ಬ್ರೇಕಿಂಗ್ ನ್ಯೂಸ್
11-12-20 05:06 pm Headline Karnataka News Network ದೇಶ - ವಿದೇಶ
ವಾಷ್ಟಿಂಗ್ಟನ್, ಡಿ.11: ಕೊರೊನಾ ಕಾರಣದಿಂದ ಜಗತ್ತಿನಾದ್ಯಂತ ಲಾಕ್ಡೌನ್ ಹೇರಿದ್ದು ಉದ್ಯೋಗ ನಷ್ಟ, ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಆದರೆ, ಇದೇ ಲಾಕ್ಡೌನ್ ಕಾರಣದಿಂದ ವಾತಾವರಣಕ್ಕೆ ಮಾಲಿನ್ಯ ಸೇರುವ ಶೇಕಡಾವಾರಿನಲ್ಲಿ ದೊಡ್ಡ ಮಟ್ಟಿಗೆ ಕಡಿಮೆಯಾಗಿದ್ಯಂತೆ.
ಹೌದು... ಅಮೆರಿಕದ ಗ್ಲೋಬಲ್ ಕಾರ್ಬನ್ ಪ್ರಾಜೆಕ್ಟ್ ಎನ್ನುವ ವರದಿಯಲ್ಲಿ ಜಾಗತಿಕವಾಗಿ ಇಂಗಾಲದ ಬಿಡುಗಡೆ 2020ಕ್ಕೆ ಹೋಲಿಸಿದರೆ, ಶೇ.7ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ. ಅರ್ತ್ ಸಿಸ್ಟಮ್ ಸೈನ್ಸ್ ಡಾಟಾ ಎನ್ನುವ ನಿಯತಕಾಲಿಕದಲ್ಲಿ ಈ ಅಂಕಿ ಅಂಶಗಳನ್ನು ನೀಡಲಾಗಿದೆ. 2019ರಲ್ಲಿ ಜಾಗತಿಕವಾಗಿ 3600 ಕೋಟಿ ಮೆಟ್ರಿಕ್ ಟನ್ ಇಂಗಾಲದ ಅಂಶ ವಾವಾತರಣಕ್ಕೆ ಬಿಡುಗಡೆಯಾಗಿದ್ದರೆ, 20120ರಲ್ಲಿ ಇದರ ಸರಾಸರಿ 3400 ಕೋಟಿಗೆ ಇಳಿಕೆಯಾಗಿದೆ ಅನ್ನುವ ವರದಿಯನ್ನು ನೀಡಿದೆ.

ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಸೇರಿ ಈ ವರದಿಯನ್ನು ತಯಾರಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರು ಹೆಚ್ಚಾಗಿ ಹೊರಗಡೆ ಓಡಾಡದೆ ಮನೆಯಲ್ಲೇ ಇರುತ್ತಿದ್ದರು. ಇದರಿಂದಾಗಿ ವಾಹನಗಳ ಬಳಕೆ ಕಡಿಮೆಯಾಗಿತ್ತು. ಅಲ್ಲದೆ, ಇಂಗಾಲ ಇನ್ನಿತರ ವಿಷ ಹೊರಸೂಸುವ ಹೆಚ್ಚಿನ ಫ್ಯಾಕ್ಟರಿಗಳು ಬಂದ್ ಆಗಿದ್ದವು. ವಾಹನಗಳಿಂದಾಗಿ ಐದನೇ ಒಂದು ಭಾಗದಷ್ಟು ಮಾಲಿನಯ್ ಬಿಡುಗಡೆಯಾಗುತ್ತದೆ. ಇವೆಲ್ಲ ಕಾರಣದಿಂದಾಗಿ ಇಂಗಾಲ ಕಡಿಮೆಯಾಗಿದ್ದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಅಮೆರಿಕದಲ್ಲಿ ಈ ವರ್ಷ ಇಂಗಾಲದ ಬಿಡುಗಡೆಯಲ್ಲಿ ಶೇಕಡವಾರು 12ರಷ್ಟು ಕಡಿಮೆಯಾಗಿದ್ದರೆ, ಯುರೋಪಿನಲ್ಲಿ 11 ಶೇ. ಕಡಿಮೆಯಾಗಿರುವುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಆದರೆ, ಚೀನಾದಲ್ಲಿ ಕೇವಲ 1.7ರಷ್ಟು ಮಾತ್ರ ಇಂಗಾಲದಂಶ ಕಡಿಮೆಯಾಗಿದೆ. ಅಲ್ಲಿ ಆರಂಭದಲ್ಲಿ ಒಂದಷ್ಟು ಕಾಲ ಮಾತ್ರ ಲಾಕ್ಡೌನ್ ಮಾಡಿದ್ದು ಮತ್ತು ಅತಿ ಹೆಚ್ಚು ಕೈಗಾರಿಕೆಗಳು ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:44 pm
HK News Staffer
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
15-07-26 07:40 pm
HK News Staffer
ಉಡುಪಿ ; ಹೆದ್ದಾರಿ ಮಧ್ಯದಲ್ಲೇ ಟೇಬಲ್ ಹಾಕಿ ಟಿವಿ, ಮ...
15-07-26 07:02 pm
ಮುಕ್ಕ ಶ್ರೀನಿವಾಸ್ ಕಾಲೇಜು ಎಂಬಿಬಿಎಸ್ ವಿದ್ಯಾರ್ಥಿನ...
15-07-26 01:17 pm
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm