ಬ್ರೇಕಿಂಗ್ ನ್ಯೂಸ್
30-03-22 02:47 pm HK Desk news ಕರ್ನಾಟಕ
ಚಿತ್ರದುರ್ಗ, ಮಾ.30: ಅವಧಿ ಪೂರ್ವ ಎಲೆಕ್ಷನ್ ಮಾಡಿದ ಎಲ್ಲರೂ ಅಲ್ಲಿಗೇ ಮುಗಿದು ಹೋಗಿದ್ದಾರೆ. ಎಸ್.ಎಂ ಕೃಷ್ಣ ಅವಧಿಯಲ್ಲಿ ಆರು ತಿಂಗಳ ಮುನ್ನವೇ ಚುನಾವಣೆ ನಡೆಸಿದ್ದರು. ಅವರೂ ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಅವಧಿ ಪೂರ್ವ ಎಲೆಕ್ಷನ್ ಯಾಕೆ ಮಾಡುತ್ತಾರೆ ಅಂದ್ರೆ, ಜನರಿಗೆ ಮತ್ತು ಆಳುವವರಿಗೆ ಸರಕಾರದ ಬಗ್ಗೆ ನಂಬಿಕೆ ಉಳಿದಿಲ್ಲ ಎಂದರ್ಥ ಎಂದು ವಿಶ್ಲೇಷಿಸಿದ್ದಾರೆ ಹಿರಿಯ ನಾಯಕ, ಶಾಸಕ ಜಿಟಿ ದೇವೇಗೌಡ.
ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇದ್ದಾಗ, ಅವಧಿ ಪೂರ್ವ ಚುನಾವಣೆ ಮಾಡುತ್ತಾರೆ ಅಂದರೆ ಸರ್ಕಾರದ ಮೇಲೆ ಜನರಿಗೆ ಮತ್ತು ಆಳುವವರಿಗೆ ನಂಬಿಕೆ ಇಲ್ಲ ಎಂದೇ ಅರ್ಥ. ಅವಧಿ ಪೂರ್ವ ಚುನಾವಣೆ ಯಾರು ಆಡಳಿತ ನಡೆಸುತ್ತಿದ್ದಾರೋ ಅವರಿಗೇ ಅನಾಹುತ ಎಂದು ಹೇಳಿದ್ದಾರೆ.
ಜಾತ್ರೆಗಳಲ್ಲಿ ಮುಸ್ಲಿಂ ಅಂಗಡಿ ನಿಷೇಧ ವಿಚಾರದಲ್ಲಿ ಪ್ರತಿಕ್ರಿಯಿಸಿದ ಜಿಟಿಡಿ, ವಾಲ್ಮೀಕಿ ಹೇಗಿದ್ದ ಹೇಗಾದರು ಅಂತ ಬಹಳ ಮಂದಿ ಹೇಳುತ್ತಾರೆ. ಬಿಜ್ಜಳನ ಕಾಲದಲ್ಲಿ ಬಸವಣ್ಣ ಏನಾಗಿದ್ದರು, ಆನಂತರ ಏನಾಗಿದ್ದರು ಅನ್ನೋದು ಗೊತ್ತು. ಯಾವುದೇ ವ್ಯಕ್ತಿ ಇಂಥದ್ದೆ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಲ್ಲ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ.
ಆಡಳಿತ ನಡೆಸುವವರಲ್ಲಿ ಒಳ್ಳೆಯ ಭಾವನೆ ಇರಬೇಕು. ಈ ನಾಡಿನಲ್ಲಿ ಇರೋದು ಗಂಡು ಮತ್ತು ಹೆಣ್ಣು ಎರಡು ಜಾತಿಗಳು ಮಾತ್ರ. ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡುತ್ತಾರೆ, ರಾಜರು ಇಂದು ಯಾರು ಕೂಡ ಉಳಿದಿಲ್ಲ. ಸತ್ತವರನ್ನೇ ಹುಡುಕಿಕೊಂಡು ಹೋಗುತ್ತೀರಾ, ಸತ್ತವರನ್ನ ಮತ್ತೆ ಮತ್ತೆ ಹೊರ ತೆಗೆಯುತ್ತಿದ್ದೀರಿ ಯಾಕೆ. ಅವರ ಮೂಳೆಗಳು ಕೂಡ ಈಗ ಉಳಿದಿಲ್ಲ. ಪಾಠದಲ್ಲಿ ಉಳಿಸಿ, ತೆಗೆಯಿರಿ ಎಂದು ಮಕ್ಕಳು ಹೇಳುತ್ತಾರೆಯೇ. ಟಿಪ್ಪು ಸುಲ್ತಾನ್ ಆದರೂ ತೆಗೆಯಿರಿ, ರಾಜರನ್ನಾದರೂ ತೆಗೆಯಿರಿ. ಅವರೆಲ್ಲ ಯುದ್ದಗಳನ್ನ ಮಾಡಿದ್ದಾರೆ, ಹೊಂದಾಣಿಕೆನೂ ಮಾಡಿದ್ದಾರೆ. ಚೀನಾ ಜೊತೆಗೆ ಭಾರತ ಮಾತುಕತೆ, ಒಪ್ಪಂದ ಎಲ್ಲ ಮಾಡುತ್ತೆ. ಹಾಗಂತ, ಅದರ ಬಗ್ಗೆ ಕಲಿಯೋದು ತಪ್ಪಾಗುತ್ತದೆಯೇ..?
ನಮ್ಮ ದೇಶದಲ್ಲಿ ಹುಟ್ಟಿದ ನಮ್ಮ ಅಣ್ಣ ತಮ್ಮಂದಿರು ಏನು ಪಾಪ ಮಾಡಿದ್ದಾರೆ. ಅವರನ್ನು ವ್ಯಾಪಾರ ಮಾಡಬೇಡಿ ಎಂದು ತಡೆದಲ್ಲಿ ಅವರು ಎಲ್ಲಿ ಹೋಗಬೇಕು. ಆ ರೀತಿಯ ತಾರತಮ್ಯ ಮಾಡೋದು ಸರಿಯಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆ ಬರುವ ರೀತಿ ಕಾನೂನು ಜಾರಿಗೆ ತನ್ನಿ ಎನ್ನೋದು ನನ್ನ ಕಳಕಳಿ ಎಂದು ಜಿಟಿ ದೇವೇಗೌಡ ಹೇಳಿದರು.
All those who did the pre-election election are over. The election was held six months before SM Krishna's term. They never came to power again. Why does a pre-election election Andrea analyzes the people and the rulers who have no faith in the government?
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm