ಬ್ರೇಕಿಂಗ್ ನ್ಯೂಸ್
26-03-26 09:44 pm HK News Staffer ದೇಶ - ವಿದೇಶ
ಶಾರ್ಜಾ, ಮಾರ್ಚ್ 26: ಯುದ್ಧ ವಿರಾಮಕ್ಕಾಗಿ ಅಮೆರಿಕ ಮುಂದಿಟ್ಟಿದ್ದ 15 ಅಂಶಗಳ ಷರತ್ತನ್ನು ಇರಾನ್ ನಿರಾಕರಿಸಿದ್ದು ಗಲ್ಫ್ ದೇಶಗಳನ್ನು ಮತ್ತಷ್ಟು ಆತಂಕಕ್ಕೆ ನೂಕಿದೆ. ಇದರ ಪರಿಣಾಮ ಇರಾನ್ ಒಂದನ್ನು ಬಿಟ್ಟು ಉಳಿದೆಲ್ಲ ಗಲ್ಫ್ ದೇಶಗಳು ಒಂದಾಗಿದ್ದು, ವಾಯುಪ್ರದೇಶ ನಿರ್ಬಂಧ ಕಾರಣ ಸಿಕ್ಕಿಬಿದ್ದಿರುವ ವಿದೇಶಿ ಪ್ರವಾಸಿಗರಿಗೆ ತಮ್ಮ ನಾಡಿಗೆ ತೆರಳಲು ವ್ಯವಸ್ಥೆ ಕಲ್ಪಿಸಲು ತುರ್ತು ಒಪ್ಪಂದಕ್ಕೆ ಬಂದಿವೆ.
ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಒಮಾನ್, ಬಹ್ರೈನ್, ಕತಾರ್, ಕುವೈತ್ ಮತ್ತು ಇರಾಕ್ ದೇಶಗಳು ತುರ್ತಾಗಿ ಒಪ್ಪಂದಕ್ಕೆ ಬಂದಿದ್ದು, ಸಿಕ್ಕಿಬಿದ್ದ ಪ್ರವಾಸಿಗರನ್ನು ಕಳುಹಿಸುವುದಕ್ಕಾಗಿ ವ್ಯವಸ್ಥೆ ಮಾಡಲು ಮುಂದಾಗಿದೆ. ವಾಯುಪ್ರದೇಶ ನಿರ್ಬಂಧ ಕಾರಣ ವಿಮಾನಗಳು ತೆರಳದೆ ಬೇರೆ ಬೇರೆ ದೇಶಗಳಿಂದ ಬಂದಿರುವ ಜನರು ಆಯಾ ಭಾಗದಲ್ಲೇ ಸಿಕ್ಕಿಬಿದ್ದಿದ್ದಾರೆ. ಅವರನ್ನು ಆಯಾ ದೇಶಗಳಿಗೆ ಕಳುಹಿಸಲು ತುರ್ತು ವ್ಯವಸ್ಥೆ ಮಾಡುವುದಕ್ಕಾಗಿ ಎಲ್ಲ ದೇಶಗಳು ಒಪ್ಪಂದಕ್ಕೆ ಬಂದಿವೆ.
ಅಮೆರಿಕ- ಇರಾನ್ ನಡುವಿನ ಉಲ್ಬಣಿಸುತ್ತಿರುವ ಬಿಕ್ಕಟ್ಟಿನಿಂದ ಪಾರಾಗಲು ವ್ಯವಸ್ಥೆ ಕಂಡುಕೊಳ್ಳುವುದು, ಪರಸ್ಪರ ಸಹಕಾರದ ಭರವಸೆಯೊಂದಿಗೆ ಪ್ರಾದೇಶಿಕ ಉಲ್ಬಣ ಸ್ಥಿತಿ ಹೋಗಲಾಡಿಸಲು ಒಪ್ಪಂದಕ್ಕೆ ಬರಲಾಗಿದೆ. ಮಾನವೀಯ ನೆಲೆಯಲ್ಲಿ ಬೇರೆ ಬೇರೆ ದೇಶಗಳಿಂದ ಬಂದು ಗಲ್ಫ್ ರಾಷ್ಟ್ರಗಳಲ್ಲಿ ಸಿಕ್ಕಿಬಿದ್ದಿರುವ ಪ್ರವಾಸಿಗರನ್ನು ಕಳುಹಿಸಲು ವ್ಯವಸ್ಥೆ ಮಾಡುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ದುಬೈನಲ್ಲಿ ಸಾವಿರಾರು ಜನರು ಪ್ರವಾಸಿಗರಾಗಿ ಬಂದು ಸಿಕ್ಕಿಬಿದ್ದು ಅತಂತ್ರರಾಗಿರುವುದರಿಂದ ಅವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.
ವಿಮಾನ ವ್ಯವಸ್ಥೆ ಸರಿಹೋಗುವಲ್ಲಿ ವರೆಗೆ ಉಳಿದುಕೊಳ್ಳಲು ಜೋರ್ಡಾನ್ ಮತ್ತು ಒಮಾನ್ ನಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವುದು, ಒಪ್ಪಂದಕ್ಕೆ ಬಂದಿರುವ ಗಲ್ಫ್ ದೇಶಗಳು ಈ ಎರಡು ದೇಶಗಳಿಗೆ ಪ್ರವಾಸಿಗರನ್ನು ಕಳುಹಿಸಿ ಕೊಡುವುದು, ಅಮ್ಮನ್ ಮತ್ತು ಮಸ್ಕತ್ ನಡುವೆ ವಿಮಾನ ಸಂಚಾರಕ್ಕೆ ವ್ಯವಸ್ಥೆ ಮಾಡುವುದು, ಅಗತ್ಯ ಇರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಊಟ, ವಸತಿ ಸಹಿತ ಜೋರ್ಡಾನ್, ಒಮಾನಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದಕ್ಕೆ ನಿರ್ಣಯಿಸಲಾಗಿದೆ. ಕುವೈತ್ ಏರ್ಪೋರ್ಟ್ ಮತ್ತು ಬಹ್ರೇನ್ ಏರ್ಪೋರ್ಟ್ ಸ್ಥಗಿತ ಆಗಿರುವುದರಿಂದ ಅಲ್ಲಿಂದ ದಮ್ಮಾಮ್ ಮತ್ತು ಸೌದಿ ಅರೇಬಿಯಾಕ್ಕೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ. ಕತಾರ್ ಒಂದರಲ್ಲೇ ಎಂಟು ಸಾವಿರದಷ್ಟು ಪ್ರವಾಸಿಗರು ಸಿಕ್ಕಿಬಿದ್ದಿದ್ದು ಯಾವ ಕಡೆಗೂ ಹೋಗಲಾಗದೆ ಆತಂಕದಲ್ಲಿದ್ದಾರೆ.
ಗಲ್ಫ್ ದೇಶಗಳ ಪೈಕಿ ಅತಿ ದೊಡ್ಡದಾಗಿರುವ ಸೌದಿ ಅರೇಬಿಯಾ ಈ ತುರ್ತು ಒಪ್ಪಂದಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದು, ತನ್ನ ದೇಶದಲ್ಲಿ ವಾಯು ಪ್ರದೇಶವನ್ನು ಆಂಶಿಕವಾಗಿ ತೆರೆದಿಟ್ಟಿದೆ. ಹೊರ ದೇಶಗಳಿಗೆ ವಿಮಾನ ಸಂಚಾರಕ್ಕೂ ಅವಕಾಶ ನೀಡಿದೆ. ಹೀಗಾಗಿ ಪಕ್ಕದ ದೇಶಗಳಿಂದ ಬರುವ ಪ್ರಯಾಣಿಕರಿಗೆ ತನ್ನ ಏರ್ಪೋರ್ಟ್ ನಿಂದ ತೆರಳಲು ವೀಸಾ ಒದಗಿಸಿಕೊಟ್ಟು ವ್ಯವಸ್ಥೆಯನ್ನೂ ಮಾಡುತ್ತಿದೆ. ಯುಎಇ ಕೂಡ ತನ್ನ ವಾಯು ಪ್ರದೇಶವನ್ನು ಆಂಶಿಕವಾಗಿ ತೆರೆದಿಟ್ಟಿದ್ದು, ಕೆಲವು ದೇಶಗಳಿಗೆ ಮಾತ್ರ ವಿಮಾನ ಸಂಚಾರಕ್ಕೆ ಅವಕಾಶ ನೀಡಿದೆ. ಗಲ್ಫ್ ಯುದ್ಧದ ಪರಿಣಾಮ ದುಬೈನಂತಹ ಪ್ರವಾಸಿಗರನ್ನೇ ನೆಚ್ಚಿಕೊಂಡ ದೇಶಗಳು ದೊಡ್ಡ ಮಟ್ಟದ ನಷ್ಟಕ್ಕೆ ಸಿಲುಕಿದೆ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 11:40 am
HK News Staffer
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm