ಬ್ರೇಕಿಂಗ್ ನ್ಯೂಸ್
17-03-22 09:05 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.17: ಹಿಂದೆ ಶಾಬಾನೋ ಪ್ರಕರಣದಲ್ಲಿ ಕೋರ್ಟ್ ತೀರ್ಪು ನೀಡಿದಾಗಲೂ ಅವರು ಇದೇ ರೀತಿ ವರ್ತಿಸಿದ್ದರು. ಆಗ ಇದ್ದ ರಾಜೀವ ಗಾಂಧಿ ಸರಕಾರದ ಮೇಲೆ ಒತ್ತಡ ಹಾಕಿದ್ದರು. ಆದರೆ, ಈಗ ಆ ರೀತಿ ಮಾಡಲು ಸಾಧ್ಯವಿಲ್ಲ. ನೀವು ಹೇಳಿದಂತೆ ಕುಣಿಯುವ ಸರಕಾರ ಈಗ ಇಲ್ಲ. ಈಗ ಇರೋದು ಬಿಜೆಪಿ ಸರಕಾರ, ರಾಷ್ಟ್ರದ ಹಿತಾಸಕ್ತಿ ಪ್ರಕಾರ ಮಾತ್ರ ನಡೆದುಕೊಳ್ಳುತ್ತದೆ. ಜಿನ್ನಾ ರೀತಿಯ ಮೈಂಡ್ ಸೆಟ್ ಇದ್ದಲ್ಲಿ ಅದಕ್ಕೆ ಮಣೆ ಹಾಕಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ನಿಮಗೆ ಜಿನ್ನಾ ಮನಸ್ಥಿತಿ ಇದ್ದಲ್ಲಿ ದಯವಿಟ್ಟು ಅದರಿಂದ ಹೊರಬನ್ನಿ. ಮೊದಲು ಭಾರತೀಯರಾಗುವುದನ್ನು ಕಲಿಯಿರಿ. ಜಿನ್ನಾ ಮೈಂಡ್ ಸೆಟ್ ನಿಮಗಿದ್ದಲ್ಲಿ ಅದು ಪ್ರಯೋಜನಕ್ಕೆ ಬರಲ್ಲ. ಅವರು ಕೋರ್ಟನ್ನು ಬೆದರಿಸಲು ಬಯಸಿದ್ದರೆ, ಕೋರ್ಟ್ ಯಾವುದಕ್ಕೂ ಕ್ಯಾರ್ ಮಾಡಲ್ಲ. ಸರಕಾರವನ್ನು ಒತ್ತಡ ಹೇರಲು, ಭಯ ಮೂಡಿಸಲು ಯತ್ನಿಸಿದರೆ, ಅದು ಸಾಧ್ಯವಿಲ್ಲ. ಈಗ ಇರೋದು ಬಿಜೆಪಿ ಸರಕಾರ ಎಂದು ಸಿಟಿ ರವಿ ಹೇಳಿದರು.
ಒಂದು ವೇಳೆ, ಅವರ ಪರವಾಗಿ ಕೋರ್ಟ್ ತೀರ್ಪು ಬಂದಲ್ಲಿ ಆಗ ಭಾರತದ ಸಂವಿಧಾನ, ಕೋರ್ಟ್ ಬಗ್ಗೆ ಮಾತು ಹೇಳುತ್ತಾರೆ. ವಿರೋಧ ಬಂದಲ್ಲಿ ತಮ್ಮ ಅಜೆಂಡಾವನ್ನು ಹೇರುತ್ತಾರೆ. ಏನಿದ್ದರೂ, ಇವರ ಅಜೆಂಡಾಗಳಿಗೆ, ಗೊಡ್ಡು ಬೆದರಿಕೆಗಳಿಗೆ ಬಗ್ಗುವ ಸರಕಾರ ಈಗ ಇಲ್ಲ ಎಂದು ಸಿಟಿ ರವಿ ಮುಸ್ಲಿಂ ಸಂಘಟನೆಗಳು ಹಿಜಾಬ್ ತೀರ್ಪು ವಿರೋಧಿಸಿ ನೀಡಿರುವ ಬಂದ್ ಕರೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳ ಕರೆಯಂತೆ, ಮುಸ್ಲಿಂ ವರ್ತಕರು ತಮ್ಮ ಅಂಗಡಿ, ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಹಿಜಾಬ್ ತೀರ್ಪು ವಿರೋಧಿಸಿದ್ದಾರೆ.
Reacting to the bandh call given by Muslim organisations against verdict on wearing of hijab in classrooms, BJP National General Secretary C.T. Ravi on Thursday said that people need to shed the Jinnah mindset. “They did the same thing after the Supreme Court verdict in the Shah Bano case. Then Congress government under the leadership of Rajiv Gandhi succumbed to their pressure. This is not the time to continue with your agenda,” Ravi said.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm