ಬ್ರೇಕಿಂಗ್ ನ್ಯೂಸ್
21-02-23 07:39 pm HK News Desk ದೇಶ - ವಿದೇಶ
ಹೈದರಾಬಾದ್, ಫೆ.21 : ನಾಲ್ಕು ವರ್ಷದ ಬಾಲಕನನ್ನು ಬೀದಿ ನಾಯಿಗಳು ಕಚ್ಚಿ ಎಳೆದಾಡಿ ಕೊಂದು ಹಾಕಿದ ಹೃದಯ ವಿದ್ರಾವಕ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು ಇದರ ಸಿಸಿಟಿವಿ ವೈರಲ್ ಆಗಿದೆ.
ಹೈದರಾಬಾದ್ ನಗರದ ಅಪಾರ್ಟ್ಮೆಂಟ್ ಒಂದರ ಆವರಣದಲ್ಲಿ ಫೆ.19ರಂದು ಘಟನೆ ನಡೆದಿದೆ. ಬಾಲಕನ ತಂದೆ ಅಪಾರ್ಟ್ಮೆಂಟ್ ವಾಚ್ ಮನ್ ಆಗಿದ್ದು ಬಾಲಕ ಒಬ್ಬಂಟಿಯಾಗಿ ಹೊರಕ್ಕೆ ಬಂದಿದ್ದಾಗ ನಾಯಿಗಳು ಮುತ್ತಿಕೊಂಡಿವೆ. ಬಳಿಕ ಮೂರ್ನಾಲ್ಕು ನಾಯಿಗಳು ಒಟ್ಟಾಗಿದ್ದು ಮಗುವನ್ನು ಎಳೆದಾಡಿದ್ದು ಕಚ್ಚಿ ಕಚ್ಚಿ ಸಾಯಿಸಿದೆ.
ಮಗುವಿನ ಚೀರಾಟ ಕೇಳಿದ ತಂದೆ ಗಂಗಾಧರ್ ಓಡಿ ಬಂದಿದ್ದು ಗಂಭೀರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಒಯ್ದಿದ್ದಾರೆ. ಅಷ್ಟರಲ್ಲಿ ಮಗು ಸಾವು ಕಂಡಿತ್ತು. ಗಂಗಾಧರ್ ನಿಜಾಮ್ ನಗರದ ನಿವಾಸಿಯಾಗಿದ್ದು ಇತ್ತೀಚೆಗೆ ಹೈದರಾಬಾದ್ ನಗರಕ್ಕೆ ಬಂದು ನೆಲೆಸಿದ್ದ. ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಮಗು ಸಾವನ್ನಪ್ಪಿದ ಘಟನೆಯ ದೃಶ್ಯ ಅಪಾರ್ಟ್ಮೆಂಟ್ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪುಟಾಣಿ ಮಗು ನಡೆದು ಬರುತ್ತಲೇ ನಾಯಿಗಳು ಮುತ್ತಿಕೊಂಡು ಮಾಂಸದ ಮುದ್ದೆಯ ರೀತಿ ಎಳೆದಾಡಿದ ಭೀಕರ ದೃಶ್ಯ ಸೆರೆಯಾಗಿದ್ದು ಮನಸ್ಸು ಕಲಕುವಂತಿದೆ. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶವೂ ವ್ಯಕ್ತವಾಗಿದೆ.
ಬೀದಿ ನಾಯಿಗಳಿಂದ ಮಕ್ಕಳ ಸಾವಾಗುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕನೊಬ್ಬ ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟಿದ್ದ. ಬಿಲಾಸ್ಪುರದಲ್ಲಿರುವ ತನ್ನ ಮನೆಯ ಹಿಂಭಾಗದಲ್ಲಿ ಆಟವಾಡುತ್ತಿದ್ದಾಗಲೇ ಘಟನೆ ನಡೆದಿತ್ತು.
#hyderabad dog bite pic.twitter.com/mJkKOnaof3
— Sai vineeth(Journalist🇮🇳) (@SmRtysai) February 21, 2023
A horrific incident in which a pack of dogs attacked a four-year-old boy and killed him, came to light two days later on February 21. The boy, Pradeep, was attacked by four dogs on February 19,when he was walking on the road, closer to his father’s workplace in an automobile workshop, in Amberpet.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 07:31 pm
HK News Desk
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm