ಬ್ರೇಕಿಂಗ್ ನ್ಯೂಸ್
02-03-26 01:34 pm HK News Staffer ದೇಶ - ವಿದೇಶ
ಮುಂಬೈ, ಮಾರ್ಚ್ 2: ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧ ಪರಿಸ್ಥಿತಿ ಭಾರತೀಯ ಷೇರು ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕ ಅನಿಶ್ಚಿತತೆ ಹಿನ್ನೆಲೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.1 ಕ್ಕಿಂತ ಹೆಚ್ಚು ಕುಸಿದಿವೆ.
ಬೆಳಿಗ್ಗೆ 10:09ರ ವೇಳೆಗೆ ಸೆನ್ಸೆಕ್ಸ್ 1,001.35 ಪಾಯಿಂಟ್ಗಳು (1.23%) ಕುಸಿದು 80,285.84 ಕ್ಕೆ ತಲುಪಿದರೆ, ನಿಫ್ಟಿ 301.50 ಪಾಯಿಂಟ್ಗಳು (1.2%) ಇಳಿದು 24,877.15 ಮಟ್ಟದಲ್ಲಿ ವಹಿವಾಟು ನಡೆಸಿತು. ಮಾರುಕಟ್ಟೆ ತೆರೆಯುತ್ತಿದ್ದ ಮೊದಲ ಒಂದೂವರೆ ಗಂಟೆಯಲ್ಲೇ ಹೂಡಿಕೆದಾರರು ಸುಮಾರು ₹8 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ. 710 ಷೇರುಗಳು ಏರಿಕೆ ಕಂಡರೆ, 2,903 ಷೇರುಗಳು ಕುಸಿತ ಕಂಡು, 148 ಷೇರುಗಳು ಸ್ಥಿರವಾಗಿವೆ.
ವಾರಾಂತ್ಯದ ಘಟನೆಗಳ ನಂತರ ಕಚ್ಚಾ ತೈಲದ ಬೆಲೆ ಶೇ.7 ಕ್ಕಿಂತ ಹೆಚ್ಚು ಏರಿಕೆಯಾಗಿ ಗರಿಷ್ಠ ಮಟ್ಟ ತಲುಪಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ ಸುಮಾರು 82.40 ಡಾಲರ್ಗೆ ಏರಿಕೆಯಾಗಿದೆ. ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯನ್ನು ನಿರ್ಬಂಧಿಸುವ ಸಾಧ್ಯತೆಯ ಹೇಳಿಕೆಯಿಂದ ಮಾರುಕಟ್ಟೆಗಳಲ್ಲಿ ಆತಂಕ ಹೆಚ್ಚಿದೆ. ಜಾಗತಿಕ ತೈಲ ಸರಬರಾಜಿನ ಸುಮಾರು 20% ಹಾಗೂ ಭಾರತದ ಕಚ್ಚಾ ತೈಲ ಆಮದುಗಳಲ್ಲಿ ಶೇ.40 ಕ್ಕಿಂತ ಹೆಚ್ಚು ಈ ಮಾರ್ಗದ ಮೂಲಕವೇ ಸಾಗುತ್ತದೆ.
ತೈಲ ಮಾರುಕಟ್ಟೆ ಕಂಪನಿಗಳು, ಬಣ್ಣ ಮತ್ತು ಟೈರ್ ತಯಾರಕರು, ವಾಯುಯಾನ ಹಾಗೂ ರಾಸಾಯನಿಕ ವಲಯದ ಷೇರುಗಳು ಹೆಚ್ಚು ಕುಸಿತ ಕಂಡಿವೆ. ಲೋಹ ವಲಯವನ್ನು ಹೊರತುಪಡಿಸಿ ಇತರ ಎಲ್ಲಾ ಪ್ರಮುಖ ವಲಯಗಳು ನಷ್ಟ ಅನುಭವಿಸಿವೆ. ಸ್ಮಾಲ್-ಕ್ಯಾಪ್ ಮತ್ತು ಮಿಡ್-ಕ್ಯಾಪ್ ಸೂಚ್ಯಂಕಗಳು ತಲಾ ಸುಮಾರು 0.8% ಕುಸಿದಿವೆ. ಮಧ್ಯಪ್ರಾಚ್ಯ ಸಂಘರ್ಷದ ಭೀತಿ ನಡುವೆ ರೂಪಾಯಿ ಡಾಲರ್ ಎದುರು ಅಪಮೌಲ್ಯಗೊಂಡಿದ್ದು, ಸರ್ಕಾರಿ ಬಾಂಡ್ ಇಳುವರಿ ಹೆಚ್ಚಾಗಿದೆ. ಏಷ್ಯನ್ ಕರೆನ್ಸಿಗಳು 0.2%ರಿಂದ 0.6%ರವರೆಗೆ ಕುಸಿದರೆ, ಎಂಎಸ್ಸಿಐ ಏಷ್ಯಾ-ಪೆಸಿಫಿಕ್ ಸೂಚ್ಯಂಕ 1.5% ಇಳಿಕೆಯಾಗಿದೆ. ರೂಪಾಯಿ ತೀವ್ರ ಕುಸಿತ ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶಿಸಬಹುದು ಎಂಬ ನಿರೀಕ್ಷೆ ವ್ಯಾಪಾರಿಗಳಲ್ಲಿ ವ್ಯಕ್ತವಾಗಿದೆ.
ಫೆಬ್ರವರಿ 27ರಂದು ವಿದೇಶಿ ಹೂಡಿಕೆದಾರರು ₹7,536.4 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅದೇ ಸಮಯದಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹12,292.8 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಇತ್ತೀಚಿನ ತಿಂಗಳಲ್ಲಿ ಐಟಿ ವಲಯದಲ್ಲಿ ವಿದೇಶಿ ಹೂಡಿಕೆದಾರರ ಮಾರಾಟ ಹೆಚ್ಚಿದ್ದರೂ, ಹಣಕಾಸು ಸೇವೆಗಳು ಮತ್ತು ಬಂಡವಾಳ ಸರಕುಗಳಲ್ಲಿ ಖರೀದಿ ಕಂಡುಬಂದಿದೆ.
ಬ್ರಿಕ್ ವರ್ಕ್ ರೇಟಿಂಗ್ಸ್ನ ರಾಜೀವ್ ಶರಣ್ ಅವರ ಪ್ರಕಾರ, ಭಾರತವು ಆಮದು ತೈಲದ ಮೇಲೆ ಸುಮಾರು 90% ಅವಲಂಬಿತವಾಗಿರುವುದರಿಂದ ಬ್ರೆಂಟ್ ಬೆಲೆಯ ನಿರಂತರ ಏರಿಕೆ ಹೆಚ್ಚಿನ ಇಂಧನ ವೆಚ್ಚ, ಹಣದುಬ್ಬರ ಹಾಗೂ ಚಾಲ್ತಿ ಖಾತೆ ಕೊರತೆಯನ್ನು ಹೆಚ್ಚಿಸಬಹುದು. ಇದು ರಿಸರ್ವ್ ಬ್ಯಾಂಕ್ನ ದರ ಕಡಿತ ಯೋಜನೆಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಮಾರುಕಟ್ಟೆ ತಜ್ಞರು ಬಿಕ್ಕಟ್ಟಿನ ಸಮಯದಲ್ಲಿ ಪ್ಯಾನಿಕ್ ಮಾರಾಟ ತಪ್ಪಿಸಬೇಕು ಎಂದು ಸಲಹೆ ನೀಡುತ್ತಿದ್ದಾರೆ. ಇತಿಹಾಸದ ಅನುಭವದ ಪ್ರಕಾರ, ಕೋವಿಡ್ ಸಂಕಷ್ಟ, ರಷ್ಯಾ–ಉಕ್ರೇನ್ ಯುದ್ಧ ಹಾಗೂ ಗಾಜಾ ಸಂಘರ್ಷದಂತಹ ಘಟನೆಗಳ ಬಳಿಕ ಮಾರುಕಟ್ಟೆಗಳು ಆರು ತಿಂಗಳೊಳಗೆ ಪುನಶ್ಚೇತನಗೊಂಡಿವೆ. ಆದರೆ ಯುದ್ಧ ಪರಿಸ್ಥಿತಿ ಅನಿರೀಕ್ಷಿತ ತಿರುವು ಪಡೆಯುವ ಸಾಧ್ಯತೆ ಇರುವುದರಿಂದ ಹೂಡಿಕೆದಾರರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
14-07-26 07:55 pm
HK News Staffer
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
14-07-26 09:13 pm
HK News Staffer
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm