ಬ್ರೇಕಿಂಗ್ ನ್ಯೂಸ್
27-10-20 09:19 pm Headline Karnataka News Network ದೇಶ - ವಿದೇಶ
ಮನಿಲಾ (ಫಿಲಿಪೈನ್ಸ್), ಅಕ್ಟೋಬರ್ 27: ಕರಾವಳಿಯಲ್ಲಿ ಕೋಳಿ ಅಂಕ, ಅಕ್ರಮ ಕೋಳಿ ಅಂಕಕ್ಕೆ ಪೊಲೀಸರು ರೈಡ್ ಮಾಡೋದು ಕಾಮನ್. ಆದರೆ, ಫಿಲಿಪೈನ್ಸ್ ನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ, ಪೊಲೀಸ್ ಅಧಿಕಾರಿಯೇ ಸಾವನ್ನಪ್ಪಿದ ಪ್ರಸಂಗ ನಡೆದಿದೆ.

ಫಿಲಿಪೈನ್ಸ್ ನಲ್ಲಿ ಕೋಳಿ ಜಗಳ ಅಥವಾ ಟಪಡಾ ಪ್ರಸಿದ್ಧ ಜನಪದ ಕ್ರೀಡೆ. ಕೋಳಿಗಳ ಕಾಲುಗಳಿಗೆ ಹರಿತ ಬ್ಲೇಡ್ ಗಳನ್ನು ಕಟ್ಟಿ ಫೈಟ್ ಮಾಡಲು ಬಿಡುತ್ತಾರೆ. ಯಾವ ಕೋಳಿ ಜಯಿಸುತ್ತದೆ ಎಂದು ಜೂಜು ಕಟ್ಟುವ ದಂಧೆಯೂ ನಡೆಯುತ್ತದೆ. ಇದನ್ನು ಕಾನೂನು ವ್ಯಾಪ್ತಿಯಲ್ಲೇ ನಡೆಸಲು ಅಲ್ಲಿ ಅವಕಾಶ ನೀಡಲಾಗಿದೆ. ಆದರೆ, ಕಳೆದ ಕೊರೊನಾ ಸೋಂಕಿನ ದಾಳಿಯ ಬಳಿಕ ಈ ಕೋಳಿ ಸ್ಪರ್ಧೆಯನ್ನು ಬ್ಯಾನ್ ಮಾಡಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಜನ ಸೇರುವುದರಿಂದ ಕೋಳಿ ಅಂಕ ನಡೆಸಬಾರದೆಂದು ಸರಕಾರ ನಿಷೇಧ ಹೇರಿತ್ತು.

ಆದರೆ, ಉತ್ತರ ಫಿಲಿಪೈನ್ಸ್ ನಾರ್ಥರ್ನ್ ಸಮರ್ ಎಂಬ ನಗರದಲ್ಲಿ ಸರಕಾರದ ನೀತಿ ಉಲ್ಲಂಘಿಸಿ ಅಕ್ರಮವಾಗಿ ಕೋಳಿ ಅಂಕದ ಜೂಜಾಟ ಏರ್ಪಡಿಸಲಾಗಿತ್ತು. ಈ ವೇಳೆ, ಪೊಲೀಸರು ದಾಳಿ ನಡೆಸಿದ್ದು, ಕೋಳಿಯನ್ನು ವಶಕ್ಕೆ ಪಡೆಯುವಾಗ ಪೊಲೀಸ್ ಅಧಿಕಾರಿಯೊಬ್ಬರ ತೊಡೆಗೆ ಅದರ ಹರಿತ ಬ್ಲೇಡ್ ತಾಗಿದೆ. ಬ್ಲೇಡ್ ತೊಡೆಯ ಸಂದಿನಲ್ಲಿ ಸಿಲುಕಿಕೊಂಡಿದ್ದು, ರಕ್ತ ನಾಡಿಗಳು ತುಂಡಾಗಿ ರಕ್ತ ಸೋರಿಕೆಯಾಗಿದೆ. ತೀವ್ರ ರಕ್ತ ಸೋರಿಕೆಯಾಗಿ ಪೊಲೀಸ್ ಅಧಿಕಾರಿ ಬಳಿಕ ಆಸ್ಪತ್ರೆಯಲ್ಲಿ ಸಾವನ್ಪಪ್ಪಿದ್ದಾರೆ. ಫಿಲಿಪೈನ್ಸ್ ಇತಿಹಾಸದಲ್ಲಿ ಕೋಳಿ ಅಂಕದಲ್ಲಿ ಪೊಲೀಸ್ ಅಧಿಕಾರಿ ಸಾವು ಕಂಡಿದ್ದು ಇದೇ ಮೊದಲು ಎಂದು ನಾರ್ಥರ್ನ್ ಸಮರ್ ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಕರ್ನಲ್ ಅರ್ನೆಲ್ ಅಪುಡ್ ಹೇಳಿದ್ದಾರೆ.
A Philippine police officer was killed during a raid on an illegal cockfight after a rooster's blade sliced an artery in his leg.
17-04-26 07:27 pm
HK News Staffer
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ...
16-04-26 10:30 pm
ಫಲಿತಾಂಶ ಬರುವ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್; ದಾ...
16-04-26 09:43 pm
ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಅಂಕ ಬದಲು ಗ್ರೇಡ್ ;...
16-04-26 07:37 pm
17-04-26 08:08 pm
HK News Staffer
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
AI ಅವಾಂತರ ; ಗೂಗಲ್ 'ಜೆಮಿನಿ' ಅನ್ನೇ ಹೆಂಡತಿ ಎಂದು...
15-04-26 01:18 pm
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
17-04-26 08:56 pm
HK News Staffer
ಬುರುಡೆ ಗ್ಯಾಂಗ್ ಹೆಸರಿನಲ್ಲಿ ಹಾಸ್ಯ ; ಕಲಾವಿದರಿಗೆ...
17-04-26 03:02 pm
ಬೆಳ್ತಂಗಡಿಯಲ್ಲಿ ಎರಡು ಕಡೆ ಭೂಕಬಳಿಕೆ ; ವೀರೇಂದ್ರ ಹ...
17-04-26 12:33 pm
ಎಚ್ಐವಿ ಪೀಡಿತ ಮಕ್ಕಳ ಬಾಳಿಗೆ ಆಸರೆಯಾದ ಮಂಗಳೂರಿನ ತ...
17-04-26 11:25 am
ಆಟೋದಲ್ಲಿ ಒಡವೆಗಳಿದ್ದ ಬ್ಯಾಗ್ ಬಿಟ್ಟು ಹೋಗಿದ್ದ ಮಹಿ...
13-04-26 11:39 pm
17-04-26 06:48 pm
HK News Staffer
ದೂರವಾಣಿ ಮೂಲಕ ಕರೆ, ಬಾಡಿಗೆ ಮನೆಗಳಲ್ಲಿ ಮೀಟಿಂಗ್ ;...
16-04-26 10:36 pm
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm
ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿಯನ್ನು ಮೂರನೇ...
16-04-26 12:35 pm
ಮಂತ್ರಾಲಯ ಬಳಿ ಭೀಕರ ಅಪಘಾತ ; ರಾಯರ ದರ್ಶನಕ್ಕೆ ತೆರಳ...
16-04-26 11:21 am