ಬ್ರೇಕಿಂಗ್ ನ್ಯೂಸ್
08-10-20 06:18 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 08: ಶಾಲೆಯಲ್ಲಿ ಕಲಿಸಿದ ಗುರುಗುಳು ದೊಡ್ಡವರಾದ ಮೇಲೆ ಕೆಲವರಿಗೆ ಗುರುತು ಸಿಗುವುದೇ ಕಷ್ಟ. ಅಂಥದರಲ್ಲಿ ಇಲ್ಲೊಬ್ಬ ತಾನು ಶಾಲೆಯಲ್ಲಿ ಕಷ್ಟದಲ್ಲಿದ್ದಾಗ, 500 ರೂಪಾಯಿ ನೀಡಿ ಯಾವುದೋ ಇಂಟರ್ವ್ಯೂಗೆ ಕಳಿಸಿದ್ದ ಶಿಕ್ಷಕರನ್ನು ಸ್ಮರಿಸಿ, ಅವರಿಗೆ 30 ಲಕ್ಷ ರೂಪಾಯಿ ಗುರುದಕ್ಷಿಣೆ ನೀಡಿದ್ದಾನೆ.
ಐಡಿಎಫ್ ಸಿ ಬ್ಯಾಂಕಿನ ಎಂಡಿ ಮತ್ತು ಸಿಇಓ ಆಗಿರುವ ವಿ.ವೈದ್ಯನಾಥನ್ ಎಂಬವರೇ ಹೀಗೆ ದೊಡ್ಡ ಗಿಫ್ಟ್ ನೀಡಿ ಸುದ್ದಿಯಾದವರು. ಹೈಸ್ಕೂಲಿನಲ್ಲಿ ಗಣಿತ ಮೇಷ್ಟ್ರು ಆಗಿದ್ದ ಗುರುದಯಾಲ್ ಸ್ವರೂಪ್ ಸೈನಿ ಅವರನ್ನು ಗುರುತಿಸಿ ತನ್ನ 30 ಲಕ್ಷ ರೂಪಾಯಿ ಮೌಲ್ಯದ ಒಂದು ಲಕ್ಷ ಈಕ್ವಿಟಿ ಶೇರನ್ನು ಗುರುವಿನ ಖಾತೆಗೆ ವರ್ಗಾಯಿಸಿದ್ದಾರೆ. ತಾನು ಸಣ್ಣಂದಿನಲ್ಲಿ ಕಷ್ಟಪಟ್ಟಿದ್ದಾಗ 500 ರೂಪಾಯಿ ನೀಡಿದ್ದನ್ನು ನೆನಪಲ್ಲಿ ಇಟ್ಟುಕೊಂಡಿದ್ದ ವೈದ್ಯನಾಥನ್, ಈಗ ಗುರುವಿಗೆ ಮರಳಿ ಕಾಣಿಕೆ ನೀಡಿದ್ದಾರೆ.
ಆಗ್ರಾದಲ್ಲಿರುವ ಸೈನಿಯ ಖಾತೆಗೆ ಇಷ್ಟೊಂದು ದೊಡ್ಡ ಮೊತ್ತ ವರ್ಗಾಯಿಸಲ್ಪಟ್ಟಿರುವುದನ್ನು ಬ್ಯಾಂಕ್ ಅಧಿಕಾರಿಗಳು ಸೈನಿಗೆ ತಿಳಿಸಿದ್ದಾರೆ. ಈ ವಿಚಾರ ಫೇಸ್ಬುಕ್ ನಲ್ಲಿ ವೈರಲ್ ಆಗುತ್ತಿದ್ದಂತೆ ವೈದ್ಯನಾಥನ್ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅದ್ಭುತ, ಈ ಕಾಲದಲ್ಲಿ ಹೀಗೆ ಕಲಿಸಿದ ಗುರುವನ್ನು ನೆನಪಲ್ಲಿ ಇಟ್ಕೊಳ್ಳೋರು ಇದ್ದಾರೆ, ವೈದ್ಯನಾಥನ್ ದೊಡ್ಡ ಕಾಣಿಕೆ ನೀಡಿದ್ದಾರೆ ಎಂದು ನೆಟ್ಟಿಗರು ಶಹಭಾಷ್ ಹೇಳಿದ್ದಾರೆ. ನಿಜವಾದ ಗುರು- ಶಿಷ್ಯ ಸಂಬಂಧ ಎಂದರೆ ಇದು. ಈಗಿನ ಕಾಲದಲ್ಲಿ ಇಂಥ ಸಂಬಂಧ ಕಾಣಸಿಗುವುದು ತುಂಬ ವಿರಳ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು, ಹೆಚ್ಚಿನ ವಿದ್ಯಾರ್ಥಿಗಳಿಗೆ ಕಷ್ಟಕಾಲದಲ್ಲಿ ನೆರವಾಗುವ ಶಿಕ್ಷಕರು ಸಿಗುವುದಿಲ್ಲ. ಹಾಗೆಯೇ ಹೆಚ್ಚಿನ ವಿದ್ಯಾರ್ಥಿಗಳು ತಾವು ದೊಡ್ಡವರಾದ ಬಳಿಕ ಗುರುಗಳನ್ನು ನೆನಪಲ್ಲಿ ಇಟ್ಟುಕೊಳ್ಳುವುದೂ ಇಲ್ಲ ಎಂದಿದ್ದಾರೆ.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm