ಬ್ರೇಕಿಂಗ್ ನ್ಯೂಸ್
30-04-21 02:37 pm Manju, Bengaluru Correspondent ಕರ್ನಾಟಕ
ಬೆಂಗಳೂರು, ಏ.30: ರಾಜ್ಯದಲ್ಲಿ ಈವರೆಗೆ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿತ್ತು. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ನಾಳೆಯಿಂದ 18ರಿಂದ 44 ವರ್ಷದವರಿಗೆ ಕೊರೋನಾ ಡೋಸ್ ಸಿಗುವುದು ಅನುಮಾನ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಧಿಕೃತ ಮಾಹಿತಿ ನೀಡಿದ್ದಾರೆ
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ 18-44 ವರ್ಷದವರಿಗೆ ಕೊರೋನಾ ಲಸಿಕೆ ಸಿಗಲ್ಲ ಎಂದು ಅಧಿಕೃತವಾಗಿ ಹೇಳಿದ್ದಾರೆ.
18 ವಯಸ್ಸಿನಿಂದ ದಿಂದ 44 ವಯಸ್ಸಾದವರು ಡೋಸ್ ಪಡೆಯಲು ಅರ್ಹರು. ಅದರ ಅನ್ವಯ 3ರಿಂದ ಮೂರುವರೆ ಕೋಟಿ ಜನ ರಾಜ್ಯದಲ್ಲಿ ಇದ್ದಾರೆ ಎಂಬ ಅಂದಾಜಿದೆ. ರಾಜ್ಯ ಸರ್ಕಾರ 400 ಕೋಟಿಗೆ 1 ಕೋಟಿ ಡೋಸ್ ಪಡೆಯಲು ಆರ್ಡರ್ ಮಾಡಿದೆ. ಹೈದ್ರಾಬಾದ್ ಮೂಲದ ಬಯೋಟೆಕ್, ರಷ್ಯಾ ಮೂಲದ ಸ್ಟೂಟ್ನಿಕ್, ರೆಡ್ಡಿ ಲ್ಯಾಬೋರೇಟಿ ಸಂಸ್ಥೆಗಳು ಡೋಸ್ ನೀಡಲಿದ್ದಾರೆ.
18 ರಿಂದ 44 ವಯಸ್ಸಿನವರು ಕೋವಿಡ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ನಮಗೆ ಇನ್ನೂ ಡೆಲವರಿ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ನಾಳೆ ಅಧಿಕೃತ ಮಾಹಿತಿ ನೀಡುವವರೆಗೆ ನೋಂದಣಿ ಮಾಡಿಕೊಂಡವರು ಯಾರೂ ಆಸ್ಪತ್ರೆಯ ಬಳಿ ಹೋಗಬಾರದು. ಅಧಿಕೃತವಾಗಿ ಆ ಕಂಪನಿಗಳು ತಿಳಿಸಿದ ಮೇಲೆ ತಮಗೆ ತಿಳಿಸುವೆ ಎಂದು ಹೇಳಿದರು.
ಡೋಸ್ ವಿಚಾರದಲ್ಲಿ ಒತ್ತಾಯ, ಒತ್ತಡ ಮಾಡಲು ಸರ್ಕಾರ ಸಿದ್ದವಿದೆ. ಉಚಿತ ವ್ಯಾಕ್ಸಿನ್ ವಿಚಾರದಲ್ಲಿ ಗೊಂದಲ ಬೇಡ. ಈವರೆಗೂ 99 ಲಕ್ಷ ಡೋಸ್ ಬಂದಿದ್ದು, ಈಗಾಗಲೇ 95 ಲಕ್ಷ ಡೋಸ್ ನೀಡಲಾಗಿದೆ, ಕೇಂದ್ರಕ್ಕೂ ಮನವಿ ಮಾಡ್ತಿದ್ದೇವೆ. ಈವರೆಗೆ ರಾಜ್ಯದಲ್ಲಿ 6 ಲಕ್ಷ ಡೋಸ್ ಇದೆ ಎಂಬ ಮಾಹಿತಿ ಇದೆ ಎಂದರು.
ಕರ್ಫ್ಯೂ ಇದ್ರು ಜನರು ಬೇಕಾಬಿಟ್ಟಿ ಓಡಾಟ ಮಾಡುತ್ತಿದ್ದಾರೆ ಎಂಬ ಮಾತಿಗೆ, ನಿಮ್ಮ ನಿಮ್ಮ ಜವಾಬ್ದಾರಿಯನ್ನು ಪಾಲನೆ ಮಾಡಿ, ಜನರ ಕಷ್ಟದ ಬಗ್ಗೆ ತೋರಿಸುತ್ತಿದ್ದೀರಾ. ಮಾರ್ಗಸೂಚಿಯನ್ನು ನಾವು ಕೊಡ್ತಿದ್ದೇವೆ. ಜನ ಅದನ್ನು ಪಾಲನೆ ಮಾಡಬೇಕು. ಕೇಂದ್ರದಿಂದ ನಮಗೆ ಬಂದಿರೋದು 99.5 ಲಕ್ಷ ಡೋಸ್ ವ್ಯಾಕ್ಸಿನ್ ಎಂದರು.
Seems like people in Karnataka aged 18-45 years will have to wait for a few more days to get themselves vaccinated against Covid, as the state is currently dealing with a vaccine shortage. Karnataka Health Minister Dr K Sudhakar informed on Friday that vaccination of people above 18 years of age, which was supposed to start from May 1, may be delayed as the vaccines have not yet arrived.
24-06-25 05:23 pm
Bangalore Correspondent
Lokayukta Raid, Karnataka: ಬೆಂಗಳೂರು, ಶಿವಮೊಗ್ಗ...
24-06-25 01:53 pm
Kodi Sri ; ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವ...
22-06-25 07:52 pm
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 01:36 pm
Mangalore Correspondent
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm