Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ 

19-03-25 07:39 pm       HK News Desk   ದೇಶ - ವಿದೇಶ

ಎರಡು ವರ್ಷದ ಮಗುವಿನ ಪ್ರಾಣ ತೆಗೆದು, ಆ ಬಳಿಕ ಪತಿ – ಪತ್ನಿ ನೇಣಿಗೆ ಶರಣಾಗಿರುವ ದುರಂತ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. 

ಕೊಲ್ಲಂ, ಮಾ 19:  ಎರಡು ವರ್ಷದ ಮಗುವಿನ ಪ್ರಾಣ ತೆಗೆದು, ಆ ಬಳಿಕ ಪತಿ – ಪತ್ನಿ ನೇಣಿಗೆ ಶರಣಾಗಿರುವ ದುರಂತ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. 

ಮೃತರನ್ನ ಅಜೀಶ್ (38) ಪತ್ನಿ ಸುಲು (36) ಮತ್ತು 2 ವರ್ಷದ ಮಗು ಆದಿ ಎಂದು ಗುರುತಿಸಲಾಗಿದೆ. ಮಯ್ಯನಾಡ್ ಥಣ್ಣಿಯ ಮನೆಯಲ್ಲಿ ದಂಪತಿಗಳು ಪ್ರಾಣ ಕಳೆದುಕೊಂಡಿದ್ದಾರೆ.

ಗಲ್ಫ್ನಿಂದ ವಾಪಾಸ್‌ ಆಗಿದ್ದ ಅಜೀಶ್ ಕೊಲ್ಲಂನಲ್ಲಿ ವಕೀಲರೊಬ್ಬರ ಸಹಾಯಕರಾಗಿದ್ದರು. ಅಜೀಶ್ ಪತ್ನಿ, ಮಗುವಿನೊಂದಿಗೆ ಪೋಷಕರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಬುಧವಾರ ಬೆಳಗ್ಗೆ ಅಜೀಶ್ ಪೋಷಕರು ಬಾಗಿಲು ತೆರೆಯದಿದ್ದಾಗ, ಅನುಮಾನಗೊಂಡು ಪರಿಶೀಲಿಸಿದ್ದಾಗ ಮೂವರು ಮೃsತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಗುವಿನ ದೇಹ ಬೆಡ್‌ನಲ್ಲಿತ್ತು. ಅಜೀಶ್, ಸುಲು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಣವೇನು?: 

ಅಜೀಶ್ ಅವರಿಗೆ ಇತ್ತೀಚೆಗೆ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಇದರಿಂದ ಅಜೀಶ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಆರ್ಥಿಕವಾಗಿ ಕೂಡ ಅಜೀಶ್ ದಂಪತಿಗೆ ತೀರ ಕಷ್ಟಗಳಿತ್ತು. ಪಡೆದ ಸಾಲ ತೀರಿಸಲಾಗದೆ ಅಜೀಶ್ ಹೊಸ ಮನೆಯನ್ನು ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.

ಸದ್ಯ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ತನಿಖೆಯ ಬಳಿಕವಷ್ಟೇ ಸಾ*ವಿನ

In a tragic incident in Kollam, a couple and their young child were found dead in their home in Thanni, Mayyanad. The victims have been identified as Ajeesh (38), Sulu (36), and their 2-year-old child, Aadhi, residents of Bhaskara Vilasam House. The family had been living on rent near the BSNL office in the area.