ಬ್ರೇಕಿಂಗ್ ನ್ಯೂಸ್
08-07-22 07:53 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 8: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪೈಗಂಬರ್ ಅವಹೇಳನ ಹೇಳಿಕೆಯ ನೆಪದಲ್ಲಿ ಮಲೇಶ್ಯಾ ಮತ್ತು ಇಂಡೋನೇಷ್ಯಾದ ತೀವ್ರಗಾಮಿಗಳು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಸೈಬರ್ ದಾಳಿಗೆ ಮುಂದಾಗಿದ್ದಾರೆ. ಈಗಾಗ್ಲೇ ಜಗತ್ತಿನ ಮುಸ್ಲಿಂ ಸೈಬರ್ ಹ್ಯಾಕರ್ಸ್ ಗಳಿಗೆ ಮಲೇಶ್ಯಾ ಮತ್ತು ಇಂಡೋನೇಶ್ಯಾದ ಸೈಬರ್ ದಾಳಿಕೋರರು ಭಾರತದ ವಿರುದ್ಧ ಮುಗಿಬೀಳುವಂತೆ ಕರೆ ನೀಡಿದ್ದಾರೆ.
ಮಲೇಶ್ಯಾದ ಡ್ರ್ಯಾಗನ್ ಫೋರ್ಸ್ ಮತ್ತು ಹ್ಯಾಕ್ಟಿವಿಸ್ಟ್ ಇಂಡೋನೇಶ್ಯಾ ಹೆಸರಿನ ದಾಳಿಕೋರರು ಭಾರತದ ವಿರುದ್ಧ ಸೈಬರ್ ದಾಳಿ ಆರಂಭಿಸಿದ್ದು ಈ ಬಗ್ಗೆ ಅಹ್ಮದಾಬಾದ್ ಸೈಬರ್ ಪೊಲೀಸರು ಇಂಡಿಯಾ ಟುಡೇಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಅಹ್ಮದಾಬಾದ್ ಸೈಬರ್ ಪೊಲೀಸರು ಮಲೇಶ್ಯಾ ಮತ್ತು ಇಂಡೋನೇಶ್ಯಾ ಸರಕಾರಗಳಿಗೆ ಪತ್ರ ಬರೆದಿದ್ದು, ಈ ರೀತಿಯ ಬೆದರಿಕೆ ಹಾಕಿರುವ ತಂಡಗಳ ವಿರುದ್ಧ ಕ್ರಮ ಕೈಗೊಳ್ಳಲು ಕೋರಿದ್ದಾರೆ. ಅಲ್ಲದೆ, ಇಂಟರ್ ಪೋಲ್ ವಿಭಾಗಕ್ಕೂ ಪತ್ರ ಬರೆದು ಇದರ ಬಗ್ಗೆ ಲುಕ್ ಔಟ್ ನೋಟೀಸ್ ಜಾರಿಗೊಳಿಸುವಂತೆ ಕೇಳಿಕೊಂಡಿದ್ದಾರೆ.
ಈಗಾಗಲೇ ಭಾರತದ ಎರಡು ಸಾವಿರಕ್ಕೂ ವೆಬ್ ಸೈಟ್ ಗಳನ್ನು ಈ ಹ್ಯಾಕರ್ ಗಳು ಹಾಳು ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ತಿಳಿಸಿದ್ದಾರೆ. ಥಾಣೆ ಪೊಲೀಸರ ವೆಬ್ ಸೈಟ್, ಆಂಧ್ರಪ್ರದೇಶ ಪೊಲೀಸರ ವೆಬ್ ಸೈಟ್, ಅಸ್ಸಾಂನ ನ್ಯೂಸ್ ಚಾನೆಲ್ ಲೈವನ್ನು ಹ್ಯಾಕ್ ಮಾಡಲಾಗಿದೆ. ಇದನ್ನು ಮಲೇಶ್ಯನ್ ಸೈಬರ್ ದಾಳಿಕೋರರೇ ಮಾಡಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ನ್ಯೂಸ್ ಚಾನೆಲ್ ಲೈವ್ ಆಗುತ್ತಿರುವ ಸಂದರ್ಭದಲ್ಲೇ ಹ್ಯಾಕ್ ಆಗಿದ್ದು ನೇರವಾಗಿ ಪರದೆಯಲ್ಲಿ ಪಾಕಿಸ್ಥಾನದ ಧ್ವಜ ಕಾಣಿಸಿಕೊಂಡಿದೆ. ಅಲ್ಲದೆ, ಭಾರತೀಯರೇ ಪ್ರವಾದಿ ಮಹಮ್ಮದರಿಗೆ ಗೌರವ ಕೊಡಿ, ನೀವು ಇಸ್ಲಾಮ್ ಬಗ್ಗೆ ಮತ್ತೆ ಮತ್ತೆ ಅಪಮಾನ ಮಾಡುತ್ತಿದ್ದೀರಿ, ನೀವು ನಮ್ಮ ಸಹನೆಯ ಅರ್ಥವನ್ನು ಮಾಡಿಕೊಂಡಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಜಗತ್ತಿನ ಮುಸ್ಲಿಮರಲ್ಲಿ ಕ್ಷಮೆ ಕೇಳಿ. ನಾವು ಅಪಮಾನವನ್ನು ಸಹಿಸಿಕೊಂಡು ಎಂದಿಗೂ ಹಾಗೇ ಇರುವುದಿಲ್ಲ. hacked by team revolution PK ಎಂಬುದಾಗಿ ಕೆಳ ಬದಿಯಲ್ಲಿ ಕಾಣಿಸಿಕೊಂಡಿದೆ.
ಇದಲ್ಲದೆ, ನೂಪುರ್ ಶರ್ಮಾ ಅವರ ವಿಳಾಸ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮಾಹಿತಿಗಳನ್ನು ಸೈಬರ್ ದಾಳಿಕೋರರು ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದು, ಈಕೆಯ ಮೇಲೆ ಸೇಡು ತೀರಿಸಿಕೊಳ್ಳುವಂತೆ ಮುಸ್ಲಿಮರಿಗೆ ಪ್ರೇರಣೆ ನೀಡುತ್ತಿದ್ದಾರೆ. ನೂಪುರ್ ಶರ್ಮಾ ಟೀಕೆಯ ಬಗ್ಗೆ ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಕಿಡಿಕಾರಿದ ಬೆನ್ನಲ್ಲೇ ಆಕೆಯನ್ನು ವಕ್ತಾರ ಹುದ್ದೆಯಿಂದ ವಜಾ ಮಾಡಲಾಗಿತ್ತು. ಅಲ್ಲದೆ, ಆಕೆಯ ಮೂಲಕ ಪೈಗಂಬರ್ ಅವಹೇಳನದ ಬಗ್ಗೆ ಕ್ಷಮೆಯನ್ನೂ ಕೇಳಿಸಲಾಗಿದೆ.
Hackers from Malaysia and Indonesia have waged a cyber war against India over now-suspended BJP spokesperson Nupur Sharma’s remarks on the Prophet, the crime branch of the Ahmedabad Police told India Today TV.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm