ಬ್ರೇಕಿಂಗ್ ನ್ಯೂಸ್
13-04-24 08:49 pm H K News ದೇಶ - ವಿದೇಶ
ಕೋಜಿಕ್ಕೋಡ್, ಎ.13: ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಕೇರಳದಲ್ಲಿ ಅಭಿಯಾನ ನಡೆಸುವ ಮೂಲಕ 34 ಕೋಟಿ ಹಣ ಒಟ್ಟು ಮಾಡಿ ಶಿಕ್ಷೆಯಿಂದ ಪಾರು ಮಾಡಲಾಗಿದೆ.
ಕೋಜಿಕ್ಕೋಡ್ ಮೂಲದ ನಿವಾಸಿ ಅಬ್ದುಲ್ ರಹೀಮ್ ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಯಿಂದ ಪಾರಾಗಿ ಬಂದವರು. 18 ವರ್ಷಗಳಿಂದ ಜೈಲಿನಲ್ಲಿದ್ದ ಅಬ್ದುಲ್ ರಹೀಮ್ ಪರವಾಗಿ ಕೇರಳದಲ್ಲಿ ಬಹುದೊಡ್ಡ ಅಭಿಯಾನ ನಡೆಸಲಾಗಿತ್ತು. ಅಬ್ದುರ್ ರಹೀಂ 2006ರಲ್ಲಿ ಡ್ರೈವರ್ ವೀಸಾದಲ್ಲಿ ರಿಯಾದ್ ತೆರಳಿದ್ದರು. ಸೌದಿ ಕುಟುಂಬದ ಮನೆಯೊಂದರಲ್ಲಿ ಕಾರು ಚಾಲಕನಾಗಿದ್ದುಕೊಂಡು ಬುದ್ಧಿಮಾಂದ್ಯ ಬಾಲಕನನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಜೊತೆಗಿತ್ತು. ಕಾರಿನಲ್ಲಿ ಬಾಲಕನ ಜೊತೆಗೆ ಪ್ರಯಾಣಿಸುತ್ತಿದ್ದಾಗ ಅಪಘಾತವಾಗಿದ್ದು, ಬಾಲಕನಿಗೆ ಇಡಲಾಗಿದ್ದ ಕೃತಕ ಉಸಿರಾಟದ ಮೆಷಿನ್ ಸಂಪರ್ಕ ಕಡಿತವಾಗಿತ್ತು. ರಕ್ಷಿಸಲು ಅಬ್ದುಲ್ ರಹೀಂ ಮಾಡಿದ ಪ್ರಯತ್ನ ಕೈಕೊಟ್ಟಿದ್ದರಿಂದ ಬಾಲಕ ಮೃತಪಟ್ಟಿದ್ದ. ಅದರಂತೆ, ರಹೀಮ್ ವಿರುದ್ಧ ದಾಖಲಾಗಿ ಸೌದಿ ಕಾನೂನು ಪ್ರಕಾರ ಜೈಲಿನಲ್ಲಿ ಇಡಲಾಗಿತ್ತು.
2018ರಲ್ಲಿ ಸೌದಿ ಕೋರ್ಟ್ ರಹೀಮ್ ಗೆ ಬಾಲಕನ ಸಾವಿಗೆ ಕಾರಣವಾಗಿದ್ದಕ್ಕೆ ಪ್ರತಿಯಾಗಿ ಗಲ್ಲು ಶಿಕ್ಷೆ ವಿಧಿಸಿತ್ತು. ಇದೇ ವೇಳೆ, ಬಾಲಕನ ಕುಟುಂಬಕ್ಕೆ ‘ಬ್ಲಡ್ ಮನಿ’ ರೂಪದಲ್ಲಿ 34 ಕೋಟಿ ಪರಿಹಾರ ಧನ ಪಾವತಿಸಿದಲ್ಲಿ ಗಲ್ಲು ಶಿಕ್ಷೆಯಿಂದ ಕಡಿತ ಮಾಡುವ ಪ್ರಸ್ತಾಪ ಇಡಲಾಗಿತ್ತು. ಹೀಗಾಗಿ ಲೀಗಲ್ ಏಕ್ಷನ್ ಕಮಿಟಿ ಹೆಸರಲ್ಲಿ ರಹೀಮ್ ಪರವಾಗಿ ಅಭಿಯಾನ ನಡೆಸಿದ್ದಕ್ಕೆ ಕೇರಳದ ಜನರು ಸ್ಪಂದಿಸಿದ್ದು ಹಣ ಹೊಂದಿಸುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಸೇವ್ ಅಬ್ದುಲ್ ರಹೀಂ ಹೆಸರಲ್ಲಿ ಪ್ರತ್ಯೇಕ ಏಪ್ ಮಾಡಿ, ಹಣಕ್ಕಾಗಿ ಕ್ಯಾಂಪೇನ್ ಮಾಡಲಾಗಿತ್ತು. ಎನ್ಆರ್ ಐ ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಅಭಿಯಾನದ ಮುಂಚೂಣಿಯಲ್ಲಿದ್ದರಿಂದ ಹಣ ಹರಿದು ಬಂದಿತ್ತು. 34 ಕೋಟಿ ಹಣ ಒಟ್ಟಾಗುತ್ತಲೇ ಭಾರತೀಯ ವಿದೇಶಾಂಗ ಇಲಾಖೆಯ ಮೂಲಕ ಸೌದಿ ಅರೇಬಿಯಾದ ಇಂಡಿಯನ್ ಎಂಬಸ್ಸಿಗೆ ಹಣ ತಲುಪಿಸಲಾಗಿದೆ. ರಿಯಾದ್ ಜೈಲಿನಲ್ಲಿರುವ ಅಬ್ದುಲ್ ರಹೀಂ ತನ್ನೂರಿನ ಜನರು ಹಣ ಒಟ್ಟು ಮಾಡಿದ್ದರಿಂದ ಸಂತಸಗೊಂಡಿದ್ದು ಇದು ಒರಿಜಿನಲ್ ಕೇರಳ ಸ್ಟೋರಿ ಎಂದು ಪ್ರತಿಕ್ರಿಯಿಸಿದ್ದಾರೆ.
The deadline loomed like the sword of Damocles but an astonishing four days is all it took for people in Kerala to channel their compassion and rally together to raise an astounding ₹34 crore to save a man from the state from the gallows in Saudi Arabia.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 06:05 pm
Mangalore Correspondent
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm