ಬ್ರೇಕಿಂಗ್ ನ್ಯೂಸ್
23-05-22 09:22 pm HK News Desk ದೇಶ - ವಿದೇಶ
ತಿರುವನಂತಪುರಂ, ಮೇ 23: ಪಿಎಫ್ಐ ಪ್ರತಿಭಟನಾ ಮೆರವಣಿಗೆಯಲ್ಲಿ ಹಿಂದು ಮತ್ತು ಕ್ರೈಸ್ತರಿಗೆ ಬಹಿರಂಗ ಬೆದರಿಕೆ ಹಾಕುವ ಘೋಷಣೆಗಳ ವಿಡಿಯೋ ಕೇರಳದಲ್ಲಿ ವೈರಲ್ ಆಗಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಆಲಪ್ಪುಳ ಜಿಲ್ಲೆಯಲ್ಲಿ ಮೇ 21ರಂದು ಜನ ಮಹಾ ಸಮ್ಮೇಳನ ಹೆಸರಲ್ಲಿ ಪಿಎಫ್ಐ ವತಿಯಿಂದ ಬೃಹತ್ ಮೆರವಣಿಗೆ ನಡೆದಿದ್ದು, ಅದರಲ್ಲಿ ಈ ಘೋಷಣೆ ಹಾಕಲಾಗಿದೆ ಎನ್ನಲಾಗುತ್ತಿದೆ. ಆದರೆ, ವಿಡಿಯೋ ಭಾನುವಾರವಷ್ಟೇ ಲಭ್ಯವಾಗಿದ್ದು, ಈ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದು ಇದರಲ್ಲಿ ಅಪ್ರಾಪ್ತ ಬಾಲಕನೊಬ್ಬ ಕೂಗುತ್ತಿದ್ದ ಘೋಷಣೆಯನ್ನು ಇತರರು ಅನುಮೋದಿಸುತ್ತಿರುವುದು ವಿಡಿಯೋದಲ್ಲಿದೆ. ಮರ್ಯಾದೆಯಿಂದ ಜೀವಿಸದಿದ್ದರೆ ಹಿಂದು, ಕ್ರೈಸ್ತರಿಗೆ ಗತಿ ಕಾಣಿಸಲು ನಾವು ರೆಡಿಯಾಗಿದ್ದೇವೆ. ನಾವು ಗುಜರಾತ್ ಹತ್ಯಾಕಾಂಡ ಮರೆತಿಲ್ಲ. ಕೇರಳದಲ್ಲಿ ಸಂಘ ಪರಿವಾರ ಕುಕೃತ್ಯಗಳಿಗೆ ಕೈಹಾಕಿದರೆ ಸೂಕ್ತ ಉತ್ತರ ನೀಡಬಲ್ಲೆವು ಎನ್ನುವ ಘೋಷಣೆಗಳು ವೈರಲ್ ವಿಡಿಯೋದಲ್ಲಿ ಕೇಳಿಬರುತ್ತವೆ.
ನೀವು ನ್ಯಾಯಯುತವಾಗಿ ಜೀವಿಸದಿದ್ದರೆ, ನಿಮಗೆ ಸಮಾಧಿ ಕಟ್ಟಲು ನಮ್ಮ ಯುವಕರು ತಯಾರಾಗಿದ್ದಾರೆ. ಹಿಂದುಗಳು ಕೊನೆಯ ಸಮಾಧಿಗೆ ಅಕ್ಕಿ, ಹೂವು ರೆಡಿ ಮಾಡಿಕೊಳ್ಳಿ. ಕ್ರೈಸ್ತರು ತಮ್ಮ ಅಂತಿಮ ಕಾರ್ಯಕ್ಕೆ ಧೂಪ, ಸಾಂಬ್ರಾಣಿ ರೆಡಿ ಮಾಡಿಕೊಳ್ಳಿ. ನಾವು ಬರುತ್ತಿದ್ದೇವೆ, ನಿಮಗೆ ಉತ್ತರ ನೀಡಲಿದ್ದೇವೆ. ನಾವೆಂದೂ ಪಾಕಿಸ್ಥಾನ, ಬಾಂಗ್ಲಾದೇಶಕ್ಕೆ ಹೋಗಲ್ಲ. ನಾವು ಇಲ್ಲೇ ಇರುತ್ತೇವೆ. ಇಲ್ಲಿ ನಾವು ಹೇಳಿದಂತೆ ನೀವು ಕೇಳದಿದ್ದರೆ, ನಿಮ್ಮನ್ನು ಬಾಯಿ ಮುಚ್ಚಿಸಲು ನಮಗೆ ಗೊತ್ತು. ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಕೊಲ್ಲುತ್ತೇವೆ. ನಾವು ಹುತಾತ್ಮರಾಗಲು ರೆಡಿ ಇದ್ದೇವೆ. ನಿಮಗೆ ಸರಿಯಾಗಿ ಬದುಕಲು ಸಾಧ್ಯವಾಗದಿದ್ದರೆ ಸಾಯಲು ತಯಾರಾಗಿ. ನಾವು ಆಜಾದಿ ಘೋಷಣೆ ಮಾಡುತ್ತೇವೆ ಎಂದು ಮಲಯಾಳದಲ್ಲಿ ಬೆದರಿಕೆ ಹಾಕುವ ಬೆದರಿಕೆ ಬಂದಿದೆ.
ಇದಲ್ಲದೆ, ವಿವಾದಿತ ಬಾಬ್ರಿ ಮಸೀದಿ ಕಟ್ಟಡ ಇರುವಲ್ಲೇ ಮತ್ತೆ ಪ್ರಾರ್ಥನೆ(ಸುಜೂದ್) ಮಾಡುತ್ತೇವೆ. ವಾರಣಾಸಿಯ ಗ್ಯಾನವಾಪಿ ಮಸೀದಿಯಲ್ಲೂ ನಮಾಜ್ ಮಾಡುತ್ತೇವೆ. ನಾವು ಪಾಕಿಸ್ಥಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಲ್ಲ. ಹಾಗೆ ಹೋಗುವುದಿದ್ದರೆ ಸಂಘ ಪರಿವಾರದವರನ್ನೂ ಕರೆದುಕೊಂಡು ಹೋಗುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ವೈರಲ್ ವಿಡಿಯೋ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಕೇಳಿಬಂದಿದೆ.
"Hindus should buy rice and flowers for their last rites, Oh! I forgot one thing. Christians should also buy incense for their last rites. If you want to live here, live 'decently'; otherwise, we know how to implement 'Azadi'." -Slogans are from the PFI rally in Alappuzha. pic.twitter.com/4aMgDwv0tw
— Jayaraj Kaimal (@jrkaimalbjp) May 22, 2022
Kerala Police have launched a probe after a video of a Kerala boy making provocative slogans against Hindus and Christian went viral on social media platforms.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm