ಬ್ರೇಕಿಂಗ್ ನ್ಯೂಸ್
21-03-22 05:08 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.21 : ಉಕ್ರೇನ್ ಯುದ್ಧಭೂಮಿಯಲ್ಲಿ ರಷ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಯುವಕ ನವೀನ್ ಮೃತದೇಹ ಅಂತೂ ತಾಯ್ನಾಡಿಗೆ ತಲುಪಿದೆ. ಘಟನೆ ನಡೆದು 20 ದಿನಗಳ ನಂತರ ನವೀನ್ ಶವ ಬೆಂಗಳೂರಿಗೆ ತರಲಾಗಿದ್ದು, ಇಲ್ಲಿಂದ ಹುಟ್ಟೂರು ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮಕ್ಕೆ ಕರೆದೊಯ್ಯಲಾಗಿದೆ.
ನಸುಕಿನ ಜಾವ ವಿಮಾನದ ಮೂಲಕ ಬೆಂಗಳೂರಿಗೆ ತಲುಪಿದ್ದು, ಇಲ್ಲಿಂದ ಬೆಳಗ್ಗೆ 11 ಗಂಟೆ ಸುಮಾರಿಗೆ ಆಂಬುಲೆನ್ಸ್ ಮೂಲಕ ನವೀನ್ ಶವ ಚಳಗೇರಿ ತಲುಪಿದೆ. ಮೃತದೇಹ ಬರುತ್ತಲೇ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆ ಶೇಖರಪ್ಪ ಮತ್ತು ತಾಯಿ ಮಗನ ಶವ ನೋಡಿ ಗೋಳಿಟ್ಟರು. ಅಲ್ಲದೆ, ಕುಟುಂಬಸ್ಥರು, ಸ್ಥಳೀಯರು ಸೇರಿ ಗೌರವ ನಮನ ಸಲ್ಲಿಸಿದ್ದಾರೆ. ಮಧ್ಯಾಹ್ನ 2 ಗಂಟೆ ವರೆಗೆ ಶೇಖರಪ್ಪ ಮನೆಯ ಬಳಿ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಆನಂತರ ಶವ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.
ನವೀನ್ ಪೋಷಕರು ಮೃತದೇಹ ತರುವುದಕ್ಕಾಗಿ ರಾಜ್ಯ ಸರಕಾರದ ಮುಂದೆ ಅಹವಾಲು ಇಟ್ಟಿದ್ದರು. ಅಲ್ಲಿ ಸಿಕ್ಕಿಬಿದ್ದ ಇತರೇ ವಿದ್ಯಾರ್ಥಿಗಳನ್ನು ಕರೆತರುವ ಕೆಲಸ ನಡೆದಿದ್ದರೂ, ಮೃತಪಟ್ಟ ನವೀನ್ ಶವ ತರುವ ಬಗ್ಗೆ ಯಾವುದೇ ಭರವಸೆ ಇರಲಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಮಾತ್ರ, ಶವ ಕರೆತರುವ ಕೆಲಸ ಆಗುತ್ತಿದೆ. ರಾಯಭಾರ ಕಚೇರಿ ಜೊತೆಗೆ ಮಾತನಾಡಲಾಗಿದೆ ಎಂದು ಭರವಸೆ ನೀಡಿದ್ದರು. ಹಾಗಿದ್ದರೂ, ಕೆಲವು ನಾಯಕರು ಶವ ಕರೆತರುವುದು ಕಷ್ಟದ ಕೆಲಸ. ಜೀವಂತ ಇದ್ದವರನ್ನೇ ಕರೆತರುವುದು ಕಷ್ಟವಾಗಿದೆ, ಸತ್ತವರನ್ನು ಕರೆತರೋದು ಹೇಗೆ ಎಂದು ಪ್ರಶ್ನೆ ಮಾಡಿದ್ದರು.
ಹೆತ್ತವರು ತಮ್ಮ ಮಗನನ್ನು ಜೀವಂತ ನೋಡಲು ಆಗಿಲ್ಲ. ಡಾಕ್ಟರ್ ಆಗಿ ಊರಿಗೆ ಬರಬೇಕಾಗಿತ್ತು. ಶವವನ್ನಾದರೂ ತಂದುಕೊಡಿ ಎಂದು ಗೋಗರೆದಿದ್ದರು. ಇದೀಗ ಶವ ಬರುತ್ತಲೇ ಹೆತ್ತವರು ಮಗನ ಶವವನ್ನು ದಾವಣಗೆರೆಯ ಮೆಡಿಕಲ್ ಕಾಲೇಜಿಗೆ ದಾನ ಮಾಡುವುದಾಗಿ ತಿಳಿಸಿದ್ದಾರೆ. ಆಮೂಲಕ ಮಗನ ಕಳಕೊಂಡ ದುಃಖದ ನಡುವೆಯೂ ದೇಹವನ್ನು ದಾನ ಮಾಡುವ ಮೂಲಕ ಸಾರ್ಥಕ ಕಾರ್ಯ ಮಾಡಿದ್ದಾರೆ. ವೀರಶೈವ ಧರ್ಮದ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಪೂರೈಸಿ ಸಂಜೆ ವೇಳೆಗೆ ಮೆರವಣಿಗೆ ಮೂಲಕ ದಾವಣಗೆರೆಗೆ ಕೊಂಡೊಯ್ದು ಆಸ್ಪತ್ರೆಗೆ ನೀಡಲಾಗುವುದು ಎಂದು ಕುಟುಂಬ ಮೂಲಗಳು ಹೇಳಿವೆ.
ಅಮೆರಿಕಕ್ಕೂ ಆಗದ ಕಾರ್ಯವನ್ನು ಮೋದಿ ಮಾಡಿದ್ದಾರೆ
ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಸರಕಾರದ ಪ್ರಮುಖ ನಾಯಕರು, ಅಧಿಕಾರಿಗಳು ಚಳಗೇರಿ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ಮಾತನಾಡಿದ ಬೊಮ್ಮಾಯಿ, ಉಕ್ರೇನಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು ಕರೆತರುವ ದೊಡ್ಡ ಕಾರ್ಯವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಅದಕ್ಕಾಗಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನವೀನ್ ಮೃತಪಟ್ಟ ಬಳಿಕ ಕುಟುಂಬದ ಜೊತೆಗೆ ಪ್ರಧಾನಿಯವರೇ ಮಾತನಾಡಿದ್ದರು. ಆನಂತರ ನಿರಂತರ ಸಂಪರ್ಕ ಇಟ್ಟುಕೊಂಡಿದ್ದು, ಅವರ ಸೂಚನೆಯಂತೆ ಮೃತದೇಹವನ್ನು ಕರೆತರುವ ಕೆಲಸ ಆಗಿದೆ. ಸಾವಿರಾರು ಸಂಖ್ಯೆಯಲ್ಲಿ ಸಿಕ್ಕಿಬಿದ್ದವರನ್ನು ಅಲ್ಲಿಂದ ರಕ್ಷಿಸಿ ಕರೆತರಲಾಗಿದೆ. ಇಂತಹ ಕಾರ್ಯವನ್ನು ಅಮೆರಿಕ ಕೂಡ ಮಾಡಿಲ್ಲ ಎಂದು ಹೇಳಿದರು.
Mortal remains of Indian medical killed, who was killed in Russian shelling in a war-torn Ukraine, have arrived in Bengaluru on Monday. Naveen Shekarappa Gyanagaudar, a Final Year Medical student at Kharkiv National Medical University, died on March 1, in the conflict zone. Naveen was a resident of Karnataka's Haveri district.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm