ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ' ! ದಾಳಿ ವೇಳೆ ಒಬ್ಬನ ಬಳಿಯಲ್ಲೇ 23 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ

13-02-26 10:45 pm       HK News Desk   ಕರ್ನಾಟಕ

ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀಕ್ಷಕ ಎಂಜಿನಿಯರ್ ಎಚ್.ಎಂ. ಜನಾರ್ದನ್ ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಏಕಕಾಲದಲ್ಲಿ 6 ಕಡೆ ದಾಳಿ ನಡೆಸಿ ಸುಮಾರು 23 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ‌

ಬೆಂಗಳೂರು, ಫೆ.13: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀಕ್ಷಕ ಎಂಜಿನಿಯರ್ ಎಚ್.ಎಂ. ಜನಾರ್ದನ್ ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಏಕಕಾಲದಲ್ಲಿ 6 ಕಡೆ ದಾಳಿ ನಡೆಸಿ ಸುಮಾರು 23 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ‌

ಜನಾರ್ದನ್ ಅವರ ಆಪ್ತ ಸುಜಯ್ ಶೆಟ್ಟಿ ಎಂಬವರಿಗೆ ಸೇರಿದ ಫ್ಲಾಟ್‌ನಲ್ಲಿ ಅಧಿಕಾರಿಗಳು ಶೋಧ ನಡೆಸಿದಾಗ, ಬರೋಬ್ಬರಿ 1.70 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಈ ಹಣವು ಎಂಜಿನಿಯರ್ ಜನಾರ್ದನ್ ಅವರಿಗೆ ಸೇರಿದ್ದಾ ಎಂಬ ನಿಟ್ಟಿನಲ್ಲಿ ತನಿಖೆ ಸಾಗಿದೆ. ಜನಾರ್ದನ್ ಅವರಿಗೆ ಸೇರಿದ ಮನೆ, ಕಚೇರಿ ಸೇರಿದಂತೆ ಒಟ್ಟು 6 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಇದರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಇದೇ ವೇಳೆ ಲೋಕೋಪಯೋಗಿ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಇಂಜಿನಿಯರ್‌ಗಳು ಸೇರಿದಂತೆ ನಾಲ್ವರು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ನಡೆದ ದಾಳಿಯಾಗಿದ್ದು 23 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಜನಾರ್ಧನ ಅವರ ಬಳಿ 1 ನಿವೇಶನ, 3 ಮನೆಗಳು, 34 ಎಕರೆ ಕೃಷಿ ಜಮೀನು, ₹1.70 ಕೋಟಿ ನಗದು, ₹7.08 ಲಕ್ಷದ ಚಿನ್ನಾಭರಣ, ₹20 ಲಕ್ಷದ ವಾಹನಗಳು, ₹60 ಲಕ್ಷ ಮೌಲ್ಯದ ಇತರೆ ವಸ್ತುಗಳು ಒಟ್ಟು ₹4.42 ಕೋಟಿ ಮೌಲ್ಯದ ಆಸ್ತಿ ವಶಪಡಿಸಿದ್ದಾರೆ.

ಪುರುಷೋತ್ತಮ ದಾಸ್ ಹೆಗಡೆ – ₹11.29 ಕೋಟಿ

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪುರುಷೋತ್ತಮ ದಾಸ್ ಹೆಗಡೆ ಅವರಿಗೆ ಸೇರಿದ 14 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.

ಪತ್ತೆಯಾದ ಆಸ್ತಿ:

  • 1 ನಿವೇಶನ, 2 ಮನೆಗಳು
  • 2 ಶಿಕ್ಷಣ ಸಂಸ್ಥೆಗಳು
  • 11 ಎಕರೆ 30 ಗುಂಟೆ ಜಮೀನು
  • ₹44.23 ಲಕ್ಷ ನಗದು
  • ₹60.79 ಲಕ್ಷ ಚಿನ್ನಾಭರಣ
  • ₹27 ಲಕ್ಷ FD

ಒಟ್ಟು ಆಸ್ತಿ: ₹11.29 ಕೋಟಿ (ಅಂದಾಜು)

ಅರ್ಜುನ್ ಆರ್.ಎಚ್ (BESCOM) – ₹2.18 ಕೋಟಿ

• 2 ನಿವೇಶನ, 3 ಮನೆಗಳು

• 2 ಎಕರೆ 20 ಗುಂಟೆ ಜಮೀನು

• ಚಿನ್ನಾಭರಣ, ವಾಹನಗಳು, ಇತರೆ ವಸ್ತುಗಳು

ಒಟ್ಟು ಅಸಮತೋಲನ ಆಸ್ತಿ: ₹2.18 ಕೋಟಿ

ಸೋಮಲಿಂಗಪ್ಪ ಸಿದ್ದನಗೌಡರ್ – ₹1.82 ಕೋಟಿ

  • 3 ನಿವೇಶನ, 1 ಮನೆ
  • 3 ಎಕರೆ ಕೃಷಿ ಜಮೀನು
  • ₹82,840 ನಗದು
  • ಚಿನ್ನಾಭರಣ, ವಾಹನ, ಇತರೆ ವಸ್ತುಗಳು

ಒಟ್ಟು ಅಸಮತೋಲನ ಆಸ್ತಿ: ₹1.82 ಕೋಟಿ

ಪ್ರಕರಣದ ತನಿಖೆ ಮುಂದುವರಿದಿದ್ದು, ಪತ್ತೆಯಾದ ನಗದು ಹಾಗೂ ಆಸ್ತಿಗಳ ಮೂಲದ ಬಗ್ಗೆ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

In a major anti-corruption operation, officials of the Karnataka Lokayukta have unearthed disproportionate assets worth over ₹23 crore during raids conducted against H.M. Janardhan, Superintendent Engineer of the Karnataka Residential Educational Institutions Society (KREIS), on charges of amassing wealth beyond known sources of income.