ಬ್ರೇಕಿಂಗ್ ನ್ಯೂಸ್
07-03-26 08:05 pm HK News Staffer ಕರ್ನಾಟಕ
ಕಾಸರಗೋಡು, ಮಾರ್ಚ್ 7 : “ಕೈ ಸರಿ ಇಲ್ಲದಿದ್ದರೆ ಏನಂತೆ, ಗುರಿ ತಲುಪುವ ಛಲವೊಂದಿದ್ದರೆ ಸಾಕು” ಎಂಬ ಮಾತು ಈಕೆಯ ಪಾಲಿಗೆ ಅಕ್ಷರಶಃ ನಿಜವಾಗಿದೆ. ಹುಟ್ಟಿನಿಂದಲೇ ಮುಂಗೈ ಮೊಂಡಾಗಿದ್ದು ಅಂಗವಿಕಲೆಯಾಗಿದ್ದ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ಕಾಜಲ್ ರಾಜು ಯುಪಿಎಸ್ಸಿ ಪರೀಕ್ಷೆಯಲ್ಲಿ 167ನೇ ರ್ಯಾಂಕ್ ಪಡೆದು ದೇಶದ ಗಮನ ಸೆಳೆದಿದ್ದಾರೆ.
ಫೋಕೊಮೆಲಿಯಾ ಸಿಂಡ್ರೋಮ್ ಎಂಬ ಅಪರೂಪದ ದೈಹಿಕ ಸವಾಲನ್ನು ಮೆಟ್ಟಿ ನಿಂತಿರುವ ಕಾಜಲ್ ಅವರು, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 167ನೇ ರ್ಯಾಂಕ್ ಗಳಿಸಿ ಆಡಳಿತ ಸೇವೆ(ಐಎಎಸ್) ಸೇರುವ ದಾರಿಯನ್ನು ಸುಗಮಗೊಳಿಸಿದ್ದಾರೆ.
ಕಾಜಲ್ ರಾಜು ಅವರು ಕಾಸರಗೋಡು ಜಿಲ್ಲೆಯ ನೀಲೇಶ್ವರ ಸಮೀಪದ ಪಲ್ಲಿಕ್ಕರದವರು. ಅವರ ತಾಯಿ ಶೀಬಾ ಎಂ. ಡಿವೈನ್ ಪ್ರಾವಿಡೆನ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಂದೆ ರಾಜು ಪಿ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಪ್ರಸ್ತುತ ರಬ್ಬರ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
2022ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆಗೆ ಹಾಜರಾದಾಗ, “ಒಂದು ವೇಳೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ನಿಮಗೆ ಎಷ್ಟು ಕಷ್ಟವಾಗಬಹುದು?” ಎಂದು ಸಮಿತಿ ಸದಸ್ಯರು ಪ್ರಶ್ನಿಸಿದ್ದರು. ಆಗ ಬಲ ಮುಂಗೈ ಇಲ್ಲದಿದ್ದರೂ ಯಾವುದೇ ಹಿಂಜರಿಕೆಯಿಲ್ಲದೆ ಕಾಜಲ್ ನೀಡಿದ ಉತ್ತರ ಸ್ಪಷ್ಟವಾಗಿತ್ತು, “ನಾನು ಮತ್ತೆ ಪ್ರಯತ್ನಿಸುತ್ತೇನೆ.” ಇದೇ ಆತ್ಮವಿಶ್ವಾಸ ಅವರ ಯಶಸ್ಸಿನ ಬೆನ್ನೆಲುಬಾಗಿದೆ.
ಆ ವರ್ಷ ಅವರು 910ನೇ ರ್ಯಾಂಕ್ ಪಡೆದು ಭಾರತೀಯ ರೈಲ್ವೆ ನಿರ್ವಹಣಾ ಸೇವೆಗೆ ಆಯ್ಕೆಯಾಗಿದ್ದರು. ಆದರೆ ಬಾಲ್ಯದಿಂದಲೇ ಕಂಡಿದ್ದ ‘ಜಿಲ್ಲಾಧಿಕಾರಿ’ ಆಗುವ ಕನಸನ್ನು ಸಾಧಿಸುವ ಗುರಿಯಿಂದ ಮತ್ತೆ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧರಾದರು. 2023ರಲ್ಲಿ ಪರೀಕ್ಷೆ ಬರೆದಾಗ 956 ರ್ಯಾಂಕ್ ಬಂದಿತ್ತು. 2024ರಲ್ಲಿ ಪ್ರಿಲಿಮಿನರಿ ಪರೀಕ್ಷೆಯಲ್ಲೇ ಫೇಲಾಗಿದ್ದರು. 2025ರಲ್ಲಿ ಸತತ ನಾಲ್ಕನೇ ಬಾರಿಗೆ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ.
167ನೇ ರ್ಯಾಂಕ್ ಬಂದ ಸುದ್ದಿ ಬಂದಾಗ ಕಾಜಲ್ ಜಮ್ಮುವಿನಲ್ಲಿದ್ದರು. ರೈಲ್ವೇ ಇಲಾಖೆಯ ತರಬೇತಿ ಭಾಗವಾಗಿ ಮಿಲಿಟರಿ ಪ್ರದೇಶಗಳಿಗೆ ಭೇಟಿ ನೀಡಲು ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಸ್ನೇಹಿತೆಯೊಬ್ಬರ ವಾಟ್ಸಾಪ್ ಸಂದೇಶದ ಮೂಲಕ ಫಲಿತಾಂಶ ತಿಳಿದುಕೊಂಡರು. ಆ ಕ್ಷಣದಲ್ಲಿ ಅವರ ಸಂತೋಷಕ್ಕೆ ಮಿತಿ ಇರಲಿಲ್ಲ. ಪ್ರತಿ ವರ್ಷವೂ ಸಾಕಷ್ಟು ತಯಾರಿ ಮಾಡುತ್ತಿದ್ದೆ. ಈ ಬಾರಿ ಹಿಂದಿಗಿಂತ ಹೆಚ್ಚು ತಯಾರಿ ನಡೆಸಿದ್ದೆ. ಬೆಳಗ್ಗೆ 5 ಗಂಟೆಯಿಂದ ತೊಡಗಿ ತರಬೇತಿ, ಕ್ಲಾಸ್ ಅಂತ ರಾತ್ರಿಯ ವರೆಗೂ ತಯಾರಿ ನಡೆಸುತ್ತಿದ್ದರು ಎಂದು ಹೇಳುತ್ತಾರೆ.
ಕಾಜಲ್ ಅವರ ಸಾಧನೆ ಕೇವಲ ಯುಪಿಎಸ್ಸಿ ಪರೀಕ್ಷೆಗೆ ಮಾತ್ರ ಸೀಮಿತವಲ್ಲ. 10ನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಗ್ರೇಡ್ ಪಡೆದಿದ್ದ ಅವರು, ಪ್ಲಸ್ ಟು ಪರೀಕ್ಷೆಯಲ್ಲಿ ಶೇ.99 ಅಂಕ ಗಳಿಸಿದ್ದರು. ಶಿಕ್ಷಣದ ಜೊತೆಗೆ ಶಾಸ್ತ್ರೀಯ ಸಂಗೀತ ಹಾಗೂ ಚಿತ್ರಕಲೆಯಲ್ಲಿಯೂ ಪರಿಣತರಾಗಿದ್ದರು. ಕಾಜಲ್ ಕೊನೆಗೂ ತನ್ನ ಅಧಿಕಾರಿ ಆಗೋ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಮುಂದೆ ಆಡಳಿತ ಸೇವೆಯ ಬಗ್ಗೆ ಲಕ್ನೋದಲ್ಲಿ ತರಬೇತಿ ಪಡೆಯಲಿದ್ದಾರೆ. ದೈಹಿಕ ಸವಾಲುಗಳನ್ನು ಮೀರಿ ಅಸಾಧ್ಯವೆನಿಸಿದ ಗುರಿಯನ್ನು ಸಾಧಿಸಿದ ಕಾಜಲ್ ಅವರ ಈ ಯಶೋಗಾಥೆ ಸಾವಿರಾರು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪ್ರೇರಣೆಯಾಗಲಿದೆ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 11:40 am
HK News Staffer
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm