ಬ್ರೇಕಿಂಗ್ ನ್ಯೂಸ್
26-03-26 09:44 pm HK News Staffer ದೇಶ - ವಿದೇಶ
ಶಾರ್ಜಾ, ಮಾರ್ಚ್ 26: ಯುದ್ಧ ವಿರಾಮಕ್ಕಾಗಿ ಅಮೆರಿಕ ಮುಂದಿಟ್ಟಿದ್ದ 15 ಅಂಶಗಳ ಷರತ್ತನ್ನು ಇರಾನ್ ನಿರಾಕರಿಸಿದ್ದು ಗಲ್ಫ್ ದೇಶಗಳನ್ನು ಮತ್ತಷ್ಟು ಆತಂಕಕ್ಕೆ ನೂಕಿದೆ. ಇದರ ಪರಿಣಾಮ ಇರಾನ್ ಒಂದನ್ನು ಬಿಟ್ಟು ಉಳಿದೆಲ್ಲ ಗಲ್ಫ್ ದೇಶಗಳು ಒಂದಾಗಿದ್ದು, ವಾಯುಪ್ರದೇಶ ನಿರ್ಬಂಧ ಕಾರಣ ಸಿಕ್ಕಿಬಿದ್ದಿರುವ ವಿದೇಶಿ ಪ್ರವಾಸಿಗರಿಗೆ ತಮ್ಮ ನಾಡಿಗೆ ತೆರಳಲು ವ್ಯವಸ್ಥೆ ಕಲ್ಪಿಸಲು ತುರ್ತು ಒಪ್ಪಂದಕ್ಕೆ ಬಂದಿವೆ.
ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಒಮಾನ್, ಬಹ್ರೈನ್, ಕತಾರ್, ಕುವೈತ್ ಮತ್ತು ಇರಾಕ್ ದೇಶಗಳು ತುರ್ತಾಗಿ ಒಪ್ಪಂದಕ್ಕೆ ಬಂದಿದ್ದು, ಸಿಕ್ಕಿಬಿದ್ದ ಪ್ರವಾಸಿಗರನ್ನು ಕಳುಹಿಸುವುದಕ್ಕಾಗಿ ವ್ಯವಸ್ಥೆ ಮಾಡಲು ಮುಂದಾಗಿದೆ. ವಾಯುಪ್ರದೇಶ ನಿರ್ಬಂಧ ಕಾರಣ ವಿಮಾನಗಳು ತೆರಳದೆ ಬೇರೆ ಬೇರೆ ದೇಶಗಳಿಂದ ಬಂದಿರುವ ಜನರು ಆಯಾ ಭಾಗದಲ್ಲೇ ಸಿಕ್ಕಿಬಿದ್ದಿದ್ದಾರೆ. ಅವರನ್ನು ಆಯಾ ದೇಶಗಳಿಗೆ ಕಳುಹಿಸಲು ತುರ್ತು ವ್ಯವಸ್ಥೆ ಮಾಡುವುದಕ್ಕಾಗಿ ಎಲ್ಲ ದೇಶಗಳು ಒಪ್ಪಂದಕ್ಕೆ ಬಂದಿವೆ.
ಅಮೆರಿಕ- ಇರಾನ್ ನಡುವಿನ ಉಲ್ಬಣಿಸುತ್ತಿರುವ ಬಿಕ್ಕಟ್ಟಿನಿಂದ ಪಾರಾಗಲು ವ್ಯವಸ್ಥೆ ಕಂಡುಕೊಳ್ಳುವುದು, ಪರಸ್ಪರ ಸಹಕಾರದ ಭರವಸೆಯೊಂದಿಗೆ ಪ್ರಾದೇಶಿಕ ಉಲ್ಬಣ ಸ್ಥಿತಿ ಹೋಗಲಾಡಿಸಲು ಒಪ್ಪಂದಕ್ಕೆ ಬರಲಾಗಿದೆ. ಮಾನವೀಯ ನೆಲೆಯಲ್ಲಿ ಬೇರೆ ಬೇರೆ ದೇಶಗಳಿಂದ ಬಂದು ಗಲ್ಫ್ ರಾಷ್ಟ್ರಗಳಲ್ಲಿ ಸಿಕ್ಕಿಬಿದ್ದಿರುವ ಪ್ರವಾಸಿಗರನ್ನು ಕಳುಹಿಸಲು ವ್ಯವಸ್ಥೆ ಮಾಡುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ದುಬೈನಲ್ಲಿ ಸಾವಿರಾರು ಜನರು ಪ್ರವಾಸಿಗರಾಗಿ ಬಂದು ಸಿಕ್ಕಿಬಿದ್ದು ಅತಂತ್ರರಾಗಿರುವುದರಿಂದ ಅವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.
ವಿಮಾನ ವ್ಯವಸ್ಥೆ ಸರಿಹೋಗುವಲ್ಲಿ ವರೆಗೆ ಉಳಿದುಕೊಳ್ಳಲು ಜೋರ್ಡಾನ್ ಮತ್ತು ಒಮಾನ್ ನಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವುದು, ಒಪ್ಪಂದಕ್ಕೆ ಬಂದಿರುವ ಗಲ್ಫ್ ದೇಶಗಳು ಈ ಎರಡು ದೇಶಗಳಿಗೆ ಪ್ರವಾಸಿಗರನ್ನು ಕಳುಹಿಸಿ ಕೊಡುವುದು, ಅಮ್ಮನ್ ಮತ್ತು ಮಸ್ಕತ್ ನಡುವೆ ವಿಮಾನ ಸಂಚಾರಕ್ಕೆ ವ್ಯವಸ್ಥೆ ಮಾಡುವುದು, ಅಗತ್ಯ ಇರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಊಟ, ವಸತಿ ಸಹಿತ ಜೋರ್ಡಾನ್, ಒಮಾನಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದಕ್ಕೆ ನಿರ್ಣಯಿಸಲಾಗಿದೆ. ಕುವೈತ್ ಏರ್ಪೋರ್ಟ್ ಮತ್ತು ಬಹ್ರೇನ್ ಏರ್ಪೋರ್ಟ್ ಸ್ಥಗಿತ ಆಗಿರುವುದರಿಂದ ಅಲ್ಲಿಂದ ದಮ್ಮಾಮ್ ಮತ್ತು ಸೌದಿ ಅರೇಬಿಯಾಕ್ಕೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ. ಕತಾರ್ ಒಂದರಲ್ಲೇ ಎಂಟು ಸಾವಿರದಷ್ಟು ಪ್ರವಾಸಿಗರು ಸಿಕ್ಕಿಬಿದ್ದಿದ್ದು ಯಾವ ಕಡೆಗೂ ಹೋಗಲಾಗದೆ ಆತಂಕದಲ್ಲಿದ್ದಾರೆ.
ಗಲ್ಫ್ ದೇಶಗಳ ಪೈಕಿ ಅತಿ ದೊಡ್ಡದಾಗಿರುವ ಸೌದಿ ಅರೇಬಿಯಾ ಈ ತುರ್ತು ಒಪ್ಪಂದಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದು, ತನ್ನ ದೇಶದಲ್ಲಿ ವಾಯು ಪ್ರದೇಶವನ್ನು ಆಂಶಿಕವಾಗಿ ತೆರೆದಿಟ್ಟಿದೆ. ಹೊರ ದೇಶಗಳಿಗೆ ವಿಮಾನ ಸಂಚಾರಕ್ಕೂ ಅವಕಾಶ ನೀಡಿದೆ. ಹೀಗಾಗಿ ಪಕ್ಕದ ದೇಶಗಳಿಂದ ಬರುವ ಪ್ರಯಾಣಿಕರಿಗೆ ತನ್ನ ಏರ್ಪೋರ್ಟ್ ನಿಂದ ತೆರಳಲು ವೀಸಾ ಒದಗಿಸಿಕೊಟ್ಟು ವ್ಯವಸ್ಥೆಯನ್ನೂ ಮಾಡುತ್ತಿದೆ. ಯುಎಇ ಕೂಡ ತನ್ನ ವಾಯು ಪ್ರದೇಶವನ್ನು ಆಂಶಿಕವಾಗಿ ತೆರೆದಿಟ್ಟಿದ್ದು, ಕೆಲವು ದೇಶಗಳಿಗೆ ಮಾತ್ರ ವಿಮಾನ ಸಂಚಾರಕ್ಕೆ ಅವಕಾಶ ನೀಡಿದೆ. ಗಲ್ಫ್ ಯುದ್ಧದ ಪರಿಣಾಮ ದುಬೈನಂತಹ ಪ್ರವಾಸಿಗರನ್ನೇ ನೆಚ್ಚಿಕೊಂಡ ದೇಶಗಳು ದೊಡ್ಡ ಮಟ್ಟದ ನಷ್ಟಕ್ಕೆ ಸಿಲುಕಿದೆ.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
14-07-26 07:55 pm
HK News Staffer
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
14-07-26 09:13 pm
HK News Staffer
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm