ಬ್ರೇಕಿಂಗ್ ನ್ಯೂಸ್
24-03-26 04:43 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 24: ಇರಾನ್ ಮೇಲಿನ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐದು ದಿನಗಳ ವಿರಾಮ ಘೋಷಿಸಿದ್ದರೂ, ಇರಾನ್- ಇಸ್ರೇಲ್ ಪರಸ್ಪರ ಸಂಘರ್ಷದಲ್ಲಿ ತೊಡಗಿದೆ. ಇಸ್ರೇಲ್ ಲೆಬನಾನ್ ಮತ್ತು ಇರಾನ್ ಮೇಲೆ ಮಿಸೈಲ್ ದಾಳಿ ನಡೆಸಿದ್ದರೆ, ಇರಾನ್ ಕೂಡ ಪ್ರತಿ ದಾಳಿ ನಡೆಸಿದೆ.
ಇಸ್ರೇಲ್ ಉತ್ತರ ಲೆಬನಾನ್ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದು, ಬಹಳಷ್ಟು ನಾಶ ಸಂಭವಿಸಿದೆ. ಇದಲ್ಲದೆ, ದಕ್ಷಿಣ ಲೆಬನಾನ್ ಮೇಲೂ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದು, ಅಲ್ಲಿನ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಿದೆ. ಅಲ್ಲದೆ, ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿರುವ ಐಆರ್ ಜಿಸಿ ಗುಪ್ತಚರ ವ್ಯವಸ್ಥೆಯ ಪ್ರಧಾನ ಕಚೇರಿ ಮತ್ತು ಗುಪ್ತಚರ ಸಚಿವಾಲಯದ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಕಡೆಯಿಂದ ಖಡಕ್ ತಿರುಗೇಟು ಬಂದಿದ್ದು, ಲೆಬನಾನ್, ಗಾಜಾ ಮೇಲೆ ದಾಳಿ ಮುಂದುವರಿಸಿದರೆ ಪರಿಣಾಮ ಗಂಭೀರ ಆಗಿರುತ್ತದೆ, ನಾವು ಉತ್ತರ ಇಸ್ರೇಲ್ ಮೇಲೆ ದೊಡ್ಡ ಮಟ್ಟದ ಮಿಸೈಲ್ ದಾಳಿ ನಡೆಸಿ ಮೂಲಸೌಕರ್ಯಗಳನ್ನು ನಾಶ ಪಡಿಸುತ್ತೇವೆ ಎಂದು ಐಆರ್ ಜಿಸಿ ಇರಾನ್ ನ್ಯೂಸ್ ಏಜನ್ಸಿಗೆ ತಿಳಿಸಿದೆ. ಅಲ್ಲದೆ, ಇಸ್ಲಾಮಿಕ್ ರೆವೊಲ್ಯುಶನರಿ ಗಾರ್ಡ್ ಕಾರ್ಪ್ಸ್ (ಐಆರ್ ಜಿಸಿ) ಇದರ ಹಿರಿಯ ಅಧಿಕಾರಿಯೊಬ್ಬರು ಅಮೆರಿಕಕ್ಕೂ ಎಚ್ಚರಿಕೆ ನೀಡಿದ್ದು, ಈಗಾಗಲೇ ಅಮೆರಿಕದ ಸ್ಥಿತಿ ಪ್ಯಾರಾಲೈಸ್ ಆಗಿದೆ. ಕೂಡಲೇ ಜಾಗ ಖಾಲಿ ಮಾಡದಿದ್ದರೆ ಅರಬ್ಬಿ ಸಮುದ್ರದಲ್ಲಿರುವ ಅದರ ಹಡಗುಗಳನ್ನು ಅಲ್ಲಿಯೇ ಮುಳುಗಿಸುತ್ತೇವೆ ಎಂದಿದ್ದಾರೆ.
ಇರಾನ್ ವಿದ್ಯುತ್ ಮತ್ತು ಮೂಲಸೌಕರ್ಯ ಜಾಲದ ಮೇಲೆ ಅಮೆರಿಕ ದಾಳಿ ನಡೆಸುವ ಬೆದರಿಕೆಗೆ ಮೇಲಿನಂತೆ ಉತ್ತರ ನೀಡಿದ್ದಾರೆ. ಅಮೆರಿಕ ಇಲ್ಲಿಂದ ಪಾರಾಗುವುದಕ್ಕೆ ಹೆಚ್ಚು ಸಮಯ ಇಲ್ಲ. ಅಂತಿಮ ಗಡುವು ಸಮೀಪಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ, ಹೆಜ್ಬುಲ್ಲಾ ಬಂಡುಕೋರರು ಇಸ್ರೇಲ್ ಗಡಿ ಭಾಗದಲ್ಲಿ ಐದು ಕಡೆ ಮಿಲಿಟರಿ ಮೇಲೆ ದಾಳಿ ನಡೆಸಿದ್ದಾರೆ. ರಾಡಾರ್, ಆರ್ಟಿಲ್ಲರಿ ಗುರಿಯಾಗಿಸಿ ರಾಕೆಟ್ ಮತ್ತು ಡ್ರೋಣ್ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದೆ.
ಈವರೆಗಿನ ದಾಳಿಯಲ್ಲಿ ಇರಾನಲ್ಲಿ 208 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಐಆರ್ ಜಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮಿನಾಬ್ ಸಿಟಿಯ ಹೆಣ್ಮಕ್ಕಳ ಶಾಲೆಗೆ ಬಾಂಬ್ ದಾಳಿ ನಡೆಸಿದ ಘಟನೆಯಲ್ಲಿ 168 ಮಕ್ಕಳು ಸಾವಿಗೀಡಾಗಿದ್ದಾರೆ. ಅದರಲ್ಲಿ 13 ಮಂದಿ ಐದು ವರ್ಷಕ್ಕಿಂತ ಕೆಳಗಿನವರು. ಒಟ್ಟು 1500 ಮಂದಿ ಯುದ್ಧ ಸಂದರ್ಭ ಸಾವನ್ನಪ್ಪಿದ್ದಾರೆ ಎಂದು ಇರಾನ್ ಹೇಳಿದೆ.
ಇದೇ ಸಂದರ್ಭ ಟೆಹ್ರಾನ್ ಮೇಲಿನ ದಾಳಿಯಲ್ಲಿ ಸೈನ್ಸ್ ಯುನಿವರ್ಸಿಟಿಯ ಪ್ರೊಫೆಸರ್ ಶಯೀದ್ ಶಮಗ್ದಾರಿ ಮತ್ತು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿರುವುದಾಗಿಯೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಒಂದೆಡೆ ದಾಳಿ ನಡೆಯುತ್ತಿದ್ದರೂ, ಮಾರ್ಚ್ 24ರ ಬೆಳಗ್ಗೆ ರಾಜಧಾನಿ ಟೆಹ್ರಾನಲ್ಲಿ ದಾಳಿ ಭೀತಿಯ ನಡುವೆಯೂ ನೂರಾರು ಮಂದಿ ರಸ್ತೆಗಿಳಿದಿದ್ದು ಸರ್ಕಾರದ ಪರವಾಗಿ ಧ್ವಜ ಹಿಡಿದು ಮೆರವಣಿಗೆ ನಡೆಸಿದ್ದಾರೆ. ಅಲ್ಲದೆ, ಇಸ್ರೇಲ್- ಅಮೆರಿಕ ದಾಳಿಯನ್ನು ಖಂಡಿಸಿದ್ದಾರೆ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 11:40 am
HK News Staffer
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm