷ್ಟ ಭರ್ತಿಗೆ ಇದು ಅನಿವಾರ್ಯ ಎಂದು ಹೇಳಿಕೊಂಡಿದೆ.
ಇರಾನ್ ಟೋಲ್ ಪ್ರಸ್ತಾಪಕ್ಕೆ ಭಾರತ, ಒಮಾನ್ ಸೇರಿದಂತೆ ಹೆಚ್ಚಿನ ದೇಶಗಳಿಂದ ವಿರೋಧವೂ ವ್ಯಕ್ತವಾಗಿದೆ. ಎಲ್ಲ ದೇಶಗಳಿಗೆ ಟೋಲ್ ವಿಧಿಸಿದರೆ ಭಾರತಕ್ಕೆ ಮಾತ್ರ ದುಬಾರಿಯಾಗಿ ಪರಿಣಮಿಸಲಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಟೋಲ್ ಪ್ರಸ್ತಾಪಕ್ಕೆ ಪರೋಕ್ಷವಾಗಿ ಒಪ್ಪಿಗೆ ಸೂಚಿಸಿದ್ದು ಜೊತೆಗೆ ತನಗೂ ಪಾಲು ನೀಡುವಂತೆ ಕೇಳಿದ್ದಾರೆ.
ದಿನಕ್ಕೆ 200 ಕೋಟಿ ಹೊರೆ
ಹರ್ಮುಜ್ ವಿಷಯದಲ್ಲಿ ಇರಾನ್ ತನ್ನ ನಿಯಮವನ್ನು ಎಲ್ಲಾ ದೇಶಗಳಿಗೂ ಅನ್ವಯಿಸಿದರೆ, ಭಾರತಕ್ಕೆ ತೈಲ ಆಮದು ದುಬಾರಿಯಾಗಲಿದೆ. ಹರ್ಮುಜ್ ಮೂಲಕ ಇತರೆ ಸರಕುಗಳ ಸಾಗಣೆ ವೆಚ್ಚವೂ ದುಪ್ಪಟ್ಟಾಗಲಿದೆ. ಅಂದಾಜು ಭಾರತಕ್ಕೆ 200 ಕೋಟಿ ರೂ. ಹೊರೆಯಾಗಲಿದೆ. ಭಾರತದ ಶೇ. 50ರಷ್ಟು ಕಚ್ಚಾತೈಲ, 80% ಎಲ್ಪಿಜಿ ಹರ್ಮುಜ್ ಮೂಲಕವೇ ಬರುತ್ತಿದೆ. ನಿತ್ಯ 10-12 ಟ್ಯಾಂಕರ್ಗಳು ಜಲಸಂಧಿಯಿಂದ ಸಾಗುವುದರಿಂದ ದಿನಕ್ಕೆ ಪ್ರತಿ ನೌಕೆಗೆ 18 ಕೋಟಿ ರೂ.ನಂತೆ 180-200 ಕೋಟಿ ರೂ.ಟೋಲ್ ಭಾರ ಬೀಳಲಿದೆ. ಸಾಗಣೆ ವೆಚ್ಚದಲ್ಲಿ ಏರಿಕೆಯಿಂದಾಗಿ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಬೆಲೆಯ ಹೊರೆಯನ್ನು ಜನರ ಮೇಲೆ ಹೊರಿಸುವ ಸಾಧ್ಯತೆಯಿದೆ.
30-05-26 06:45 pm
HK News Staffer
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ! ವಿಧಾನಸೌಧ ಮೆಟ...
29-05-26 10:41 pm
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
30-05-26 09:52 pm
HK News Desk
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
Master Travels Bus, Mangalore: ಕಾವೂರಿನಲ್ಲಿ ಬಸ...
30-05-26 02:10 pm
ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮ...
28-05-26 02:45 pm
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am