ಬ್ರೇಕಿಂಗ್ ನ್ಯೂಸ್
09-01-21 05:53 pm Headline Karnataka News Network ಕರ್ನಾಟಕ
ಬೆಳಗಾವಿ, ಜ.9: ಜನವರಿ 1ರಂದು ಹೊಸ ವರ್ಷ ಆಚರಣೆ ನಮ್ಮದಲ್ಲ ಎಂದು ನಮ್ಮ ದೇಶದ ಎಲ್ಲರಿಗೂ ಗೊತ್ತಿದೆ. ದುರ್ದೈವ ಅಂದರೆ, ನಮ್ಮ ನಾಡಿನ ಅನೇಕ ದೇವಾಲಯಗಳಲ್ಲಿ ಹೊಸ ವರ್ಷದ ಆಚರಣೆ ಮಾಡಲಾಗಿದೆ. ಧರ್ಮಸ್ಥಳ, ಇಸ್ಕಾನ್ ರೀತಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಹೊಸ ವರ್ಷದ ಆಚರಣೆ ಮಾಡಿದ್ದು ನೋವಿನ ಸಂಗತಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುತಾಲಿಕ್, ಧರ್ಮಸ್ಥಳದಂತಹ ಕ್ಷೇತ್ರಗಳಲ್ಲಿ ಹೊಸ ವರ್ಷವನ್ನು ಹಾರೈಸಿ ಬೋರ್ಡ್ ಹಾಕುತ್ತಾರೆ. ವಿಶೇಷ ಪೂಜೆಗಳನ್ನು ನಡೆಸುತ್ತಾರೆ. ರವಿಶಂಕರ್ ಗುರೂಜಿಯವರು ಏನೋ ವೇಷ ಹಾಕಿಕೊಂಡು ಶುಭಾಶಯ ಹೇಳುತ್ತಾರೆ. ಇವರಿಗೇನಾದ್ರೂ ನಾಚಿಕೆ, ಮಾನ ಮರ್ಯಾದೆ ಇದೆಯಾ? ವಿದೇಶೀಯರ ಹೊಸ ವರ್ಷದ ಆಚರಣೆಗೆ ಪ್ರೇರಣೆ ನೀಡುವುದು, ಅದಕ್ಕೆ ಸಾಥ್ ಕೊಡುವುದು ಅಂದ್ರೆ ಮತಾಂತರಕ್ಕೆ ಸಾಥ್ ನೀಡಿದಂತೆ. ಪಾದ್ರಿಗಳು ಮಾಡುತ್ತಿರುವ ಪ್ರಚಾರಕ್ಕೆ ಬೆಂಬಲ ನೀಡಿದಂತೆ ಎಂದು ಹೇಳಿದರು.
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಈ ಬಗ್ಗೆ ಹಿಂದು ಸಮಾಜದ ಕ್ಷಮೆ ಕೇಳಬೇಕು. ಮುಂದಿನ ವರ್ಷ ಆಚರಣೆ ಮಾಡಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಬೇಕು. ಇಲ್ಲವಾದಲ್ಲಿ ದೇವಾಲಯ, ಹಿಂದು ಮಠಗಳ ಮುಂದೆ ಧರಣಿ ನಡೆಸುತ್ತೇವೆ ಎಂದು ಮುತಾಲಿಕ್ ಹೇಳಿದರು. ನಿಮ್ಮ ಶಾಖೆಗಳು, ನಿಮ್ಮ ಭಕ್ತರು ಹೊರದೇಶಗಳಲ್ಲಿ ಇದ್ದಾರೆಂದು ನಮ್ಮ ದೇಶದಲ್ಲಿ ಅವರ ಆಚರಣೆ ಬೇಡ. ರವಿಶಂಕರ್ ಗುರೂಜಿಗೆ ಹೊರದೇಶದಲ್ಲಿ ಬಹಳಷ್ಟು ಶಾಖೆಗಳು ಇವೆ. ಅಲ್ಲಿ ಭಕ್ತರೂ ಇದ್ದಾರೆ. ಹಾಗಂತ, ಹಿಂದುಗಳ ಮೇಲೆ ವಿದೇಶ ಶೈಲಿಯನ್ನು ಹೇರುವುದು ಬೇಡ. ನಮ್ಮ ಸಂಪ್ರದಾಯಗಳನ್ನು ದೂರಕ್ಕೆ ತಳ್ಳುವುದು ಸರಿಯಲ್ಲ ಎಂದು ಮುತಾಲಿಕ್ ಹೇಳಿದರು.
ಎಸ್ ಡಿಪಿಐ, ಪಿಎಫ್ಐ ಬ್ಯಾನ್ ಯಾಕಿಲ್ಲ ?
ಕರ್ನಾಟಕದಲ್ಲಿ 26 ಮಂದಿ ಹಿಂದುಗಳ ಕೊಲೆಯಲ್ಲಿ ಇವರ ಪಾತ್ರ ಇದೆ. 9 ಕೊಲೆಗಳಲ್ಲಿ ಪಿಎಫ್ಐ ಮತ್ತು ಎಸ್ ಡಿಪಿಐನವರ ನೇರ ಕೈವಾಡ ಇರುವುದು ಸಾಬೀತಾಗಿದೆ. ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆಯಲ್ಲಿ ಎಸ್ ಡಿಪಿಐ ಹೆಸರು ಇದೆ. ಸಿಎಎ, ಎನ್ ಆರ್ ಸಿ ವಿರುದ್ಧ ಪ್ರತಿಭಟನೆಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಈ ಸಂಘಟನೆಗಳಿಗೆ 100 ಕೋಟಿ ಫಂಡಿಂಗ್ ಆಗಿರುವುದರ ಬಗ್ಗೆ ಕೇಂದ್ರ ಸರಕಾರದ ಬಳಿ ದಾಖಲೆ ಇದೆ. ಈಗ ಎಸ್ ಡಿಪಿಐ ವಿಜಯೋತ್ಸವದಲ್ಲಿ ಪಾಕಿಸ್ತಾನದ ಪರ ಜೈಕಾರ ಹಾಕುತ್ತಾರೆ. ಹೀಗಿದ್ದರೂ, ಈ ಸಂಘಟನೆಗಳನ್ನು ನಿಷೇಧ ಮಾಡದಿದ್ದರೆ ನೀವು ಯಾವಾಗ ಮಾಡುವುದು ಎಂದು ಸರಕಾರವನ್ನು ಪ್ರಶ್ನಿಸಿದ ಮುತಾಲಿಕ್, ಈ ಸಂಘಟನೆಗಳ ನಿಷೇಧಕ್ಕಾಗಿ ಆಂದೋಲನ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಗೋಹತ್ಯೆ ನಿಷೇಧ ಕಾನೂನು ಮಾಡಿದ್ದಾರೆ. ಅದರಲ್ಲೂ ಲೋಪಗಳಿವೆ. 13 ವರ್ಷ ಆದಮೇಲೆ ಗೋವನ್ನು ಕಡಿಯಬಹುದು ಅಂದರೆ ಅದರ ಅರ್ಥ ಏನು ? ಬ್ಯಾನ್ ಅಂದ್ರೆ ಪೂರ್ತಿ ಬ್ಯಾನ್ ಆಗಬೇಕು. ಗೋಹತ್ಯೆಗೆ ಎಲ್ಲಿಯೂ ಆಸ್ಪದ ಇರಬಾರದು ಎಂದು ಮುತಾಲಿಕ್ ಹೇಳಿದರು.
Video:
Pramod Muthalik says new year celebration is not a Hindu culture Dharmasthal temple authority should give an apology
21-06-25 02:48 pm
Bengaluru Staff
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
21-06-25 08:50 pm
HK News Desk
Couple Caught at Jaipur Hotel, Video: ಹೋಟೆಲ್...
20-06-25 10:19 pm
Ayatollah Khamenei; ಭಾರತಕ್ಕೂ ಇರಾನ್ ಮುಖ್ಯಸ್ಥ ಅ...
20-06-25 09:15 pm
ದೆಹಲಿಯ ನ್ಯಾಯಾಧೀಶರ ನಿವಾಸದಲ್ಲಿ ಕಂತೆ ಕಂತೆ ನಗದು ;...
19-06-25 10:58 pm
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
21-06-25 08:58 pm
Mangaluru Correspondent
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm