ಬ್ರೇಕಿಂಗ್ ನ್ಯೂಸ್
26-06-25 10:22 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 26 : ಆಪರೇಶನ್ ಸಿಂಧೂರ ಮತ್ತು ಭಾರತೀಯ ಸೇನೆ ಬಗ್ಗೆ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಏಜನ್ಸಿ ಐಎಸ್ಐಗೆ ಹಂಚಿಕೊಂಡಿದ್ದ ನೌಕಾ ಪಡೆಯ ದೆಹಲಿ ಕಚೇರಿಯ ಸಿಬಂದಿಯೊಬ್ಬನನ್ನು ರಾಜಸ್ಥಾನಿ ಪೊಲೀಸರು ಬಂಧಿಸಿದ್ದಾರೆ.
ನೌಕಾ ಪಡೆಯಲ್ಲಿ ಕ್ಲರಿಕಲ್ ಕೆಲಸ ಮಾಡುತ್ತಿದ್ದ ಹರ್ಯಾಣ ಮೂಲದ ವಿಶಾಲ್ ಯಾದವ್ ಬಂಧಿತ ವ್ಯಕ್ತಿ. ನೇವಿ ಮತ್ತು ಇನ್ನಿತರ ಸೇನಾ ಮಾಹಿತಿಗಳನ್ನು ಪಾಕಿಸ್ತಾನದ ಯುವತಿಯೊಬ್ಬಳಿಗೆ ನೀಡುತ್ತಿದ್ದ. ಕಳೆದೊಂದು ವರ್ಷದಿಂದ ಹಣಕ್ಕಾಗಿ ರಹಸ್ಯ ಮಾಹಿತಿಗಳನ್ನ ಹಂಚಿಕೊಂಡಿದ್ದ ಎನ್ನುವುದು ಆತನ ಮೊಬೈಲ್ ಪರಿಶೀಲನೆ ವೇಳೆ ಗೊತ್ತಾಗಿದೆ. ದೆಹಲಿಯ ನೌಕಾ ಪಡೆಯ ಪ್ರಧಾನ ಕಚೇರಿಯಲ್ಲಿ ಕೆಲಸಕ್ಕಿದ್ದ ಈತನನ್ನು ರಾಜಸ್ಥಾನದ ಗುಪ್ತಚರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನದ ಗುಪ್ತಚರ ಏಜನ್ಸಿಗಳು ಭಾರತೀಯ ಸಿಬಂದಿಯನ್ನು ಗುರಿಯಾಗಿಸಿ ಗೂಢಚಾರಿಕೆ ನಡೆಸುತ್ತಿರುವ ಬಗ್ಗೆ ರಾಜಸ್ಥಾನದ ಗುಪ್ತಚರ ವಿಭಾಗದ ಸಿಐಡಿ ಯೂನಿಟ್ ನಿಗಾ ಇಟ್ಟಿತ್ತು. ಈ ವೇಳೆ, ವಿಶಾಲ್ ಯಾದವ್ ಪಾಕಿಸ್ತಾನ ಮೂಲದ ಯುವತಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು, ಸೋಶಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗಿರುವುದು ಪತ್ತೆಯಾಗಿದೆ. ಪ್ರಿಯಾ ಶರ್ಮಾ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಯುವತಿ ಹಣಕ್ಕಾಗಿ ವಿಶಾಲ್ ಯಾದವ್ ಬಳಿಯಿಂದ ಮಾಹಿತಿಗಳನ್ನು ಕೇಳುತ್ತಿದ್ದಳು. ಯಾದವ್ ಆನ್ಲೈನ್ ಗೇಮ್ ಆಡುತ್ತಿದ್ದು, ಅದರಲ್ಲಿ ವ್ಯಸ್ತನಾಗಿದ್ದ. ಹೀಗಾಗಿ ಹಣ ಕಳಕೊಂಡು ಹಣಕ್ಕಾಗಿ ಏನು ಮಾಡುವುದಕ್ಕೂ ಸಿದ್ಧನಾಗಿದ್ದ. ಕ್ರಿಪ್ಟೋಕರೆನ್ಸಿ ಮೂಲಕ ಪಾಕ್ ಯುವತಿ ಹಣ ಕಳಿಸುತ್ತಿದ್ದು, ಆತನ ಬ್ಯಾಂಕ್ ಖಾತೆಗೂ ಹಣ ರವಾನೆಯಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ವಿಶಾಲ್ ಯಾದವ್ ನನ್ನು ಕೇಂದ್ರೀಯ ಗುಪ್ತಚರ ಏಜನ್ಸಿಗಳು ತನಿಖೆ ನಡೆಸಿದ್ದು, ಏನೆಲ್ಲಾ ಮಾಹಿತಿ ಹಂಚಿಕೊಂಡಿದ್ದಾನೆ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಸೋಶಿಯಲ್ ಮೀಡಿಯಾಗಳೇ ರಹಸ್ಯ ಮಾಹಿತಿ ಸೋರಿಕೆಗೆ ಮತ್ತು ಗೂಢಚಾರಿಕೆಗೆ ಹೆಚ್ಚು ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಸಾರ್ವಜನಿಕರು ಸೋಶಿಯಲ್ ಮೀಡಿಯಾ ಬಳಕೆ ವೇಳೆ ಹೆಚ್ಚು ಜಾಗೃತಿ ವಹಿಸಬೇಕೆಂದು ಭದ್ರತಾ ಏಜನ್ಸಿಗಳು ಮನವಿ ಮಾಡಿಕೊಂಡಿವೆ.
A staff member of the Indian Navy posted in Delhi has been arrested by Rajasthan Police for allegedly leaking sensitive military information, including details related to "Operation Sindhur," to Pakistan’s intelligence agency ISI.
26-06-25 10:37 pm
HK News Desk
Heart Attack, Hassan District: ಹಾಸನ ಜಿಲ್ಲೆಯಲ್...
26-06-25 02:15 pm
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
26-06-25 10:22 pm
HK News Desk
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
26-06-25 10:08 pm
Mangalore Correspondent
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
26-06-25 10:49 pm
Mangalore Correspondent
Varkady, Manjeshwar Crime, Son Kills Mother:...
26-06-25 05:32 pm
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm