ಬ್ರೇಕಿಂಗ್ ನ್ಯೂಸ್
24-05-22 10:04 pm HK News Desk ದೇಶ - ವಿದೇಶ
Photo credits : Onmanorama
ಕೊಲ್ಲಂ, ಮೇ 24: ವರದಕ್ಷಿಣೆಗಾಗಿ ಕಿರುಕುಳ ಕೊಟ್ಟು ಪತ್ನಿಯ ಆತ್ಮಹತ್ಯೆಗೆ ಕಾರಣನಾಗಿದ್ದ ಪತಿಗೆ ಕೊಲ್ಲಂ ಅಡಿಶನಲ್ ಸೆಷನ್ಸ್ ಕೋರ್ಟ್ ಹತ್ತು ವರ್ಷಗಳ ಕಠಿಣ ಶಿಕ್ಷೆ ಜಾರಿಗೊಳಿಸಿದೆ. 24 ವರ್ಷದ ವಿಸ್ಮಯಾ ಎಂಬ ಹೆಣ್ಣು ಮಗಳ ಸಾವಿಗೆ ಕಾರಣನಾಗಿದ್ದ ಆರ್ ಟಿಓ ಇನ್ ಸ್ಪೆಕ್ಟರ್ ಆಗಿದ್ದ ಕಿರಣ್ (31) ಹತ್ತು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾನೆ.
ಐಪಿಸಿ ಸೆಕ್ಷನ್ 306 ಅಡಿ ಸಾವಿಗೆ ದುಷ್ಪ್ರೇರಣೆ ಮತ್ತು ಸೆಕ್ಷನ್ 498ಎ ಅಡಿ ವಿವಾಹಿತ ಮಹಿಳೆಗೆ ಕಿರುಕುಳ ನೀಡಿದ್ದಕ್ಕಾಗಿ ತಲಾ ಎರಡು ವರ್ಷ, 304ಬಿ ಅಡಿ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರು ವರ್ಷಗಳ ಶಿಕ್ಷೆಯನ್ನು ಕೊಲ್ಲಂ ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಕೆ.ಎನ್.ಸುಜಿತ್ ಜಾರಿಗೊಳಿಸಿದ್ದಾರೆ. ಅಲ್ಲದೆ, 12.55 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಈ ಪೈಕಿ ಎರಡು ಲಕ್ಷ ರೂ. ವಿಸ್ಮಯಾ ಹೆತ್ತವರಿಗೆ ನೀಡುವಂತೆ ಕೋರ್ಟ್ ಹೇಳಿದೆ.
ಪ್ರಕರಣದಲ್ಲಿ ಆರೋಪಿ ಕಿರಣ್ ಕುಮಾರ್ ತಪ್ಪಿತಸ್ಥ ಎಂದು ಕೋರ್ಟ್ ಸೋಮವಾರ ಘೋಷಿಸಿದ್ದು, ಮಂಗಳವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಸೋಮವಾರ ಅಪರಾಧಿಯೆಂದು ಘೋಷಣೆ ಮಾಡಿದ ಕೂಡಲೇ ಕಿರಣ್ ಕುಮಾರ್ ಕೋರ್ಟ್ ಮುಂದೆ ಶಿಕ್ಷೆ ಕಡಿಮೆಗೊಳಿಸುವಂತೆ ಕೇಳಿಕೊಂಡಿದ್ದ. ತಂದೆ, ತಾಯಿಗೆ ತಾನೊಬ್ಬನೇ ಆಸರೆಯಾಗಿದ್ದು, ಕಡಿಮೆ ಶಿಕ್ಷೆ ನೀಡುವಂತೆ ಕೇಳಿದ್ದ. ಆದರೆ, ಪ್ರಾಸಿಕ್ಯೂಶನ್ ಪರ ವಕೀಲರು ಗರಿಷ್ಠ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದರು.
ಮದುವೆಯ ಸಂದರ್ಭದಲ್ಲಿ ಕಿರಣ್ ಕುಮಾರ್ ಗೆ ಗಿಫ್ಟ್ ನೀಡಿದ್ದ ಕಾರಿನಲ್ಲಿಯೇ ವಿಸ್ಮಯಾ ತಂದೆ ತ್ರಿವಿಕ್ರಮನ್ ನಾಯರ್ ಮತ್ತು ತಾಯಿ ಸಜಿತಾ ಆಗಮಿಸಿದ್ದು ಕೋರ್ಟ್ ತೀರ್ಪು ಕೇಳಿ ಭಾವುಕರಾಗಿದ್ದಾರೆ. ವಿಸ್ಮಯಾ ಸಾವಿಗೆ ನ್ಯಾಯ ಸಿಕ್ಕಿದೆ. ಪ್ರಾಸಿಕ್ಯೂಶನ್ ಮತ್ತು ಪೊಲೀಸರ ಶ್ರಮಕ್ಕೆ ಅಭಿನಂದಿಸಲು ನನ್ನಲ್ಲಿ ಪದಗಳಿಲ್ಲ ಎಂದು ನಾಯರ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ, ಕಾರಿನಲ್ಲಿ ಸದಾ ವಿಸ್ಮಯಾಳಿಗಾಗಿ ಒಂದು ಸೀಟು ಕಾದಿರಿಸುತ್ತೇನೆ. ಈ ಕಾರು ಅವಳಿಗಾಗಿಯೇ ಗಿಫ್ಟ್ ಕೊಟ್ಟಿದ್ದೆ ಎಂದು ಕಣ್ಣೀರು ಹರಿಸುತ್ತಾ ಹೇಳಿದ್ದಾರೆ.
ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯಾಗಿದ್ದ ವಿಸ್ಮಯಾ 2021ರ ಜೂನ್ 21ರಂದು ಗಂಡನ ಮನೆ ಕೊಲ್ಲಂ ಜಿಲ್ಲೆಯ ಸಾಸ್ತಂಕೊಟ್ಟ ಎಂಬಲ್ಲಿ ಸಾವಿಗೆ ಶರಣಾಗಿದ್ದಳು. ಸಾವಿಗೂ ಮುನ್ನ ಗಂಡನ ಕಿರುಕುಳ, ದೈಹಿಕ ಹಲ್ಲೆ ನಡೆಸಿದ ಬಗ್ಗೆ ಪೋಟೋಗಳನ್ನು ವಾಟ್ಸಪ್ ನಲ್ಲಿ ಹೆತ್ತವರಿಗೆ ಕಳುಹಿಸಿದ್ದಳು. 2020ರಲ್ಲಿ ಮೋಟರ್ ವೆಹಿಕಲ್ ಇನ್ ಸ್ಪೆಕ್ಟರ್ ಆಗಿದ್ದ ಕಿರಣ್ ಕುಮಾರ್ ಜೊತೆಗೆ ವಿಸ್ಮಯಾ ಮದುವೆ ಮಾಡಲಾಗಿತ್ತು. ಈ ವೇಳೆ, ಆಕೆಯ ಹೆತ್ತವರು 100 ಸವರಿನ್ ಚಿನ್ನಾಭರಣ(ಒಂದು ಸವರಿನ್ ಅಂದರೆ ಎಂಟು ಗ್ರಾಮ್), ಒಂದು ಎಕ್ರೆ ಜಾಗ ಮತ್ತು ಹತ್ತು ಲಕ್ಷ ಮೌಲ್ಯದ ಕಾರನ್ನು ವರದಕ್ಷಿಣೆ ರೂಪದಲ್ಲಿ ಗಿಫ್ಟ್ ನೀಡಿದ್ದರು. ಆದರೆ ಕಿರಣ್ ಕುಮಾರ್, ಇನ್ನಷ್ಟು ಹಣ ತರುವಂತೆ ವಿಸ್ಮಯಾಗೆ ಕಿರುಕುಳ ನೀಡುತ್ತಿದ್ದ. ಕಾರು ಬೇಡ, ಅದರ ಬದಲಿಗೆ ಹತ್ತು ಲಕ್ಷ ಹಣವನ್ನೇ ತಂದುಕೊಡುವಂತೆ ಪೀಡಿಸಿದ್ದಾಗಿ ವಿಸ್ಮಯಾ ಹೆತ್ತವರಲ್ಲಿ ಅಳಲು ತೋಡಿಕೊಂಡಿದ್ದಳು.
The Kollam Additional Sessions Court-1 sentenced S Kiran Kumar to 10 years' jail term over the death f his wife Vismaya, 24, on charges of dowry harassment. He was found guilty by the court on Monday.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm