ಬಿಜೆಪಿಗಿಂತ ಹೆಚ್ಚು ಜನ ಕಾಕ್ರೋಚ್ ಪಾರ್ಟಿ ಬೆಂಬಲಿಸಿದ್ದಾರೆ, ಆರ್ಥಿಕತೆ ಕುಸಿದು ಹೋಗಿದೆ, ಪಾಕ್- ಬಾಂಗ್ಲಾಕ್ಕಿಂತಲೂ ಕರೆನ್ಸಿ ಕುಸಿದಿದೆ ; ಗುಂಡೂರಾವ್ ಲೇವಡಿ

22-05-26 06:01 pm       HK News Staffer   ಕರ್ನಾಟಕ

ದೇಶದಲ್ಲಿ ಅರಾಜಕತೆ ಎಷ್ಟಿದೆ ಅಂದ್ರೆ ಕಾಕ್ರೋಚ್ ಜನತಾ ಪಾರ್ಟಿಗೆ ಸಬ್‌ಸ್ಕ್ರಿಪ್ಷನ್ ಬಿಜೆಪಿ ಪಕ್ಷದ ಸಬ್‌ಸ್ಕ್ರಿಪ್ಷನ್‌ಗಿಂತ ಹೆಚ್ಚಾಗಿದೆ. ಆದರೆ ಈ ಪಾರ್ಟಿಯ ಸಾಮಾಜಿಕ ಜಾಲತಾಣ‌ ಅಕೌಂಟನ್ನು ನಿರ್ಬಂಧಿಸುವ ಕೆಲಸ ಆಗ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳೂರು, ಮೇ 22: ದೇಶದಲ್ಲಿ ಅರಾಜಕತೆ ಎಷ್ಟಿದೆ ಅಂದ್ರೆ ಕಾಕ್ರೋಚ್ ಜನತಾ ಪಾರ್ಟಿಗೆ ಸಬ್‌ಸ್ಕ್ರಿಪ್ಷನ್ ಬಿಜೆಪಿ ಪಕ್ಷದ ಸಬ್‌ಸ್ಕ್ರಿಪ್ಷನ್‌ಗಿಂತ ಹೆಚ್ಚಾಗಿದೆ. ಆದರೆ ಈ ಪಾರ್ಟಿಯ ಸಾಮಾಜಿಕ ಜಾಲತಾಣ‌ ಅಕೌಂಟನ್ನು ನಿರ್ಬಂಧಿಸುವ ಕೆಲಸ ಆಗ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸದ್ದು ಮಾಡ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟು ಹೋಗಿದೆ. ಮನಮೋಹನ್ ಸಿಂಗ್ ಸರಕಾರ ಇದ್ದಾಗ ಮೋದಿಯವರು ಭಾಷಣ ಬಿಗಿಯುತ್ತಿದ್ದರು. ಈಗ ದೇಶದ ರೂಪಾಯಿ ಮೌಲ್ಯ ಅಮೇರಿಕಾ ಡಾಲರ್ ಜೊತೆಯಲ್ಲ ಪಾಕಿಸ್ತಾನ, ಬಾಂಗ್ಲಾದೇಶದ ಕರೆನ್ಸಿ ಮೌಲ್ಯಕ್ಕಿಂತಲೂ ಕೆಳಮಟ್ಟಕ್ಕೆ ಕುಸಿದಿದೆ‌. ಮೋದಿಯವರ ವಿದೇಶಾಂಗ ನೀತಿ, ಆರ್ಥಿಕ ಶಕ್ತಿ ಏನೆಂದೇ ಅರ್ಥ ಆಗುವುದಿಲ್ಲ.‌ ವಿಶ್ವ ಮಟ್ಟದಲ್ಲಿ ಭಾರತ ಸೂಪರ್ ಪವರ್ ಎಂದು ಬಿಂಬಿಸುತ್ತಿದ್ದರು. ಆದರೆ ಈಗ ದೇಶದ ಜಿಡಿಪಿ ಆರನೇ ಸ್ಥಾನಕ್ಕೆ ಇಳಿದಿದೆ ಎಂದು ಲೇವಡಿ ಮಾಡಿದರು. 

ಇದೇ ವೇಳೆ, ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಬಗ್ಗೆಯೂ ಗುಂಡೂರಾವ್ ಸುಳಿವು ನೀಡಿದ್ದು ಸಂಪುಟ ವಿಚಾರದಲ್ಲಿ ಏನೇನಾಗುತ್ತೆ ಅನ್ನೋದು ಹೇಳೋಕೆ ಆಗಲ್ಲ. ಈ ತಿಂಗಳ ಕೊನೆಯಲ್ಲಿ‌ ಅಥವಾ ಜೂನ್ ನಲ್ಲಿ ಸಂಪುಟ ಪುನರ್ ರಚನೆ ಆಗಬಹುದು. ಹೊಸಬರಿಗೆ ಅವಕಾಶ ಸಿಗಬಹುದು ಎಂದು ಹೇಳಿದರು. ನಿಮ್ಮ ಸಚಿವ ಸ್ಥಾನ ಬದಲಾಗುವ ಸಾಧ್ಯತೆ ಬಗ್ಗೆ ಏನೇನು ಆಗುತ್ತೆ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.