Supreme Court, Actor Darshan, Murder case: ನಟ ದರ್ಶನ್ ಗೆ ಹೈಕೋರ್ಟ್ ಜಾಮೀನು ನೀಡುವಲ್ಲಿ ವಿವೇಚನೆ ಬಳಸಿಲ್ಲ, ನ್ಯಾಯಾಂಗ ಅಧಿಕಾರ ದುರುಪಯೋಗವಿದು, ಒಪ್ಪಲಾಗದು ; ಬೇಲ್ ವಿರುದ್ಧ ಸುಪ್ರೀಂ ಟೀಕೆ

24-07-25 07:54 pm       HK News Desk   ದೇಶ - ವಿದೇಶ

ರೇಣುಕಾಸ್ವಾಮಿ ಕೊಲೆ ಕೇಸ್‌ ಆರೋಪಿಗಳಿಗೆ ಜಾಮೀನು ನೀಡಿದ್ದಕ್ಕೆ, ಇತರೆ ಕೇಸ್‌ಗಳಲ್ಲಿಯೂ ಕೊಲೆ ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನೀಡುತ್ತದೆಯೇ? ಎಂದು ಸುಪ್ರೀಂ ಕೋರ್ಟ್‌ ಪ್ರಶ್ನೆ ಮಾಡಿದೆ. ನಟ ದರ್ಶನ್‌ ಸೇರಿ ಕೊಲೆ ಕೇಸ್‌ನ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ಬಗ್ಗೆ ನ್ಯಾಯಾಂಗದ ಅಧಿಕಾರದ ದುರುಪಯೋಗ ಎಂದು ಸುಪ್ರೀಂ ವಿಷಾದ ವ್ಯಕ್ತಪಡಿಸಿದೆ.

ನವದೆಹಲಿ, ಜುಲೈ 24 : ರೇಣುಕಾಸ್ವಾಮಿ ಕೊಲೆ ಕೇಸ್‌ ಆರೋಪಿಗಳಿಗೆ ಜಾಮೀನು ನೀಡಿದ್ದಕ್ಕೆ, ಇತರೆ ಕೇಸ್‌ಗಳಲ್ಲಿಯೂ ಕೊಲೆ ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನೀಡುತ್ತದೆಯೇ? ಎಂದು ಸುಪ್ರೀಂ ಕೋರ್ಟ್‌ ಪ್ರಶ್ನೆ ಮಾಡಿದೆ. ನಟ ದರ್ಶನ್‌ ಸೇರಿ ಕೊಲೆ ಕೇಸ್‌ನ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ಬಗ್ಗೆ ನ್ಯಾಯಾಂಗದ ಅಧಿಕಾರದ ದುರುಪಯೋಗ ಎಂದು ಸುಪ್ರೀಂ ವಿಷಾದ ವ್ಯಕ್ತಪಡಿಸಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಸೇರಿ ಆರೋಪಿಗಳ ಜಾಮೀನು ಪ್ರಶ್ನೆ ಮಾಡಿ ಕರ್ನಾಟಕ ಸರ್ಕಾರ, ಪೊಲೀಸ್‌ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್‌ ಗುರುವಾರ ವಿಚಾರಣೆ ನಡೆಸಿತು. ನಟ ದರ್ಶನ್ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದೆ.

Renukaswamy Murder Case: SC To Consider Karnataka Govt's Plea Against Actor  Darshan, Others' Bail In April

ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌;

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರಿದ್ದ ಪೀಠವು ಕಳೆದ ವಾರ ಹೈಕೋರ್ಟ್ ಜಾಮೀನು ನೀಡುವಲ್ಲಿ ವಿವೇಚನೆ ಬಳಸಿಲ್ಲ ಎಂದಿದ್ದ ಸುಪ್ರೀಂ ಕೋರ್ಟ್ ಈ ವಾರ ಮತ್ತೆ ಟೀಕೆ ಮುಂದುವರೆಸಿತು. ಹೈಕೋರ್ಟ್ ಮಾಡಿದ ತಪ್ಪನ್ನು ತಾನು ಮಾಡುವುದಿಲ್ಲ ಎಂದು 10 ದಿನಗಳು ತೀರ್ಪನ್ನು ಕಾಯ್ದಿರಿಸಿತು.

ಇದು ನ್ಯಾಯಾಂಗದ ಅಧಿಕಾರದ ದುರುಪಯೋಗ;

"ಹೈಕೋರ್ಟ್ ಆದೇಶವನ್ನು ನೀಡಿದ ರೀತಿ ನೋಡಿದರೆ, ಬೇಸರವಾಗುತ್ತದೆ. ಹೈಕೋರ್ಟ್ ಇತರ ಪ್ರಕರಣಗಳಲ್ಲೂ ಇದೇ ರೀತಿಯ ಆದೇಶಗಳನ್ನು ನೀಡುತ್ತದೆಯೇ?" ಎಂದು ನ್ಯಾಯಮೂರ್ತಿ ಪರ್ದಿವಾಲಾ ಪ್ರಶ್ನಿಸಿದ್ದಾರೆ. ಈ ತಪ್ಪನ್ನು ಕಳೆ ಹಂತದ ಕೋರ್ಟ್‌ನ ನ್ಯಾಯಧೀಶರು ಮಾಡಿದರೆ ಒಪ್ಪಿಕೊಳ್ಳಬಹುದು. ಆದರೆ, ಹೈಕೋರ್ಟ್‌ ನ್ಯಾಯಮೂರ್ತಿಗಳು ಮಾಡಿದರೆ ಹೇಗೆ? ಇತರ ಆರೋಪಿಗಳು ವರ್ಷಗಳಿಂದ ಕಾಯುತ್ತಿರುವಾಗ ಈ ಪ್ರಕರಣಕ್ಕೆ ಏಕೆ ಇಷ್ಟು ಗಮನ ನೀಡಲಾಗುತ್ತಿದೆ? ಇದು ನ್ಯಾಯಾಂಗದ ಅಧಿಕಾರದ ದುರುಪಯೋಗ. ನ್ಯಾಯಾಂಗದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

High Court judge making such mistake': Supreme Court on bail to actor  Darshan in Renukaswamy case | Today News

ನಟ ದರ್ಶನ್‌ ಪರ ವಕೀಲರಿಗೆ ಸಾಲು ಸಾಲು ಪ್ರಶ್ನೆ ;

ಆರೋಪಿ 2 ದರ್ಶನ್ ಬಟ್ಟೆಗಳನ್ನು 3 ದಿನಗಳ ಬಳಿಕ ವಶಕ್ಕೆ ಪಡೆದಿದ್ದಾರೆ. ಅಷ್ಟರಲ್ಲಿ ಬಟ್ಟೆಗಳನ್ನು ಒಗೆದು ಒಣಹಾಕಲಾಗಿತ್ತೆಂದು ಹೇಳಲಾಗಿದೆ. ಮಹಜರು ವೇಳೆ ರಕ್ತದ ಕಲೆ ಕಂಡುಬಂದಿಲ್ಲ. ಫೊರೆನ್ಸಿಕ್ನಲ್ಲಿ ರಕ್ತದ ಕಲೆ ಕಂಡುಬಂದಿದೆ ಎಂದು ಹೇಳುತ್ತಿದ್ದಾರೆ. ಇದ್ಯಾವುದನ್ನೂ ನಂಬಲು ಸಾಧ್ಯವಿಲ್ಲವೆಂದು ದರ್ಶನ್‌ ಪರ ವಕೀಲ ಸಿದ್ಧಾರ್ಥ್ ದವೆ ಕೋರ್ಟ್‌ನ ಗಮನಕ್ಕೆ ತಂದರು. ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರು, ಒಟ್ಟಾರೆ ಘಟನೆಯೇ ನಂಬಲರ್ಹವಾಗಿಲ್ಲವೇ? 2 ಪ್ರತ್ಯಕ್ಷದರ್ಶಿಗಳು ನಂಬಲರ್ಹವಾಗಿಲ್ಲ, ಸಾಕ್ಷಿಗಳ ಹೇಳಿಕೆಗೆ ಪೂರಕ ಸಾಕ್ಷ್ಯಗಳಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

The Supreme Court on Thursday strongly criticized the Karnataka High Court for granting bail to Kannada actor Darshan and other accused in the high-profile Renukaswamy murder case, stating that the decision lacked judicial prudence and amounted to a misuse of judicial authority.