ಬ್ರೇಕಿಂಗ್ ನ್ಯೂಸ್
20-11-23 05:56 pm HK News Desk ದೇಶ - ವಿದೇಶ
ನವದೆಹಲಿ, ನ.20: ಯೆಮೆನ್ ದೇಶದ ಹೌತಿ ಬಂಡುಕೋರರು ಕೆಂಪು ಸಮುದ್ರ ಮೂಲಕ ಭಾರತಕ್ಕೆ ಹೊರಟಿದ್ದ ಕಾರ್ಗೋ ಹಡಗನ್ನು ಅಪಹರಿಸಿದ್ದು, ಅದರಲ್ಲಿದ್ದ 25 ಮಂದಿ ಸಿಬಂದಿಯನ್ನು ಒತ್ತೆಯಾಳು ಮಾಡಿಕೊಂಡಿದ್ದಾರೆ.
ಜಪಾನ್ ಮೂಲದ ಎನ್ ವೈಕೆ ಲೈನ್ ಎಂಬ ಕಂಪನಿ ಹಡಗನ್ನು ಆಪರೇಟ್ ಮಾಡುತ್ತಿದ್ದು, ಹಡಗು ಇಸ್ರೇಲ್ ದೇಶಕ್ಕೆ ಸೇರಿದ್ದು ಎನ್ನಲಾಗುತ್ತಿದೆ. ಹಡಗಿನಲ್ಲಿ ಬಲ್ಗೇರಿಯಾ, ರೊಮಾನಿಯಾ, ಫಿಲಿಪೈನ್ಸ್, ಯುಕ್ರೇನ್ ಮತ್ತು ಮೆಕ್ಸಿಕೋ ಮೂಲದವರಿದ್ದಾರೆ. ಹಡಗು ಅಪಹರಣದ ಬೆನ್ನಲ್ಲೇ ಜಪಾನ್ ದೇಶದ ವಿದೇಶಾಂಗ ಮಂತ್ರಿ, ಇರಾನ್, ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ರಾಷ್ಟ್ರಗಳ ಪ್ರತಿನಿಧಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಹೌತಿ ಬಂಡುಕೋರರು ಹಡಗನ್ನು ಸುರಕ್ಷಿತವಾಗಿ ಬಿಟ್ಟು ಕೊಡುವಂತೆ ಆಗ್ರಹ ಮಾಡಿದ್ದಾರೆ.
ಹಮಾಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಮಧ್ಯೆಯೇ ಇಂಥದ್ದೊಂದು ಘಟನೆ ನಡೆದಿರುವುದು ಯುದ್ಧ ಸನ್ನಿವೇಶ ಪೂರ್ವ ಮತ್ತು ದಕ್ಷಿಣ ಏಶ್ಯಾದತ್ತ ಹರಡುವ ಆತಂಕ ಎದುರಾಗಿದೆ. ಹೌತಿ ಬಂಡುಕೋರರು ಶಿಯಾ ಪಂಗಡಕ್ಕೆ ಸೇರಿದ ಮುಸ್ಲಿಮರಾಗಿದ್ದು, ಯೆಮೆನ್ ದೇಶದ ಸುನ್ನಿಗಳ ಆಡಳಿತ ವಿರುದ್ಧ 2014ರಿಂದ ಸಶಸ್ತ್ರ ಸಂಘರ್ಷ ನಡೆಸುತ್ತ ಬಂದಿದೆ. ಹೌತಿ ಬಂಡುಕೋರರು ಅಮೆರಿಕ, ಇಸ್ರೇಲ್ ಮತ್ತು ಸೌದಿ ಅರೇಬಿಯಾ ವಿರುದ್ಧ ಕಟುವಾದ ನಿಲುವು ಹೊಂದಿದೆ. ಇವರಿಗೆ ಇರಾನ್ ಬೆಂಬಲ ನೀಡುತ್ತಿದ್ದು, ಹಮಾಸ್ ಮೇಲಿನ ದಾಳಿ ವಿಚಾರದಲ್ಲಿ ಇಸ್ರೇಲ್ ಮೇಲೆ ದಾಳಿಗೆ ಮುಂದಾಗಿತ್ತು. ಸದ್ಯಕ್ಕೆ ಉತ್ತರ ಯೆಮೆನ್ ಪ್ರಾಂತ್ಯದಲ್ಲಿ ಹೌತಿ ಆಡಳಿತ ಇದೆ.
Yemen's Houthi rebels seized an Israeli-linked cargo ship in a crucial Red Sea shipping route on November 19 and took its 25 crew members hostage, officials said, raising fears that regional tensions heightened over the Israel-Hamas war were playing out on a new maritime front.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
17-07-26 10:32 am
HK News Staffer
ಹಾರ್ಮುಜ್ನಲ್ಲಿ ಇರಾನ್ ಅಟ್ಟಹಾಸ! ಮತ್ತೆ ಎರಡು ಟ್ಯಾ...
14-07-26 08:20 pm
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
17-07-26 03:55 pm
HK News Staffer
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
17-07-26 12:58 pm
HK News Staffer
Bc Road Murder Update, Mangalore: ಏಕಮುಖದ ಪ್ರೀ...
16-07-26 09:26 pm
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm
ದೆಹಲಿಯಿಂದ ಕಾರಿನಲ್ಲಿ 5 ಕೋಟಿ ಮೌಲ್ಯದ ಎಂಡಿಎಂಎ ಡ್ರ...
16-07-26 05:10 pm
ಗುರುವಾಯನಕೆರೆ ವಿದ್ಯುತ್ ಸಬ್ ಸ್ಟೇಶನ್ ಬಳಿ ಶವ ಪತ್ತ...
16-07-26 02:29 pm