ಬ್ರೇಕಿಂಗ್ ನ್ಯೂಸ್
25-12-20 06:12 pm Headline Karnataka News Network ದೇಶ - ವಿದೇಶ
ನವದೆಹಲಿ, ಡಿ.25: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ತೆಗೆದುಹಾಕಿದ ಬಳಿಕ ಪಾಕಿಸ್ತಾನೀಯರ ಟಾರ್ಗೆಟ್ ಕಾಶ್ಮೀರವೇ ಆಗುತ್ತಿದೆ. ಕಾಶ್ಮೀರವನ್ನು ವಶಕ್ಕೆ ತೆಗೆದುಕೊಳ್ಳಬೇಕೆಂಬ ಹಪಹಪಿಯನ್ನು ಅಲ್ಲಿನವರು ವ್ಯಕ್ತಪಡಿಸುತ್ತಲೇ ಇದ್ದಾರೆ. ಈಗ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಸರದಿ. ಮುಸ್ಲಿಮರು ಕಾಶ್ಮೀರವನ್ನು ಮೊದಲು ವಶಕ್ಕೆ ಪಡೆಯಲಿದ್ದಾರೆ. ಆಮೇಲೆ ಭಾರತದ ಮೇಲೆ ಆಕ್ರಮಣ ಮಾಡಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಸಮಾ ಟಿವಿಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಶೋಯೆಬ್ ಅಖ್ತರ್, ಘಾಜ್ವಾ ಇ–ಹಿಂದ್ ಪರವಾಗಿ ಹೇಳಿಕೆ ನೀಡಿದ್ದಾನೆ. ಹಳೆಯ ಸಂದರ್ಶನದ ವಿಡಿಯೋ ತುಣುಕು ಈಗ ವೈರಲ್ ಆಗಿದ್ದು, ಶೋಯೆಬ್ ಅಖ್ತರನ ಮಾನಸಿಕ ಸಣ್ಣತನವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಘಾಜ್ವಾ ಇ –ಹಿಂದ್ ಎಂದರೆ ಭಾರತದ ವಿರುದ್ಧ ಧರ್ಮಯುದ್ಧ ಎಂದರ್ಥ.
‘ನಮ್ಮ ಧರ್ಮ ಗ್ರಂಥಗಳಲ್ಲಿ ಘಾಜ್ವಾ ಇ-ಹಿಂದ್ ವಿಚಾರವನ್ನು ಉಲ್ಲೇಖ ಮಾಡಿದೆ. ಅಲ್ಲಿನ ನದಿಗಳಲ್ಲಿ ಮತ್ತೊಮ್ಮೆ ರಕ್ತದ ಕೋಡಿ ಹರಿಯಲಿದೆ. ಅಫ್ಘಾನಿಸ್ತಾನದ ಪಡೆಗಳು ಕಾಶ್ಮೀರದ ಅಟಾಕ್ ನದಿಯತ್ತ ನುಗ್ಗಿ ಬರಲಿದೆ. ಉಜ್ಬೆಕಿಸ್ತಾನದ ಹೊಸ ಶಕ್ತಿ ಉದಯಿಸಲಿದೆ. ಲಾಹೋರಿನ ವರೆಗೆ ವ್ಯಾಪ್ತಿ ಹೊಂದಿದ್ದ ಖೊರಸಾನ್ ಮತ್ತೆ ಉದಯವಾಗಲಿದೆ ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಘಾಜ್ವಾ ಇ-ಹಿಂದ್ ಪದವನ್ನು ಹೆಚ್ಚಾಗಿ ಪಾಕಿಸ್ತಾನದಲ್ಲಿ ಮೂಲಭೂತವಾದಿ ಇಸ್ಲಾಮಿಕ್ ಧರ್ಮ ಬೋಧಕರು ಹೇಳಿಕೊಂಡು ಬಂದಿದ್ದಾರೆ. ಜೆಇಎಂ ಭಯೋತ್ಪಾದಕರು ಇದೇ ನೀತಿಯನ್ನು ಬಳಸಿಕೊಂಡು ತಮ್ಮ ಪಡೆಗಳಿಗೆ ಯುವಕರನ್ನು ಸೇರಿಸಿಕೊಳ್ಳುತ್ತಾರೆ. ಅದರ ಪ್ರಕಾರ, ಸಿರಿಯಾದಿಂದ ಕಪ್ಪು ಬಾವುಟ ಹಿಡಿದು ಮೊದಲ್ಗೊಳ್ಳುವ ಈ ಧರ್ಮ ಯುದ್ಧ ಭಾರತದತ್ತ ಬರಲಿದೆ. ಇಸ್ಲಾಮಿಕ್ ಸ್ಟೇಟ್ಸ್ ಸ್ಥಾಪಿಸುವ ಸಲುವಾಗಿ ಆಗ ಹಿಂದು ದೇಶದಲ್ಲಿ ಹಿಂದುಗಳು ಮತ್ತು ಮುಸ್ಲಿಮರ ಮಧ್ಯೆ ಯುದ್ಧವಾಗಲಿದೆ. ಯುದ್ಧದಲ್ಲಿ ಮುಸ್ಲಿಮರು ಗೆಲುವು ಸಾಧಿಸಲಿದ್ದಾರೆ. ಬಳಿಕ ಬೃಹತ್ ಇಸ್ಲಾಮಿಕ್ ಸ್ಟೇಟ್ ನಿರ್ಮಾಣ ಆಗಲಿದೆ ಎಂದು ಜನರ ತಲೆ ತುಂಬಲಾಗುತ್ತದೆ.
ಭಾರತದಲ್ಲಿ ಜೈಶ್ ಇ ಮೊಹಮ್ಮದ್ ಉಗ್ರರು ಕೂಡ ತಮ್ಮ ಸಂಘಟನೆಗಳಿಗೆ ಮುಸ್ಲಿಮ್ ಯುವಕರನ್ನು ಸೇರಿಸಿಕೊಳ್ಳುವಾಗ ಇದೇ ರೀತಿಯ ಮಾತುಗಳನ್ನು ತಲೆಗೆ ತುಂಬಿಸುತ್ತಾರೆ. ಈ ರೀತಿಯ ಹೋರಾಟದಲ್ಲಿ ಪಾಲ್ಗೊಳ್ಳುವುದು ಪವಿತ್ರವಾಗಿರುತ್ತದೆ. ಈ ಹೋರಾಟದಲ್ಲಿ ಸತ್ತರೆ ಸ್ವರ್ಗ ಸಿಗುತ್ತದೆ ಎಂದು ನಂಬಿಸಲಾಗುತ್ತದೆ.
ಮಾಜಿ ವೇಗದ ಬೌಲರ್ ಆಗಿರುವ ಶೋಯೆಬ್ ಅಖ್ತರ್ ಈ ರೀತಿಯ ಹೇಳಿಕೆ ನೀಡಿರುವುದು ವಿವಾದ ಸೃಷ್ಟಿಸಿದೆ. ಟ್ವಿಟರ್ ಖಾತೆಯಲ್ಲಿ ಭಾರೀ ಪರ- ವಿರೋಧ ಟೀಕೆಗಳು ಕಾಣಿಸಿಕೊಂಡಿದೆ.
.@TimesNow's story on @pakistan_untold's expose on Shoaib Akhtar. https://t.co/Lc3XUyXnQq
— Pakistan Untold (@pakistan_untold) December 25, 2020
Batting for ‘Ghazwa-e-Hind’, former Pakistan pacer Shoaib Akhtar said that Muslims will capture Kashmir and then invade India.
19-03-25 12:44 pm
Bangalore Correspondent
ಸೌಜನ್ಯಾ ಪ್ರಕರಣ ; ನ್ಯಾಯಕ್ಕಾಗಿ ಆಗ್ರಹಿಸಿ ಧರ್ಮಸ್ಥ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
Bangalore JCB Accident, Two Killed; ರಸ್ತೆ ಕಾಮ...
18-03-25 02:30 pm
19-03-25 02:10 pm
HK News Desk
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
18-03-25 10:09 pm
Mangalore Correspondent
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
18-03-25 06:31 pm
Mangalore Correspondent
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am