ಬ್ರೇಕಿಂಗ್ ನ್ಯೂಸ್
05-01-26 02:13 pm HK News Desk ದೇಶ - ವಿದೇಶ
ಡೆಹ್ರಾಡೂನ್, ಜ.5 : ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳ ಹರಿದ್ವಾರ ಮತ್ತು ಸುತ್ತಲಿನ ಪ್ರದೇಶಗಳಿಗೆ ಹಿಂದೂಯೇತರರ ಪ್ರವೇಶ ನಿರ್ಬಂಧಿಸುವ ಬಗ್ಗೆ ಉತ್ತರಾಖಂಡ ಸರಕಾರ ಚಿಂತನೆ ನಡೆಸಿದೆ. ಹರಿದ್ವಾರವು ಪವಿತ್ರ ನಗರವಾಗಿದ್ದು, ದೇವಭೂಮಿಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸ್ವರೂಪವನ್ನು ಕಾಪಾಡಲು ಸರಕಾರ ಬದ್ಧವಾಗಿದೆ. ಇಲ್ಲಿನ ಪಾವಿತ್ರ್ಯ ಉಳಿಸಿಕೊಳ್ಳುವುದಕ್ಕಾಗಿ ಹಿಂದೂಯೇತರರ ಪ್ರವೇಶ ನಿರ್ಬಂಧಿಸುವ ಬಗ್ಗೆ ಯೋಚಿಸಲಾಗುವುದು ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಹರಿದ್ವಾರದಲ್ಲಿ 2027ರಲ್ಲಿ ಅರ್ಧ ಕುಂಭಮೇಳ ನಡೆಯಲಿದ್ದು ಅದಕ್ಕೂ ಮೊದಲು ಈ ಪ್ರದೇಶವನ್ನು ಹಿಂದುಯೇತರರು ನೆಲೆಸುವುದಕ್ಕೆ ನಿಷೇಧಿಸಬೇಕು. ಆಮೂಲಕ ಪವಿತ್ರ ಭೂಮಿಯಲ್ಲಿ ಮಾಂಸಾಹಾರ, ಇದರ ವಹಿವಾಟು ನಿಷೇಧಿಸಬೇಕು ಎಂದು ಹರಿದ್ವಾರದ ಗಂಗಾ ಘಾಟ್ ಸುರಕ್ಷತೆ ನೋಡಿಕೊಳ್ಳುತ್ತಿರುವ ಶ್ರೀ ಗಂಗಾ ಸಭಾ ಒತ್ತಾಯ ಮಾಡಿತ್ತು. ಇದರ ಬೆನ್ನಲ್ಲೇ ನ್ಯೂಸ್ 18 ಇಂಗ್ಲಿಷ್ ಮಾಧ್ಯಮ, ಅಲ್ಲಿನ ಮುಖ್ಯಮಂತ್ರಿ ಬಳಿ ಪ್ರತಿಕ್ರಿಯೆ ಕೇಳಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಪ್ರಸ್ತುತ ಹರಿದ್ವಾರದ 'ಹರ್ ಕಿ ಪೌಡಿ' ಸೇರಿದಂತೆ ಕೆಲವು ಆಯ್ದ ಗಂಗಾ ನದಿಯ ತಟಗಳಿಗೆ ಹಿಂದುಯೇತರರಿಗೆ ಅಲ್ಲಿನ ನಗರಸಭೆ ನಿಷೇಧ ವಿಧಿಸಿದೆ. ಈಗ ಈ ನಿರ್ಬಂಧವನ್ನು ಹರಿದ್ವಾರದಿಂದ ಋಷಿಕೇಶದ ವರೆಗಿನ ಎಲ್ಲಾ 105 ಗಂಗಾ ಘಾಟ್ ಗಳಿಗೆ ವಿಸ್ತರಿಸಬೇಕೆಂದು ಸಾಧು, ಸಂತರು ಮತ್ತು 'ಶ್ರೀ ಗಂಗಾ ಸಭಾ' ಆಗ್ರಹಿಸಿವೆ.
ಹರಿದ್ವಾರಕ್ಕೆ ವಾರ್ಷಿಕ 4 ಕೋಟಿ ಭಕ್ತರು
ಹರಿದ್ವಾರ ಭಾರತದ ಅತಿ ಮುಖ್ಯ ಯಾತ್ರಾಸ್ಥಳವಾಗಿದ್ದು ವಾರ್ಷಿಕವಾಗಿ ನಾಲ್ಕು ಕೋಟಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಈ ನಡುವೆ, ಹೊರಗಿನ ವ್ಯಕ್ತಿಗಳು ಬಂದು ನೆಲೆಸುತ್ತಿರುವುದು, ಪ್ರವಾಸಿ ತಾಣಗಳ ರೀತಿ ರೆಸಾರ್ಟ್ ನಿರ್ಮಿಸುತ್ತಿರುವುದು, ಆಮೂಲಕ ಧಾರ್ಮಿಕ ಪ್ರವಾಸೋದ್ಯಮ ಬದಲು ವಿಹಾರಿ ತಾಣದ ರೀತಿ ಬದಲಾಯಿಸುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. ಇದಕ್ಕಾಗಿ ಮಾಂಸಾಹಾರ ಪೂರ್ತಿ ನಿಷೇಧ ಮತ್ತು ಹಿಂದುಯೇತರ ವ್ಯಕ್ತಿಗಳು ಪವಿತ್ರ ಸ್ಥಳದಲ್ಲಿ ನೆಲೆಸುವಂತಾಗಬಾರದು ಎಂಬ ನಿಟ್ಟಿನಲ್ಲಿ ಹಿಂದು ಪರ ಸಂಘಟನೆಗಳು ರಾಜ್ಯ ಬಿಜೆಪಿ ಸರ್ಕಾರಕ್ಕೆ ಒತ್ತಡ ಹೇರಿವೆ.
The Uttarakhand government is considering restricting the entry and settlement of non-Hindus in the Haridwar–Rishikesh region following demands from saints, seers, and the Shri Ganga Sabha. Chief Minister Pushkar Singh Dhami said the government is committed to preserving the spiritual and cultural sanctity of the sacred cities, especially ahead of the 2027 Ardh Kumbh Mela.
27-02-26 10:17 pm
HK News Desk
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
ವರನಟ ಡಾ.ರಾಜ್ ಅಪಹರಣ ಪ್ರಕರಣ ; ಬರೋಬ್ಬರಿ 25 ವರ್ಷಗ...
25-02-26 07:54 pm
27-02-26 03:55 pm
HK News Staffer
ಲಂಚ ಆರೋಪದಲ್ಲಿ ಸಿಕ್ಕಿಬಿದ್ದ ಗಣಿ ಉಪ ನಿರ್ದೇಶಕರ ಮನ...
27-02-26 06:14 am
ಮಾರ್ಚ್ 11ರಿಂದ ಅನಿರ್ದಿಷ್ಟ ಮುಷ್ಕರ ; ರಾಜ್ಯಾದ್ಯಂತ...
25-02-26 10:10 pm
ಮಧ್ಯಪ್ರದೇಶದಲ್ಲಿ ಹೊಸ ರೀತಿಯ ಮತಾಂತರ ಜಾಲ ; ಹಿಂದು...
25-02-26 03:38 pm
ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ; ಮತ್ತೆ ಭುಗಿಲೆ...
24-02-26 01:21 pm
27-02-26 08:59 pm
Mangalore Correspondent
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
Kuntikana Kidnap, False: ಕುಂಟಿಕಾನದಲ್ಲಿ ಮಕ್ಕಳು...
27-02-26 05:00 pm
27-02-26 09:23 pm
Mangalore Correspondent
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm
ಹವಾಲಾ ಹಣದ ಭಾರವೇ ಸಿಜೆ ರಾಯ್ ಪ್ರಾಣ ತೆಗೆಯಿತಾ?! ಕ...
26-02-26 04:45 pm