ಬ್ರೇಕಿಂಗ್ ನ್ಯೂಸ್
01-01-21 11:09 pm Headline Karnataka News Network ದೇಶ - ವಿದೇಶ
Photo credits : Hauterfly
ಕೊಲ್ಲಂ, ಜ.1: ತಾನು ಕಸ ಗುಡಿಸುತ್ತಿದ್ದ ಪಂಚಾಯಿತಿಯಲ್ಲೇ ಆಕೆ ಅಧ್ಯಕ್ಷೆಯಾಗಿದ್ದಾರೆ. ಹೌದು... ಕೊಲ್ಲಂ ಜಿಲ್ಲೆಯ ಪತ್ತನಾಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಗೆ ಅದೃಷ್ಟ ಒಲಿದಿದ್ದು, ಈಗ ಅದೇ ಪಂಚಾಯತಿನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಆಕೆಯ ಹೆಸರು ಆನಂದವಲ್ಲಿ. 46 ವರ್ಷದ ಈ ಮಹಿಳೆ ಪತ್ತನಾಪುರಂ ಪಂಚಾಯತಿಯಲ್ಲಿ ಕಸ ಗುಡಿಸುತ್ತಾ, ಅಧಿಕಾರಿಗಳಿಗೆ ಚಹಾ ತಂದು ಕೊಡುವ ಕೆಲಸ ಮಾಡುತ್ತಿದ್ದರು. ಹೀಗೆ ಕೆಲಸ ಮಾಡುತ್ತಿದ್ದ ಪರಿಶಿಷ್ಟ ಜಾತಿಯ ಮಹಿಳೆಯನ್ನು ಸಿಪಿಎಂ ಪಕ್ಷದಲ್ಲಿ ತಲವೂರು ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿತ್ತು. ಅದೃಷ್ಟದಲ್ಲಿ ಗೆಲುವನ್ನೂ ಕಂಡಿದ್ದರು.
13 ಸ್ಥಾನಗಳ ಪತ್ತನಾಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಸಿಪಿಎಂ ಏಳು ಸ್ಥಾನಗಳನ್ನು ಪಡೆದಿದ್ದು ಅಧಿಕಾರಕ್ಕೇರಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದರಿಂದ ಆನಂದವಲ್ಲಿ ಬಿಟ್ಟರೆ ಬೇರೆ ಯಾರು ಕೂಡ ಸೂಕ್ತ ಅಭ್ಯರ್ಥಿ ಇರಲಿಲ್ಲ. ಹೀಗಾಗಿ ಸಿಪಿಎಂ ಘಟಕ ಆನಂದವಲ್ಲಿಯನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿದೆ. ಪತಿ ಮೋಹನ್, ಸಿಪಿಎಂ ಪಕ್ಷದ ಸ್ಥಳೀಯ ಸಮಿತಿ ಸದಸ್ಯರಾಗಿದ್ದಾರೆ.
ಆನಂದವಲ್ಲಿ 2011ರಲ್ಲಿ ಪತ್ತನಾಪುರಂ ಬ್ಲಾಕ್ ಪಂಚಾಯಿತಿಗೆ ಕಸ ಗುಡಿಸುವ ಕೆಲಸಕ್ಕೆ ಸೇರಿದ್ದರು. ಆಗ ಅವರಿಗೆ 2 ಸಾವಿರ ರೂ. ವೇತನ ಇತ್ತು. 2017ರಲ್ಲಿ ವೇತನ ಪರಿಷ್ಕರಣೆಯಾಗಿ ಆರು ಸಾವಿರಕ್ಕೆ ಏರಿಕೆಯಾಗಿತ್ತು. ಕಸ ಗುಡಿಸುವ ಜೊತೆಗೆ ಪಂಚಾಯಿತಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ದ್ವಿತೀಯ ಪಿಯುಸಿ ಓದಿರುವ ಆನಂದವಲ್ಲಿ ಪಂಚಾಯಿತಿಯಲ್ಲಿ ಕಳೆದ ವಾರದ ವರೆಗೂ ಅಧಿಕಾರಿಗಳಿಗೆ ಚಹಾ ತಂದು ಕೊಡುತ್ತಿದ್ದರು.
ಇಂಥ ಹುದ್ದೆಯನ್ನು ಅಲಂಕರಿಸುತ್ತೇನೆಂದು ಕನಸಿನಲ್ಲೂ ಎಣಿಸಿರಲಿಲ್ಲ. ನಾನೇ ಕಸ ಗುಡಿಸುತ್ತಿದ್ದ ಪಂಚಾಯಿತಿಯಲ್ಲೇ ಮುಖ್ಯಸ್ಥಳಾಗುವ ಅದೃಷ್ಟ ಬಂದಿರುವುದು ನಿಜಕ್ಕೂ ಊಹಿಸಲು ಸಾಧ್ಯವಾಗದ ವಿಷಯ ಎಂದು ಆನಂದವಲ್ಲಿ ಪ್ರತಿಕ್ರಿಯಿಸಿದ್ದಾರೆ.
For almost 10 years she had swept floors and dusted chairs at the panchayat office but on Wednesday A Anandavalli (46) occupied the chair of the block panchayat president in Pathanapuram in south Kerala’s Kollam district.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm