ಬ್ರೇಕಿಂಗ್ ನ್ಯೂಸ್
29-09-20 05:20 pm Bangalore Correspondent ದೇಶ - ವಿದೇಶ
ಬೆಂಗಳೂರು, ಸೆಪ್ಟಂಬರ್ 29: ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್, ಇಡೀ ಜಗತ್ತನ್ನೇ ತತ್ತರಿಸುವಂತೆ ಮಾಡಿರುವ ಬೆನ್ನಲ್ಲೇ ಈಗ ಚೀನಾದಿಂದ ಮತ್ತೊಂದು ರೀತಿಯ ವೈರಸ್ ಭಾರತಕ್ಕೆ ಲಗ್ಗೆ ಇಟ್ಟಿರುವುದು ದೃಢಪಟ್ಟಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಕ್ಯಾಟ್ ಕ್ಯೂ ವೈರಸ್ (CQV - Cat Que Virus) ಎಂದು ಹೆಸರಿಸಲಾಗಿರುವ ಈ ವೈರಸ್ ಚೀನಾ ಮತ್ತು ವಿಯೆಟ್ನಾಂ ದೇಶಗಳ ಹಲವರಲ್ಲಿ ಸೋಂಕಿಗೆ ಕಾರಣವಾಗಿದೆ. ಇದೇ ವೇಳೆ, ಭಾರತದಲ್ಲೂ ಈ ವೈರಸ್ ಕಾಣಿಸಿಕೊಂಡಿದ್ದು ಪತ್ತೆಯಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ನಡೆಸಿದ ಅಧ್ಯಯನದಲ್ಲಿ ಎರಡು ಸಿಕ್ಯೂವಿ ಸೋಂಕು ಪ್ರಕರಣ ಭಾರತದಲ್ಲಿ ಪತ್ತೆಯಾಗಿದೆ. ಆ ಎರಡೂ ಪ್ರಕರಣ ಕರ್ನಾಟಕದಲ್ಲೇ ಇರುವುದು ಆತಂಕ ಮೂಡಿಸಿದೆ. ಚೀನಾ ಮತ್ತು ವಿಯೆಟ್ನಾನಲ್ಲಿ ಸೊಳ್ಳೆ ಮತ್ತು ಹಂದಿಗಳಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಭಾರತದಲ್ಲೂ ಕೆಲವು ಜಾತಿಯ ಸೊಳ್ಳೆಗಳು ಈ ವೈರಸ್ ಸೋಂಕಿಗೆ ಸುಲಭವಾಗಿ ತುತ್ತಾಗುತ್ತವೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹಾಗೆಯೇ, ಹಂದಿಗಳಿಗೂ ಸೋಂಕು ಬೇಗ ಹರಡಲಿದೆ. ಹಂದಿ ಮತ್ತು ಸೊಳ್ಳೆಗಳ ಮೂಲಕ ಮನುಷ್ಯನಿಗೆ ರೋಗ ಹರಡುತ್ತದೆ ಎನ್ನುತ್ತಾರೆ ಐಸಿಎಂಆರ್ ವಿಜ್ಞಾನಿಗಳು.

ಕ್ಯಾಟ್ ಕ್ಯೂ ವೈರಸ್ ಸೋಂಕು ತಗುಲಿದವರಿಗೆ ಉಸಿರಾಟದ ತೊಂದರೆ, ಎದೆ ನೋವು, ನುಂಗಲು ತೊಂದರೆ, ಮಿದುಳು ಪೊರೆಯಲ್ಲಿ ಊತ, ಮಕ್ಕಳ ಮಿದುಳಿನಲ್ಲಿ ಊತ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಚೀನಾದಲ್ಲಿ ಹೊಸ ಸೋಂಕು ಬೆಳಕಿಗೆ ಬಂದ ನಂತರ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಯ ವಿಜ್ಞಾನಿಗಳು ದೇಶಾದ್ಯಂತ 883 ವ್ಯಕ್ತಿಗಳ ರಕ್ತದ ಮಾದರಿಗಳನ್ನ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದ್ದಾರೆ. ಯಾರಲ್ಲೂ ವೈರಸ್ ಸಿಕ್ಕಿಲ್ಲವಾದರೂ ಇಬ್ಬರಲ್ಲಿ ಈ ವೈರಾಣುವಿನ ಪ್ರತಿಕಾಯಗಳ(Anti-bodies) ಉಪಸ್ಥಿತಿ ಕಂಡುಬಂದಿದೆ. ಅಂದರೆ ಈ ಇಬ್ಬರಲ್ಲಿ ಸೋಂಕು ಬಂದು ಹೋಗಿದ್ದರ ಕುರುಹು ಇದು ಎನ್ನಲಾಗಿದೆ.
14-01-26 03:34 pm
Bangalore Correspondent
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
14-01-26 03:15 pm
Mangalore Correspondent
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
14-01-26 05:22 pm
HK News Desk
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm