ಬ್ರೇಕಿಂಗ್ ನ್ಯೂಸ್
12-12-20 09:57 pm Headline Karnataka News Network ದೇಶ - ವಿದೇಶ
ಚೆನ್ನೈ, ಡಿ.12: ಮಹತ್ವದ ಬೆಳವಣಿಗೆಯಲ್ಲಿ ಸಿಬಿಐ ವಶಕ್ಕೆ ಪಡೆದಿದ್ದ 103 ಕೇಜಿ ಚಿನ್ನ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶ ಮಾಡಿದೆ.
ಚೆನ್ನೈ ನಗರದ ಸುರಾನಾ ಕಂಪೆನಿಗೆ ಸೇರಿದ ಬಿಲ್ಡಿಂಗ್ ನಲ್ಲಿ 2012ರಲ್ಲಿ ಸಿಬಿಐ ದಾಳಿ ನಡೆಸಿದ್ದು, 400.47 ಕೇಜಿ ಚಿನ್ನದ ಗಟ್ಟಿ ಮತ್ತು ಆಭರಣಗಳು ಪತ್ತೆಯಾಗಿದ್ದವು. ಚಿನ್ನ ಮತ್ತು ಬೆಳ್ಳಿಯ ಆಮದು ವ್ಯವಹಾರವನ್ನು ಮಾಡಿಕೊಂಡಿದ್ದ ಸುರಾನಾ ಕಾರ್ಪೊರೇಷನ್ ಲಿಮಿಟೆಡ್, ವಿದೇಶಿ ಆಮದು ನೀತಿಯನ್ನು ಉಲ್ಲಂಘಿಸಿದ ವಿಚಾರದಲ್ಲಿ ಸಿಬಿಐ ದಾಳಿ ನಡೆದಿತ್ತು. ದಾಳಿ ಬಳಿಕ ಚಿನ್ನ ಇದ್ದ ಕಟ್ಟಡವನ್ನು ಸೀಲ್ ಮಾಡಿ ಸಿಬಿಐ ಅಧಿಕಾರಿಗಳು ತೆರಳಿದ್ದರು. ಆದರೆ, ಅಲ್ಲಿದ್ದ 400 ಕೇಜಿ ಚಿನ್ನದ ಸಂಗ್ರಹದ ಪೈಕಿ 103 ಕೇಜಿ ನಾಪತ್ತೆ ಆಗಿರುವ ಬಗ್ಗೆ ಕಳೆದ ಫೆಬ್ರವರಿಯಲ್ಲಿ ತಿಳಿದುಬಂದಿದ್ದು ಸುರಾನಾ ಸಂಸ್ಥೆಯ ಪರವಾಗಿ ಮದ್ರಾಸ್ ಹೈಕೋರ್ಟಿಗೆ ದೂರು ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, ಸಿಬಿಐ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಲ್ಲದೆ ತಮಿಳುನಾಡು ಪೊಲೀಸರ ಮೂಲಕ ತನಿಖೆಗೆ ಆದೇಶ ಮಾಡಿದೆ.
ಆದರೆ, ಸಿಬಿಐ ಪರ ವಕೀಲರು, ತಮಿಳುನಾಡು ಪೊಲೀಸರು ಸಿಬಿಐ ವಿರುದ್ಧ ತನಿಖೆ ಮಾಡುವುದಂದ್ರೆ ಸ್ವತಂತ್ರ ಸಂಸ್ಥೆಯ ಘನತೆಗೆ ಪೆಟ್ಟು ಬಿದ್ದಂತಾಗುತ್ತದೆ. ಸಿಬಿಐ ವಿಭಾಗದ ಮೇಲಧಿಕಾರಿಗಳು ಅಥವಾ ಎನ್ಐಎ ತಂಡದಿಂದ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳ ನಡುವೆ ಕೀಳಂದಾಜು ಮಾಡಬಾರದು. ಅವರು ಮೇಲು, ಇವರು ಕೀಳು ಎಂದು ಹೇಳುವಂತಿಲ್ಲ. ಸಿಬಿಐಗೆ ಇದು ಅಗ್ನಿಪರೀಕ್ಷೆ. ಪರೀಕ್ಷೆಯಲ್ಲಿ ಸತ್ಯ ಹೊರಬರಲಿ. ಕಾನೂನು ಎಲ್ಲರಿಗು ಒಂದೇ ಆಗಿರುತ್ತದೆ. ಹಾಗೆ ಭಾವಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮಾರ್ಮಿಕ ಉತ್ತರ ನೀಡಿದೆ.
ಸೀಜ್ ಮಾಡಿದ ಬಳಿಕ ನಾವು ಸಿಬಿಐ ಕೋರ್ಟಿಗೆ ಅದರ ಕೀಯನ್ನು ಕೊಟ್ಟಿದ್ದೆವು. ಆದರೆ ಯಾವ ದಿನಾಂಕವೆಂದು ನಮೂದು ಮಾಡಿಲ್ಲ. ಅಲ್ಲದೆ, ಚಿನ್ನವನ್ನು ಪತ್ತೆ ಮಾಡಿದಾಗ ಕಲೆಕ್ಟಿವ್ ಆಗಿ ತೂಕ ಮಾಡಲಾಗಿತ್ತು. ಈಗ ಒಂದೊಂದಾಗೇ ಆಧುನಿಕ ಉಪಕರಣಗಳ ಮೂಲಕ ತೂಕ ಮಾಡಿದ್ದು ಕಡಿಮೆ ಬಂದಿರುವ ಸಾಧ್ಯತೆ ಇದೆ. ಇದರಲ್ಲಿ ಅಧಿಕಾರಿಗಳ ಪಾತ್ರ ಇಲ್ಲವೆಂದು ಸಿಬಿಐ ಪರ ವಕೀಲರು ವಾದಿಸಿದ್ದಕ್ಕೆ ಗರಂ ಆದ ನ್ಯಾಯಾಧೀಶರು, ಚಿನ್ನದ ಭಾರ ಕಡಿಮೆಯಾಗಿದೆ ಎನ್ನುವುದನ್ನು ಪ್ರೂವ್ ಮಾಡಲು ಏನೆಲ್ಲಾ ಹೇಳಬೇಡಿ. ಚಿನ್ನ ತನ್ನ ಭಾರ ಕಳೆದುಕೊಳ್ಳಲು ಅದು ಗಾಂಜಾ ಅಲ್ಲ. ನೂರು ಕೇಜಿ ಆಚೀಚೆ ಆಗಿದೆ ಅಂದರೆ ಅದೇನು ಸಾಮಾನ್ಯ ವಿಚಾರವೇ ಎಂದು ಪ್ರಶ್ನೆ ಮಾಡಿದ್ದಾರೆ.
ಕೊನೆಗೆ ತನಿಖೆಗೆ ಆದೇಶ ಮಾಡಿದ ಕೋರ್ಟ್, ಚೆನ್ನೈ ನಗರದ ಸಿಐಡಿಯ ಮೆಟ್ರೊ ವಿಂಗ್ ನಲ್ಲಿ ಕಳವು ಮತ್ತು ಮೋಸದ ಪ್ರಕರಣದಲ್ಲಿ ಎಫ್ಐಆರ್ ದಾಖಲು ಮಾಡಲು ಸೂಚನೆ ನೀಡಿದ್ದಲ್ಲದೆ ತನಿಖಾಧಿಕಾರಿಯಾಗಿ ಎಸ್ಪಿ ದರ್ಜೆಯ ಅಧಿಕಾರಿಯನ್ನು ನೇಮಿಸಿ ಆರು ತಿಂಗಳಲ್ಲಿ ತನಿಖೆ ಮಾಡಿ ವರದಿ ನೀಡಲು ಆದೇಶ ಮಾಡಿದೆ.
After nearly 100 kilos of gold was reported missing from CBI custody in Chennai, the Madras High Court on Ssaturday directed the Tamil Nadu Crime Branch-CID police to probe the case.
18-03-25 11:02 pm
Bangalore Correspondent
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
Bangalore JCB Accident, Two Killed; ರಸ್ತೆ ಕಾಮ...
18-03-25 02:30 pm
Tumkur Wedding News, Water: ನೀರಿನ ವಿಚಾರದಲ್ಲಿ...
18-03-25 01:08 pm
ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಸದ್ಯದಲ್ಲೇ...
17-03-25 11:54 am
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
18-03-25 10:09 pm
Mangalore Correspondent
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
18-03-25 06:31 pm
Mangalore Correspondent
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am