ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎಂ ; ರಾಕ್ಷಸರಿಗೆ ಯಾವುದೇ ಕರುಣೆ ತೋರಬೇಡಿ, ಭಯೋತ್ಪಾದನೆ ಮಟ್ಟ ಹಾಕಲು ಕೇಂದ್ರಕ್ಕೆ ಒಮರ್ ಅಬ್ದುಲ್ಲಾ ಮನವಿ

27-04-25 08:42 pm       HK News Desk   ದೇಶ - ವಿದೇಶ

ಭಾರತ ಹಾಗೂ ಪಾಪಿ ಪಾಕಿಸ್ತಾನ ನಡುವೆ ಧರ್ಮ ಯುದ್ಧವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಭಾರತ ಹಾಗೂ ಪಾಕ್ನ ಪ್ರಮುಖ ನಾಯುಕರು ಯುದ್ಧಕ್ಕೆ ಕರೆ ನೀಡುತ್ತಿದ್ದಾರೆ. ಮೊನ್ನೆ ತಾನೇ ತೆಲಂಗಾಣದ ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಪಾಕ್ ಆಕ್ರಮೀತ ಕಾಶ್ಮೀರವನ್ನು ವಶಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರವನ್ನ ಆಗ್ರಹಿಸಿದ್ದರು.

ಶ್ರೀನಗರ, ಏ 27: ಭಾರತ ಹಾಗೂ ಪಾಪಿ ಪಾಕಿಸ್ತಾನ ನಡುವೆ ಧರ್ಮ ಯುದ್ಧವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಭಾರತ ಹಾಗೂ ಪಾಕ್ನ ಪ್ರಮುಖ ನಾಯುಕರು ಯುದ್ಧಕ್ಕೆ ಕರೆ ನೀಡುತ್ತಿದ್ದಾರೆ. ಮೊನ್ನೆ ತಾನೇ ತೆಲಂಗಾಣದ ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಪಾಕ್ ಆಕ್ರಮೀತ ಕಾಶ್ಮೀರವನ್ನು ವಶಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರವನ್ನ ಆಗ್ರಹಿಸಿದ್ದರು. ಇದರ ನಡುವೆ ಮತ್ತೊಂದು ಕಾಂಗ್ರೆಸ್ ಮೈತ್ರಿ ಪಕ್ಷದ ಮುಖ್ಯಮಂತ್ರಿಯು ಸಹ ಪಾಕಿಸ್ತಾನದ ವಿರುದ್ಧ ಯುದ್ದಕ್ಕೆ ಕರೆ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿಯಾಗಿರುವ ಒಮರ್ ಅಬ್ದುಲ್ಲಾ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಯೋತ್ಪಾದನೆ ಮತ್ತು ಅದರ ಮೂಲದ ವಿರುದ್ಧ ನಿರ್ಣಾಯಕ ಹೋರಾಟ ನಡೆಯಬೇಕು ಎಂದಿದ್ದಾರೆ.

ಮುಂದುವರೆದು, ಕಾಶ್ಮೀರದ ಜನರು ಭಯೋತ್ಪಾದನೆ ಮತ್ತು ಅಮಾಯಕರ ಹತ್ಯೆಯ ವಿರುದ್ಧ ಮುಕ್ತವಾಗಿ ಮತ್ತು ಸ್ವಯಂಪ್ರೇರಿತವಾಗಿ ಧ್ವನಿಯೆತ್ತಿದ್ದಾರೆ. ಹಾಗಾಗಿ, ಈ ಬೆಂಬಲವನ್ನು ಬಳಸಿಕೊಂಡು, ಜನರನ್ನು ದೂರವಿಡುವ ಯಾವುದೇ ತಪ್ಪು ಕ್ರಮವನ್ನು ತಪ್ಪಿಸುವ ಸಮಯ ಇದು. ತಪ್ಪಿತಸ್ಥರನ್ನು ಶಿಕ್ಷಿಸಿ, ಅವರಿಗೆ ಯಾವುದೇ ಕರುಣೆ ತೋರಬೇಡಿ, ಆದರೆ ಅಮಾಯಕ ಜನರು ಪಾರ್ಶ್ವ ಹಾನಿಗೆ ಒಳಗಾಗದಂತೆ ಎಚ್ಚರಿಕೆ ವಹಿಸಿ ಎಂದು ಹೇಳಿದ್ದಾರೆ

ಇನ್ನು ಇದಕ್ಕೂ ಮುನ್ನ ಬಲೂಚಿಸ್ತಾನ್ ಸ್ವಾತಂತ್ರ್ಯ ಚಳವಳಿಗೆ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬೆಂಬಲ ನೀಡಿ ಪಾಕಿಸ್ತಾನ ಇಬ್ಬಾಗಕ್ಕೆ ಕರೆ ನೀಡಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ರಾಷ್ಟ್ರವು ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದೆ ಮತ್ತು ಕೆಲವು ಸ್ಪಷ್ಟ ಮಿಲಿಟರಿ ಪ್ರತಿಕ್ರಿಯೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ

Jammu and Kashmir Chief Minister Omar Abdullah has called for a resolute stance against terrorism following the devastating attack in Pahalgam that resulted in the deaths of 26 individuals, predominantly tourists.