ಬ್ರೇಕಿಂಗ್ ನ್ಯೂಸ್
13-10-20 04:06 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 13: ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯಿ ಕಥರಿಯಾ ಗೋವಿನ ಸೆಗಣಿಯಿಂದ ಮಾಡಿದ ಚಿಪ್ ಅನ್ನು ಹೊರತಂದಿದ್ದಾರೆ. ಮೊಬೈಲ್ ಫೋನ್ ಹೊರಸೂಸುವ ವಿಕಿರಣವನ್ನು ಈ ಚಿಪ್ ತಡೆಯಬಲ್ಲದು. ಆಮೂಲಕ ವಿಕಿರಣ ಸಂಬಂಧಿ ರೋಗಗಳನ್ನು ಈ ಚಿಪ್ ನಿವಾರಿಸಲಿದೆ ಎಂದು ಕಥರಿಯಾ ಹೇಳಿದ್ದಾರೆ.
ಕೇಂದ್ರ ಸರಕಾರದ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಇಲಾಖೆಯಡಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ಕಾಮಧೇನು ಆಯೋಗದಿಂದ ಈ ಹೊಸ ಮಾದರಿಯ ಚಿಪ್ ಅನ್ನು ಬಿಡುಗಡೆ ಮಾಡಲಾಗಿದೆ. ಸಗಣಿ ಉತ್ಪನ್ನಗಳ ಪ್ರಚಾರಕ್ಕಾಗಿ ಆಯೋಗದ ವತಿಯಿಂದ ಕಾಮಧೇನು ದೀಪಾವಳಿ ಹೆಸರಲ್ಲಿ ರಾಷ್ಟ್ರ ಮಟ್ಟದ ಅಭಿಯಾನ ಹಮ್ಮಿಕೊಂಡಿದ್ದು, ಕಥರಿಯಾ ದೆಹಲಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೋವಿನ ಸೆಗಣಿ ವಿಕಿರಣ ವಿರೋಧಿಯಾಗಿದ್ದು, ಎಲ್ಲರನ್ನು ಕಾಪಾಡುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಈ ಚಿಪ್ ಅನ್ನು ಮೊಬೈಲ್ ಫೋನ್ ಗಳಲ್ಲಿ ಬಳಸಬಹುದು. ಇದರಿಂದ ಮೊಬೈಲ್ ವಿಕಿರಣದಿಂದ ಬರುವ ರೋಗಗಳನ್ನು ನಿಯಂತ್ರಿಸಬಹುದು ಎಂದು ಕಥಿರಿಯಾ ಹೇಳಿದ್ದಾರೆ.
ಹೊಸ ಚಿಪ್ ಗೆ ಗೋಸತ್ವ ಕವಚ ಎಂದು ಹೆಸರಿಡಲಾಗಿದ್ದು ಗುಜರಾತಿನ ರಾಜ್ ಕೋಟ್ ಮೂಲದ ಶ್ರೀಜಿ ಗೋಶಾಲೆಯಲ್ಲಿ ಇದನ್ನು ಆವಿಷ್ಕರಿಸಲಾಗಿದೆ. ಈ ಗೋಶಾಲೆಯನ್ನು ಕಾಮಧೇನು ಆಯೋಗದಿಂದಲೇ 2019ರಲ್ಲಿ ರಚಿಸಲಾಗಿದ್ದು ಗೋವಿನ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಲು ಆರಂಭಿಸಲಾಗಿತ್ತು. ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಆಯೋಗದಿಂದ ಗೋವುಗಳ ಉತ್ಪನ್ನದ ಪ್ರಚಾರಕ್ಕಾಗಿ ರಾಷ್ಟ್ರ ಮಟ್ಟದ ಅಭಿಯಾನ ನಡೆಸಲಾಗುತ್ತಿದೆ. ಇದೇ ವೇಳೆ, ಈ ಬಾರಿಯ ಹಬ್ಬದ ವೇಳೆ ಚೀನಾ ನಿರ್ಮಿತ ಪಟಾಕಿಗಳನ್ನು ಸುಡುವ ಬದಲು ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಜನರಿಗೆ ಕಥರಿಯಾ ಕರೆ ನೀಡಿದ್ದಾರೆ.
Rashtriya Kamdhenu Aayog (RKA) chairman Vallabhbhai Kathiria unveiled a ''chip'' made of cow dung and declared that it reduces radiation from mobile handsets and it will be a protection against all diseases.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm