ಬ್ರೇಕಿಂಗ್ ನ್ಯೂಸ್
05-01-26 10:00 pm HK News Desk ಕರ್ನಾಟಕ
ಮೈಸೂರು, ಜ.5: ಜನರ ಆಶೀರ್ವಾದದಿಂದ ದೇವರಾಜ ಅರಸು ದಾಖಲೆ ಬ್ರೇಕ್ ಮಾಡುತ್ತಿದ್ದೇನೆ. ಆದರೆ ಅರಸು ಅವರೊಂದಿಗೆ ನನ್ನನ್ನು ಹೋಲಿಕೆ ಮಾಡಬೇಡಿ. ದೇವರಾಜ ಅರಸು ಕೂಡ ನಮ್ಮ ಮೈಸೂರು ಜಿಲ್ಲೆಯವರು. ಅವರ ದಾಖಲೆ ಮುರಿಯುತ್ತಿರುವುದು ಜನರ ಆಶೀರ್ವಾದದಿಂದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕವಾಗಿ ಅರಸು ಹಿಂದುಳಿದವರಲ್ಲ. ಅರಸು ಜನಾಂಗದಲ್ಲಿ ಜನಸಂಖ್ಯೆ ಕಡಿಮೆ ಇರಬಹುದು. ಅವರದ್ದು ಸಾಮಾಜಿಕವಾಗಿ ಮುಂದುವರಿದ ಜನಾಂಗ, ನನ್ನದು ಸಮಾಜದಲ್ಲಿ ತಳ ಸಮುದಾಯ. ನನಗೂ ಅವರಿಗೂ ಹೋಲಿಕೆ ಸಲ್ಲದು. ಸನ್ನಿವೇಶ ಬಂತು ನಾನು ಇಲ್ಲಿ ತನಕ ಬಂದಿದ್ದೇನೆ. 1983ರಲ್ಲಿ ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಿದ್ದೆ. ಜನರೇ ದುಡ್ಡು ಕೊಟ್ಟು ವೋಟ್ ಹಾಕಿದ್ರು. ದೇವರಾಜ ಅರಸು ಸಿಎಂ ಆಗಿದ್ದರು. ಆ ಕಾಲವೇ ಬೇರೆ, ಈ ಕಾಲವೇ ಬೇರೆ. ಹಿಂದಿನ ಕಾಲಕ್ಕೆ ಹೋಲಿಕೆ ಮಾಡೋದಕ್ಕು ಆಗಲ್ಲ ಎಂದು ಹೇಳಿದರು.
ದಾಖಲೆ ಬಗ್ಗೆ ಕೇಳಿದ ಪ್ರಶ್ನೆಗೆ, ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ. ಮುಂದೆ ಯಾರಾದ್ರೂ ಈ ದಾಖಲೆಯನ್ನೂ ಮುರಿಯಬಹುದು. ಕ್ರಿಕೆಟ್ ನಲ್ಲಿ ಸಚಿನ್ ರೆಕಾರ್ಡ್ ಬ್ರೇಕ್ ಆಗಲ್ಲ ಅಂದ್ರು. ವಿರಾಟ್ ಬ್ರೇಕ್ ಮಾಡಿದ್ರಲ್ವಾ. ಮುಂದೆ ನನಗಿಂತ ಜಾಸ್ತಿ ಸಿಎಂ ಆಗೋರು, ಬಜೆಟ್ ಮಂಡನೆ ಮಾಡೋರು ಬರಬಹುದು ಎಂದರು.
ಸಾಧನಾ ಸಮಾವೇಶ ಬಗ್ಗೆ ಯೋಚನೆ ಮಾಡಿಲ್ಲ. ಕೃಷ್ಣ ಭೈರೇಗೌಡ ಕಾರ್ಯಕ್ರಮ ಮಾಡ್ತೀನಿ ಅಂತ ಹೇಳ್ತಿದ್ರು ಅಷ್ಟೇ ಎಂದರು. ಸಂಪುಟ ಪುನಾರಚನೆ ಆಗ್ಬೇಕು. ಅದರ ಬಗ್ಗೆ ರಾಹುಲ್ ಗಾಂಧಿ ಜೊತೆ ಮಾತನಾಡುತ್ತೇನೆ. ಜನವರಿಯಲ್ಲಿ ಸಭೆ ಕರೆಯುತ್ತೇನೆ ಅಂದಿದ್ರು. ಈಗ ಯಾವಾಗ ಕರೆದ್ರು ನಾನು ಹೋಗುತ್ತೇನೆ ಎಂದರು.
ಬಳ್ಳಾರಿ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗ್ಬೇಕು ಅನ್ನೋ ಬಿಜೆಪಿ ಒತ್ತಾಯದ ಬಗ್ಗೆ, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ವರದಿ ಬರಲಿ, ಬಳಿಕ ಯಾವ ತನಿಖೆ ಮಾಡಬೇಕು ಎಂದು ತೀರ್ಮಾನ ಮಾಡ್ತೀನಿ ಎಂದರು.
Karnataka CM Siddaramaiah said that although he is set to break former CM Devaraj Aras record for the longest tenure, comparisons between them are unfair. Siddaramaiah stated that Aras belonged to a socially advanced community, whereas he hails from a lower social strata, and the political eras are entirely different.
27-02-26 10:17 pm
HK News Desk
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
ವರನಟ ಡಾ.ರಾಜ್ ಅಪಹರಣ ಪ್ರಕರಣ ; ಬರೋಬ್ಬರಿ 25 ವರ್ಷಗ...
25-02-26 07:54 pm
27-02-26 03:55 pm
HK News Staffer
ಲಂಚ ಆರೋಪದಲ್ಲಿ ಸಿಕ್ಕಿಬಿದ್ದ ಗಣಿ ಉಪ ನಿರ್ದೇಶಕರ ಮನ...
27-02-26 06:14 am
ಮಾರ್ಚ್ 11ರಿಂದ ಅನಿರ್ದಿಷ್ಟ ಮುಷ್ಕರ ; ರಾಜ್ಯಾದ್ಯಂತ...
25-02-26 10:10 pm
ಮಧ್ಯಪ್ರದೇಶದಲ್ಲಿ ಹೊಸ ರೀತಿಯ ಮತಾಂತರ ಜಾಲ ; ಹಿಂದು...
25-02-26 03:38 pm
ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ; ಮತ್ತೆ ಭುಗಿಲೆ...
24-02-26 01:21 pm
27-02-26 08:59 pm
Mangalore Correspondent
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
Kuntikana Kidnap, False: ಕುಂಟಿಕಾನದಲ್ಲಿ ಮಕ್ಕಳು...
27-02-26 05:00 pm
27-02-26 09:23 pm
Mangalore Correspondent
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm
ಹವಾಲಾ ಹಣದ ಭಾರವೇ ಸಿಜೆ ರಾಯ್ ಪ್ರಾಣ ತೆಗೆಯಿತಾ?! ಕ...
26-02-26 04:45 pm