ಬ್ರೇಕಿಂಗ್ ನ್ಯೂಸ್
27-09-20 03:49 pm Headline Karnataka News Network ದೇಶ - ವಿದೇಶ
ಚೆನ್ನೈ, ಸೆಪ್ಟಂಬರ್ 27: ಸ್ವರ ಸಾಮ್ರಾಟ ಎಸ್ಪಿ ಬಾಲಸುಬ್ರಹ್ಮಣ್ಯಂ ಅಗಲಿಕೆಯ ಬಗ್ಗೆ ದಕ್ಷಿಣ ಭಾರತದ ಮತ್ತೊಬ್ಬ ಸಂಗೀತ ಮಾಂತ್ರಿಕ ಕೆ.ಜೆ. ಯೇಸುದಾಸ್ ಭಾವಪೂರ್ಣ ಪತ್ರ ಬರೆದಿದ್ದಾರೆ. ನನ್ನ ಬಹುಕಾಲದ ಗೆಳೆಯ, ಸೋದರ ಅಗಲಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕೊನೆಯ ಬಾರಿಗೆ ನೋಡಬೇಕೆಂಬ ಆಸೆಯನ್ನೂ ಕೊರೊನಾದಿಂದ ಈಡೇರಿಸಿಕೊಳ್ಳಲು ಆಗಿಲ್ಲ ಎಂದು ವಿಷಾದಿಸಿದ್ದಾರೆ.


ನನ್ನ ಸಹೋದ್ಯೋಗಿಗಳ ಪೈಕಿ ಬಾಲು ನನಗೆ ಹತ್ತಿರದ ಸೋದರನಿದ್ದಂತೆ. ಬಾಲು ನನ್ನನ್ನು ಆ ರೀತಿ ನೋಡಿಕೊಂಡಿದ್ದರೇ ಗೊತ್ತಿಲ್ಲ, ಎಸ್ಪಿಬಿ ಮತ್ತು ನನ್ನ ನಡುವಿನ ಸಂಬಂಧ ಮುಂದೆಯೂ ಹಾಗೇ ಇರಲಿದೆ. ಶಾಸ್ತ್ರೀಯ ಶೈಲಿಯಲ್ಲಿ ಸಂಗೀತ ಕಲಿಯದೇ ಇದ್ದರೂ ಎಸ್ಪಿಬಿಯವರ ಸಂಗೀತ ಜ್ಞಾನ ಅಗಾಧ ಆಗಿತ್ತು, ಅವರು ಹಾಡುತ್ತಿದ್ದರು. ಜೊತೆಯಲ್ಲೇ ಮ್ಯೂಸಿಕ್ ಕಂಪೋಸ್ ಕೂಡ ಮಾಡುತ್ತಿದ್ದರು. ಶಂಕರಾಭರಣಂ ಚಿತ್ರದಲ್ಲಿ ಎಸ್ಪಿಬಿಯವರ ಸಂಗೀತ ಜ್ಞಾನ ನಮ್ಮ ಅರಿವಿಗೆ ಬರುತ್ತದೆ. ಶಾಸ್ತ್ರೀಯವಾಗಿ ಕಲಿತು ಬಂದಿದ್ದ ಇನ್ನೊಬ್ಬರ ಜೊತೆಗೆ ಎಸ್ಪಿಯವರು ಅಮೋಘವಾಗಿ ಹಾಡಿದ್ದರು. ಬಾಲು ಯಾರಿಗೂ ನೋವು ತಂದವರಲ್ಲ. ಅಂದ್ರೆ ಎಲ್ಲರನ್ನೂ ಪ್ರೀತಿಸುತ್ತಿದ್ದರು. ಎಲ್ಲರೊಂದಿಗೆ ಆಪ್ತವಾಗಿರುತ್ತಿದ್ದರು. ಒಂದೊಮ್ಮೆ ಎಸ್ಪಿಯವರು ತಮ್ಮ ಕೈಯಾರೆ ತಯಾರಿಸಿದ್ದ ಊಟ ಮಾಡುವ ಅವಕಾಶವೂ ನನಗೆ ಲಭಿಸಿತ್ತು. ಪ್ಯಾರಿಸ್ ನಲ್ಲಿ ಕಾರ್ಯಕ್ರಮಕ್ಕಾಗಿ ತಂಗಿದ್ದ ವೇಳೆ, ಎಸ್ಪಿಬಿಯವರು ನಮಗಾಗಿ ತಾವೇ ಸ್ಪೆಷಲ್ ಆಗಿ ಊಟ ತಯಾರಿಸಿದ್ದರು ಎಂದು ಸ್ಮರಿಸಿದ್ದಾರೆ.
ಕೋವಿಡ್ ಕಾರಣದಿಂದ ದೊಡ್ಡ ನಷ್ಟವನ್ನು ಅನುಭವಿಸುತ್ತಿದ್ದೇವೆ. ನನಗೆ ಅಮೆರಿಕದಿಂದ ಬರುವುದಕ್ಕೆ ಬಿಡುತ್ತಿಲ್ಲ. ಇದರಿಂದಾಗಿ ಕೊನೆಯ ಬಾರಿಗೆ ಎಸ್ಪಿಯವರನ್ನು ನೋಡುವುದಕ್ಕೂ ಆಗಿಲ್ಲ. ಅವರ ಜೊತೆಗಿನ ನೆನಪು ಮಾತ್ರ ಇರಲಿದೆ ಎಂದು ಯೇಸುದಾಸ್ ಭಾವುಕರಾಗಿ ಬರೆದಿದ್ದಾರೆ.
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
28-02-26 07:17 pm
HK News Staffer
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
ದೆಹಲಿ ಅಬಕಾರಿ ನೀತಿ ಹಗರಣ ; ಕೇಜ್ರಿವಾಲ್, ಸಿಸೋಡಿಯಾ...
27-02-26 03:55 pm
ಲಂಚ ಆರೋಪದಲ್ಲಿ ಸಿಕ್ಕಿಬಿದ್ದ ಗಣಿ ಉಪ ನಿರ್ದೇಶಕರ ಮನ...
27-02-26 06:14 am
28-02-26 08:53 pm
HK News Desk
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm