ಬ್ರೇಕಿಂಗ್ ನ್ಯೂಸ್
08-10-20 07:31 pm Headline Karnataka News Network ದೇಶ - ವಿದೇಶ
ಮುಂಬೈ, ಅಕ್ಟೋಬರ್ 8: ಸುಶಾಂತ್ ಸಿಂಗ್ ಸಾವಿನ ಬಗ್ಗೆ ಆತ್ಮಹತ್ಯೆಯಲ್ಲ, ಕೊಲೆಯೆಂದು ಸುದ್ದಿ ಮಾಡಿ ಮುಖಭಂಗಕ್ಕೀಡಾಗಿರುವ ರಿಪಬ್ಲಿಕ್ ಟಿವಿ ವಿರುದ್ಧ ಮುಂಬೈ ಪೊಲೀಸರೇ ತಿರುಗಿ ಬಿದ್ದಿದ್ದಾರೆ. ರಿಪಬ್ಲಿಕ್ ಸೇರಿದಂತೆ ಮೂರು ಟಿವಿ ವಾಹಿನಿಗಳು ಟಿಆರ್ ಪಿ ಹೆಚ್ಚಿಸಿಕೊಂಡು ಆದಾಯ ಪಡೆದುಕೊಳ್ಳುವುದಕ್ಕಾಗಿ ತಂತ್ರ ಹೂಡಿದ್ದರು. ಮೋಸದ ಜಾಲದ ಮೂಲಕ ಮನೆ, ಮನೆಗೆ ತಮ್ಮ ಎಕ್ಸಿಕ್ಯೂಟಿವ್ ಗಳನ್ನು ಕಳಿಸಿ ಬಡವರಿಗೆ ಹಣಕೊಟ್ಟು ಟಿಆರ್ ಪಿ ಹೆಚ್ಚಿಸಿಕೊಳ್ಳುತ್ತಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮುಂಬೈ ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್, ಅರ್ನಾಬ್ ಗೋಸ್ವಾಮಿ ಒಡೆತನದ ರಿಪಬ್ಲಿಕ್ ಟಿವಿ, ಮರಾಠಿ ಭಾಷೆಯ ಫ್ಯಾಕ್ಟ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ವಾಹಿನಿಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಮರಾಠಿ ಟಿವಿ ವಾಹಿನಿಗಳ ಇಬ್ಬರು ಮಾಲೀಕರನ್ನು ಬಂಧಿಸಲಾಗಿದೆ. ರಿಪಬ್ಲಿಕ್ ಟಿವಿ ಡೈರೆಕ್ಟರ್ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ಪ್ರಚಾರ ನೀಡುವುದಕ್ಕಾಗಿ ಮತ್ತು ತಮ್ಮದೇ ಚಾನೆಲ್ ಹಾಕುವಂತೆ ಬಡ ಮನೆಗಳ ಮಂದಿಗೆ ಹಣ ಕೊಟ್ಟು ಪ್ರೇರಿಸುತ್ತಿದ್ದರು. ಈ ಮೂಲಕ ಟಿಆರ್ ಪಿ ಹೆಚ್ಚಿರುವುದಾಗಿ ತೋರಿಸಿಕೊಂಡು ಹೆಚ್ಚು ಆದಾಯ ಬರುವ ಜಾಹೀರಾತು ಪಡೆಯುತ್ತಿದ್ದರು. ಈ ಮೂಲಕ ಹೆಚ್ಚು ಪಡೆದಿದ್ದು ತನಿಖೆಯಲ್ಲಿ ದೃಢ ಪಟ್ಟರೆ ವಾಹಿನಿಗಳ ಖಾತೆಯನ್ನು ಸೀಝ್ ಮಾಡುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ, ಮುಂಬೈ ಪೊಲೀಸ್ ಕಮಿಷನರ್ ಸುಳ್ಳು ಮಾಹಿತಿಗಳನ್ನು ಹೇಳುತ್ತಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
Fake TRP racket busted! Names republic TV as one of the 3 channels under scanner. People paid off to manipulate viewership numbers. 2 Accused arrested
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 01:05 pm
Udupi Correspondent
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
02-09-25 11:22 am
Mangalore Correspondent
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm