ಬ್ರೇಕಿಂಗ್ ನ್ಯೂಸ್
21-02-23 10:13 pm HK News Desk ದೇಶ - ವಿದೇಶ
ನವದೆಹಲಿ, ಫೆ.21: ಯುಪಿಐ ಪಾವತಿ ಮೂಲಕ ಹೆಚ್ಚಿನ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಬ್ಯಾಂಕ್ ವಹಿವಾಟು ನಡೆಸುತ್ತಾರೆ. ಗೂಗಲ್ ಪೇ, ಪೇಟಿಎಂ ಇನ್ನಿತರ ಏಪ್ಸ್ ಗಳು ನೆಚ್ಚಿನ ತಾಣಗಳಾಗಿವೆ. ಡಿಜಿಟಲ್ ಇಕಾನಮಿಯಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಹೋಗಿದ್ದು, ಭಾರತೀಯರು ಇನ್ನು ಸಿಂಗಾಪುರದಲ್ಲಿರುವ ಬಂಧುಗಳೊಂದಿಗೆ ಅಲ್ಲಿನದ್ದೇ ಬ್ಯಾಂಕುಗಳ ಜೊತೆಗೆ ನೇರವಾಗಿ ವ್ಯವಹರಿಸಲು ಅವಕಾಶ ನೀಡಲಾಗಿದೆ.
ಯುಪಿಐ ವ್ಯವಸ್ಥೆಯ ಹೊಸ ಅವತರಣಿಕೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲೀ ಸಿಂಗ್ ಹೂನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮತ್ತು ಸಿಂಗಾಪುರದ ಮಾನಿಟರಿ ಫಂಡ್ ಅಥಾರಿಟಿಯ ಆಡಳಿತ ನಿರ್ದೇಶಕ ರವಿ ಮೆನನ್ ಉಪಸ್ಥಿತರಿದ್ದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಹೊಸ ಬ್ಯಾಂಕಿಂಗ್ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.
ಈ ಮೂಲಕ ಉಭಯ ದೇಶಗಳ ಪ್ರಜೆಗಳು ಒಬ್ಬರಿಗೊಬ್ಬರು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಗೂಗಲ್ ಪೇ, ಪೇಟಿಎಂ ಇನ್ನಿತರ ಏಪ್ ಗಳಿಂದ ಸಿಂಗಾಪುರದ ಬ್ಯಾಂಕ್ ಖಾತೆಗಳಿಗೂ ಹಣ ಪಾವತಿ ಮಾಡಬಹುದು. ಸಿಂಗಾಪುರದಲ್ಲಿರುವ ಎನ್ಆರ್ ಐ ಇನ್ನಿತರ ನಿವಾಸಿಗಳು ತಮ್ಮ ಭಾರತ ಮೂಲದ ವಹಿವಾಟುಗಳಿಗೆ ಡಿಜಿಟಲ್ ಪಾವತಿ ಮಾಡಬಹುದಾಗಿದೆ. ಸಿಂಗಾಪುರದಲ್ಲಿ ಅತಿ ಹೆಚ್ಚು ಭಾರತೀಯ ಮೂಲದವರಿದ್ದಾರೆ. ಅಂದಾಜು ಆರೂವರೆ ಲಕ್ಷ ಮಂದಿ ಭಾರತದ ನಿವಾಸಿಗಳಿದ್ದಾರೆ. ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ಅಲ್ಲಿ ನೆಲೆಸಿದವರು ಇದ್ದಾರೆ. ಅವರಿಗೆಲ್ಲ ಯುಪಿಐ ಪಾವತಿ ವ್ಯವಸ್ಥೆಯಿಂದ ಲಾಭ ಆಗಲಿದೆ.
Indians can now use Google Pay, PayTM and other digital payment systems to send money to their friends, colleagues and relatives in Singapore as Unified Payments Interface (UPI) gets connected to PayNow on Tuesday, February 21. Enabling faster and cost-efficient transfer of money, the linkage of two real-time payment systems will be witnessed by Prime Minister Narendra Modi and his Singapore counterpart Lee Hsien Loong via videoconferencing.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
17-07-26 10:32 am
HK News Staffer
ಹಾರ್ಮುಜ್ನಲ್ಲಿ ಇರಾನ್ ಅಟ್ಟಹಾಸ! ಮತ್ತೆ ಎರಡು ಟ್ಯಾ...
14-07-26 08:20 pm
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
17-07-26 10:25 pm
HK News Staffer
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
17-07-26 09:07 pm
HK News Staffer
ಮಠದಕಣಿ ಮನೆ ಕಳ್ಳತನ ಬೆನ್ನತ್ತಿದ ಬರ್ಕೆ ಪೊಲೀಸರು; ನ...
17-07-26 08:11 pm
ಬಿಸಿ ರೋಡಿನಲ್ಲಿ ಯುವತಿ ಕೊಂದ ಆರೋಪಿ ಚೇತನ್ ಪಚ್ಚನಾಡ...
17-07-26 12:58 pm
Bc Road Murder Update, Mangalore: ಏಕಮುಖದ ಪ್ರೀ...
16-07-26 09:26 pm
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm