ಬ್ರೇಕಿಂಗ್ ನ್ಯೂಸ್
06-08-20 08:39 am Headline Karnataka News Network ದೇಶ - ವಿದೇಶ
ಬೀಜಿಂಗ್ : ಮಹಾಮಾರಿ ಕೊರೋನಾ ವೈರಸ್ನ ಹುಟ್ಟು ಹಾಕಿ ಇಡೀ ಜಗತ್ತೇ ನಲುಗುವಂತೆ ಮಾಡಿತ್ತು ಚೀನಾ. ಇನ್ನು ಕೂಡ ಚೀನಾ ಈ ಹೆಮ್ಮಾರಿ ಕೊರೋನಾ ವೈರಸ್ನ ಸಮಸ್ಯೆಯಿಂದ ಚೇತರಿಸಿಕೊಂಡಿಲ್ಲ. ಹಾಗಿರುವಾಗಲೇ ಇನ್ನೊಂದು ಮಹಾಮಾರಿ ವೈರಸ್ ಚೀನಾಕ್ಕೆ ಎಂಟ್ರಿ ಕೊಟ್ಟಿದೆ. ಈ ವೈರಸ್ ಕೂಡ ಅಪಾಯಕಾರಿ ಆಗಿದ್ದು 7 ಜೀವವನ್ನು ಈಗಾಗಲೇ ಬಲಿ ಪಡೆದುಕೊಂಡಿದೆ.
ಈ ಕೊರೋನಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಅತಿ ಬೇಗನೇ ಹರಡುತ್ತದೆ. ಜ್ವರ, ಗಂಟಲುನೋವು, ಕೆಮ್ಮು ಇದರ ಮೂಲ ಲಕ್ಷಣ. ಈ ವೈರಸ್ ಜೀವಕ್ಕೇ ಹಾನಿತಂದೊಡ್ಡುತ್ತೆ. ಅದೇ ರೀತಿ ಇದೀಗ ಚೀನಾದಲ್ಲಿ ಕಂಡುಬಂದಿರುವ ಹೊಸ ವೈರಸ್ ಒಂದು ಕೀಟದ ಮೂಲಕ ಮನುಷ್ಯರಿಗೆ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪೂರ್ವ ಚೀನಾದ ಜಿಯಾಂಗ್ಸು ಮತ್ತು ಅನ್ಹುಯಿ ಪ್ರಾಂತ್ಯಗಳಲ್ಲಿ ಈಗಾಗಲೇ 60 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಥ್ರಂಬೋಸೈಟೋಫೆನಿಯಾ ಸಿಂಡ್ರೋಮ್ ಬುನ್ಯವೈರಸ್ (ಎಸ್ಎಫ್ಟಿಎಸ್ವಿ) ಎಂದು ಕರೆಯಲ್ಪಡುವ ಈ ವೈರಸ್ ಅಧ್ಯಯನದ ಪ್ರಕಾರ ಕೊರೋನಾ ರೀತಿಯ ಲಕ್ಷಣವನ್ನೇ ಹೊಂದಿದೆ. ಕೆಮ್ಮ ಮತ್ತು ಜ್ವರ ಇದರ ಮೂಲ ಲಕ್ಷಣಗಳಾಗಿವೆ. ಈ ವೈರಸ್ ಬಂದ ಕೂಡಲೇ ದೇಹದ ರಕ್ತದಲ್ಲಿರುವ ಲ್ಯುಕ್ಟೋಸೈಟ್ ಹಾಗೂ ಪ್ಲೇಟ್ಲೇಟ್ಸ್ಗಳ ಪ್ರಮಾಣ ಕಡಿಮೆ ಆಗಲಿದೆ. ಈ ವೈರಸ್ ತಿಗಣೆ ರೀತಿಯ ಕೀಟಗಳಿಂದ ಮನುಷ್ಯರಿಗೆ ಹರಡಿ ಆ ನಂತರ ಒಬ್ಬರಿಂದೊಬ್ಬರಿಗೆ ಹರಡುತ್ತಾ ಹೋಗುತ್ತದೆ.
ಈ ವೈರಸ್ ಕೂಡ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಾಣಿಸಿಕೊಂಡರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇದೀಗ ಚೀನಾದಲ್ಲಿ ಕೊರೋನಾ ವೈರಸ್ ಜೊತೆ ಈ ಹೊಸ ಎಸ್ಎಫ್ಟಿಎಸ್ವಿ ವೈರಸ್ ಕೂಡ ಬಂದಿದ್ದು ಇನ್ನಷ್ಟು ಹೆಣಗಾಡುವಂತೆ ಆಗಿದೆ.
30-05-26 06:45 pm
HK News Staffer
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ! ವಿಧಾನಸೌಧ ಮೆಟ...
29-05-26 10:41 pm
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
30-05-26 09:52 pm
HK News Desk
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
Master Travels Bus, Mangalore: ಕಾವೂರಿನಲ್ಲಿ ಬಸ...
30-05-26 02:10 pm
ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮ...
28-05-26 02:45 pm
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am