ಬ್ರೇಕಿಂಗ್ ನ್ಯೂಸ್
27-02-26 06:14 am HK News Staffer ದೇಶ - ವಿದೇಶ
ಭುವನೇಶ್ವರ, ಫೆ.26: ಭುವನೇಶ್ವರದಲ್ಲಿ ನಡೆದ ವಿಜಿಲೆನ್ಸ್ ಕಾರ್ಯಾಚರಣೆ ಒಡಿಶಾ ರಾಜ್ಯದ ಭ್ರಷ್ಟಾಚಾರ ವಿರೋಧಿ ಇತಿಹಾಸದಲ್ಲಿ ಹೊಸ ಇತಿಹಾಸ ಬರೆದಿದೆ. ಕಟಕ್ ವೃತ್ತದ ಗಣಿ ಉಪ ನಿರ್ದೇಶಕ ದೇವಬ್ರತ ಮೊಹಂತಿ ಅವರನ್ನು ₹30,000 ಲಂಚ ಸ್ವೀಕರಿಸಿದ ಆರೋಪದ ಮೇಲೆ ಬುಧವಾರ ಬೆಳಗ್ಗೆ ಬಂಧಿಸಿದ ಕೆಲವೇ ಗಂಟೆಗಳಲ್ಲಿ, ಅವರ ನಿವಾಸದಲ್ಲಿ ನಡೆದ ಶೋಧದಲ್ಲಿ 4 ಕೋಟಿಗೂ ಅಧಿಕ ನಗದು ಪತ್ತೆಯಾಗಿದೆ. ಅಧಿಕಾರಿಗಳ ಪ್ರಕಾರ, ಇದು ಒಡಿಶಾ ವಿಜಿಲೆನ್ಸ್ ಇತಿಹಾಸದಲ್ಲೇ ಅತಿದೊಡ್ಡ ನಗದು ವಶಕ್ಕೆ ಪಡೆದಿರುವುದಾಗಿದೆ.
ಕಲ್ಲಿದ್ದಲು ಡಿಪೋದ ಸುಗಮ ಕಾರ್ಯಾಚರಣೆ ಮತ್ತು ಸಾರಿಗೆ ಅನುಮತಿ ನೀಡಲು ಪರವಾನಗಿ ಪಡೆದ ವ್ಯಾಪಾರಿಯಿಂದ ಲಂಚ ಬೇಡಿಕೆಯ ದೂರಿನ ಆಧಾರದ ಮೇಲೆ ವಿಜಿಲೆನ್ಸ್ ಇಲಾಖೆ ದೇಬಬ್ರತ್ ಮೊಹಂತಿ ಮೇಲೆ ಬಲೆ ಬೀಸಿತ್ತು. ಬಂಧನದ ಬಳಿಕ ಭುವನೇಶ್ವರ ವಿಜಿಲೆನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ವಿಸ್ತರಿಸಲಾಗಿತ್ತು. ನಂತರ ಭುವನೇಶ್ವರದಲ್ಲಿರುವ ಅವರ ವಸತಿ ಫ್ಲಾಟ್, ಭದ್ರಕ್ ಜಿಲ್ಲೆಯ ಮಾತಾಸಾಹಿಯಲ್ಲಿರುವ ಪೋಷಕರ ಮನೆ ಹಾಗೂ ಕಟಕ್ನಲ್ಲಿರುವ ಕಚೇರಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಯಿತು.
ಭುವನೇಶ್ವರದ ಫ್ಲಾಟ್ನಲ್ಲಿ ಟ್ರಾಲಿ ಬ್ಯಾಗ್ಗಳು ಮತ್ತು ಅಲ್ಮೆರಾಗಳಲ್ಲಿ ಸಂಗ್ರಹಿಸಲಾಗಿದ್ದ ಭಾರೀ ಪ್ರಮಾಣದ ನಗದು ಪತ್ತೆಯಾಗಿದೆ. ಇದರ ಜೊತೆಗೆ ಕಚೇರಿ ಡ್ರಾಯರ್ ಮತ್ತು ವೈಯಕ್ತಿಕ ವಶದಿಂದ ₹1.20 ಲಕ್ಷ ನಗದು, ಭುವನೇಶ್ವರದ ಪಹಲಾ ಪ್ರದೇಶದಲ್ಲಿರುವ ಸುಮಾರು 2,400 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಕಟ್ಟಡ ಮತ್ತು ಸುಮಾರು 130 ಗ್ರಾಂ ಚಿನ್ನಾಭರಣವೂ ಪತ್ತೆಯಾಗಿದೆ.
ಮೊಹಂತಿ 2004ರಲ್ಲಿ ಜೂನಿಯರ್ ಮೈನಿಂಗ್ ಆಫೀಸರ್ ಆಗಿ ಸರ್ಕಾರಿ ಸೇವೆಗೆ ಸೇರಿದ್ದರು. ಆಗ ಅವರ ಸಂಬಳ 8,000 ರೂ. ಇತ್ತು. ನಂತರ ಅವರು ಬರಿಪಾದ (2006-2008), ಬೆರ್ಹಾಂಪುರ್ (2009-2011), ಕಟಕ್ (2011-2014) ಮತ್ತು ಭುವನೇಶ್ವರದಲ್ಲಿರುವ ರಾಜ್ಯ ಪ್ರಧಾನ ಕಚೇರಿಯಲ್ಲಿ (2014-2018) ಸೇವೆ ಸಲ್ಲಿಸಿದ್ದರು. ಮಾರ್ಚ್ 2018 ರಲ್ಲಿ ಅವರನ್ನು ಸಹಾಯಕ ಗಣಿಗಾರಿಕೆ ಅಧಿಕಾರಿ ಆಗಿ ಬಡ್ತಿ ನೀಡಿ ಸಂಬಲ್ಪುರದಲ್ಲಿ ನಿಯೋಜಿಸಲಾಗಿತ್ತು. ಏಪ್ರಿಲ್ 2022 ರಿಂದ ಡಿಸೆಂಬರ್ 2025 ರವರೆಗೆ, ಅವರು ಫುಲ್ಬಾನಿಯಲ್ಲಿ ಗಣಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ದಾಳಿಯ ನಂತರ ಅವರ ಚರ ಮತ್ತು ಸ್ಥಿರ ಆಸ್ತಿಗಳ ಸಮಗ್ರ ಮೌಲ್ಯಮಾಪನ ನಡೆಯಲಿದೆ ಎಂದು ಭುವನೇಶ್ವರ ವಿಜಿಲೆನ್ಸ್ ವಿಭಾಗದ ಎಸ್ಪಿ ಸರೋಜ್ ಕುಮಾರ್ ಸಮಲ್ ತಿಳಿಸಿದ್ದಾರೆ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 11:40 am
HK News Staffer
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm