ಬ್ರೇಕಿಂಗ್ ನ್ಯೂಸ್
26-12-20 05:12 pm Headline Karnataka News Network ದೇಶ - ವಿದೇಶ
ನವದೆಹಲಿ, ಡಿ.26: ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಂಡು ಒಂದು ತಿಂಗಳು ಪೂರ್ತಿಯಾಗುತ್ತಿದ್ದು, 35ಕ್ಕೂ ಹೆಚ್ಚು ಮಂದಿಯನ್ನು ಹೊಸ ಕಾನೂನಿನಡಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಸರಕಾರ ಬಲವಂತದ ಮತಾಂತರದ ಹೆಸರಲ್ಲಿ ಲವ್ ಜಿಹಾದ್ ವಿರುದ್ಧ ನ.27ರಂದು ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತಂದಿತ್ತು. ಕಾನೂನು ಜಾರಿಯಾದ ಒಂದೇ ದಿನದಲ್ಲಿ ಬರೇಲಿ ಜಿಲ್ಲೆಯಲ್ಲಿ ಮೊದಲ ಕೇಸು ದಾಖಲಾಗಿತ್ತು. ಆನಂತರ ಸರಣಿಯಂತೆ ಕೇಸುಗಳು ದಾಖಲಾಗುತ್ತಿದ್ದು ಈವರೆಗೆ ಡಜನ್ ಗಿಂತಲೂ ಹೆಚ್ಚು ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದುಬರುತ್ತಿದೆ. ಇದೇ ವೇಳೆ, ಬಲವಂತದ ಮತಾಂತರದ ಪ್ರಕರಣಗಳಿಗೆ ಸಂಬಂಧಿಸಿ 35ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪೈಕಿ ಇಟಾ ಜಿಲ್ಲೆಯಲ್ಲಿ ಎಂಟು ಮಂದಿ ಬಂಧನ ಆಗಿದ್ದರೆ, ಸೀತಾಪುರ್ ಜಿಲ್ಲೆಯಲ್ಲಿ ಏಳು, ಗ್ರೇಟರ್ ನೋಯ್ಡಾದಲ್ಲಿ ನಾಲ್ಕು, ಶಹಜಾನ್ ಪುರ್ ಮತ್ತು ಆಜಂಘಡ್ ನಲ್ಲಿ ತಲಾ ಮೂರು, ಮೊರಾದಬಾದ್, ಬಿಜ್ನೋರ್, ಮುಜಾಫರ್ ನಗರ, ಕನ್ನೋಜ್ ಜಿಲ್ಲೆಯಲ್ಲಿ ತಲಾ ಎರಡು ಹಾಗೂ ಬರೇಲಿ ಮತ್ತು ಬರ್ದೋಯಿ ಜಿಲ್ಲೆಯಲ್ಲಿ ಒಬ್ಬೊಬ್ಬರನ್ನು ಬಂಧಿಸಲಾಗಿದೆ.
ಬರೇಲಿ ಜಿಲ್ಲೆಯ ಶರೀಫ್ ನಗರದಲ್ಲಿ ನಡೆದ ಮೊದಲ ಪ್ರಕರಣದಲ್ಲಿ 20 ವರ್ಷದ ಹಿಂದು ಯುವತಿಯನ್ನು 22 ವರ್ಷದ ಉವಾಷ್ ಅಹ್ಮದ್ ಎಂಬಾತ ಬಲವಂತದಿಂದ ಮದುವೆಯಾಗಿ, ಮತಾಂತರಿಸಿದ್ದ. ಗೆಳೆಯನಂತೆ ನಟಿಸಿ ತನ್ನ ಮಗಳನ್ನು ವಂಚಿಸಿದ್ದಾನೆ ಎಂದು ಆಕೆಯ ತಂದೆ ತುಕಾರಾಮ್ ರಾಥೋರ್ ದೂರು ನೀಡಿದ್ದರು. ಪೊಲೀಸರು ಡಿ.3ರಂದು ಹೊಸ ಕಾನೂನಿನಡಿ ಆರೋಪಿಯನ್ನು ಬಂಧಿಸಿದ್ದರು.
Going full steam, the Uttar Pradesh police have made more than one arrest a day since the controversial anti-conversion ordinance came into effect a month ago, having apprehended about 35 people so far.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm