ಬ್ರೇಕಿಂಗ್ ನ್ಯೂಸ್
12-10-20 11:52 am Headline Karnataka News Network ದೇಶ - ವಿದೇಶ
ಮುಂಬೈ, ಅಕ್ಟೋಬರ್ 12: ಆ್ಯಸಿಡ್ ಅಟ್ಯಾಕ್ ಸಂತ್ರಸ್ತರಿಗಾಗಿಯೇ ಎನ್ ಜಿಓ ಸಂಘಟನೆಯೊಂದು ಸೂಪರ್ ಮಾರ್ಕೆಟ್ ಆರಂಭಿಸಿದೆ. ಸಹಾಸ್ ಫೌಂಡೇಶನ್ ಎನ್ನುವ ಎನ್ ಜಿಓ ಸಂಸ್ಥೆ ಬಾಂದ್ರಾದಲ್ಲಿ ಸೂಪರ್ ಮಾರ್ಕೆಟ್ ಆರಂಭಿಸಿದ್ದು ಬಿಜೆಪಿ ನಾಯಕಿ ಚಿತ್ರಾ ವಾಘ್ ಮಾರ್ಕೆಟ್ ಉದ್ಘಾಟಿಸಿದ್ದಾರೆ.
ಸ್ವತಃ ಆ್ಯಸಿಡ್ ಸಂತ್ರಸ್ತೆ ಆಗಿರುವ ದೌಲತ್ ಬಿ ಖಾನ್ ಎನ್ನುವ ಮಹಿಳೆ 2016ರಲ್ಲಿ ಸಹಾಸ್ ಫೌಂಡೇಶನ್ ಆರಂಭಿಸಿದ್ದರು. ಆ್ಯಸಿಡ್ ದಾಳಿ ಸಂತ್ರಸ್ತರ ಏಳಿಗೆಗಾಗಿಯೇ ಈ ಸಂಸ್ಥೆ ಸ್ಥಾಪಿಸಲಾಗಿತ್ತು. ಸೂಪರ್ ಮಾರ್ಕೆಟ್ ಮೂಲಕ ಆ್ಯಸಿಡ್ ಸಂತ್ರಸ್ತರು ಕೂಡ ಸಮಾಜದಲ್ಲಿ ಸ್ವಾವಲಂಬಿ ಆಗಿ ಬೆಳೆಯಲು ಅವಕಾಶ ಕಲ್ಪಿಸಲಿದೆ ಎಂದು ದೌಲತ್ ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಫಂಡ್ ಕಲೆಕ್ಷನ್ ಸಾಧ್ಯವಾಗಲಿಲ್ಲ. ಹೀಗಾಗಿ ಫಂಡಿಂಗ್ ಮಾಡೋರನ್ನು ಮನವೊಲಿಸಿ, ಸಂತ್ರಸ್ತರಿಗೆ ಉದ್ಯೋಗ ನೀಡುವುದಕ್ಕಾಗಿ ಸೂಪರ್ ಮಾರ್ಕೆಟ್ ಆರಂಭಿಸಲು ನಿರ್ಧರಿಸಿದೆವು. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಅಗತ್ಯವಾಗಿ ಪರಿಣಮಿಸಿದ್ದು ಗ್ರೋಸರಿ ಮತ್ತು ಮೆಡಿಸಿನ್. ಹಾಗಾಗಿ ಹೆಚ್ಚು ಜನರಿಗೆ ಬೇಕಾಗುವ ಸೂಪರ್ ಮಾರ್ಕೆಟ್ ಆರಂಭಿಸಿದೆವು. ಆ್ಯಸಿಡ್ ಸಂತ್ರಸ್ತರು ಇನ್ನೊಬ್ಬರಿಗೆ ಹೊರೆಯಾಗಬಾರದೆಂಬ ಉದ್ದೇಶ ಇದರ ಹಿಂದಿದೆ ಎಂದು ಹೇಳುತ್ತಾರೆ, ಫೌಂಡೇಶನ್ ಸ್ಥಾಪಕಿ ದೌಲತ್.
ನನಗನಿಸುತ್ತೆ, ಇದು ದೇಶದಲ್ಲೇ ಮೊದಲ ಉಪಕ್ರಮ ಎಂದು. ಆ್ಯಸಿಡ್ ಸಂತ್ರಸ್ತರೆಲ್ಲ ಒಂದಾಗಿ ಹಣ ಸಂಗ್ರಹಿಸಿ ಸೂಪರ್ ಮಾರ್ಕೆಟ್ ಸ್ಥಾಪಿಸಿದ್ದಾರೆ. ಈ ಮೂಲಕ ದೇಶಕ್ಕೊಂದು ಸಂದೇಶ ನೀಡಿದ್ದಾರೆ. ದುರಂತಕ್ಕೀಡಾಗಿ ಜೀವನದಲ್ಲಿ ಬೇಸತ್ತವರು ತಮ್ಮ ಕಾಲಲ್ಲಿ ಸ್ವತಃ ನಿಂತುಕೊಳ್ಳುವ ಮೂಲಕ ಹೊಸ ಸಂದೇಶ ನೀಡಿದಂತಾಗಿದೆ ಎಂದು ಬಿಜೆಪಿ ನಾಯಕಿ ಚಿತ್ರಾ ವಾಘ್ ಪ್ರತಿಕ್ರಿಯಿಸಿದ್ದಾರೆ.
A supermarket, which will provide work to acid attack survivors, was inaugurated by BJP Leader Chitra Wagh in Bandra, Mumbai.
18-10-25 09:11 pm
HK News Desk
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
ಆರೆಸ್ಸೆಸ್ ಚಟುವಟಿಕೆ ಕಡಿವಾಣಕ್ಕೆ ಕೌಂಟರ್ ; ಸಾರ್ವಜ...
17-10-25 05:27 pm
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಬ್ರೇಕ...
16-10-25 09:04 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
18-10-25 11:01 pm
Mangalore Correspondent
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
Ullal, Someshwara, Pillar: ಸೋಮೇಶ್ವರ ಪಿಲಾರಿನಲ್...
17-10-25 09:36 pm
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
18-10-25 10:49 pm
Mangalore Correspondent
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm
Illegal Arms Case, Mahesh Shetty Timarodi: ಅಕ...
18-10-25 01:52 pm
ಪ್ರೀತಿ ನಿರಾಕರಿಸಿದ ಕಾಲೇಜು ಯುವತಿಯನ್ನು ನಡುರಸ್ತೆಯ...
17-10-25 03:27 pm