ಬ್ರೇಕಿಂಗ್ ನ್ಯೂಸ್
29-09-25 07:59 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.29 : ಹೈದರಾಬಾದ್ನಲ್ಲಿ ನಡೆದ ಕಾಂತಾರ, ಚಾಪ್ಟರ್ 1 ಕಾರ್ಯಕ್ರಮ ವಿವಾದಕ್ಕೆ ಗುರಿಯಾಗಿದೆ. ತೆಲುಗು ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾದ ಬಗ್ಗೆ ಸಂಪೂರ್ಣ ಕನ್ನಡದಲ್ಲಿ ಮಾತನಾಡಿದ್ದು, ತೆಲುಗಿನಲ್ಲಿ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ ಎಂಬುದು ತೆಲುಗು ಪ್ರೇಕ್ಷಕರ ಕೋಪಕ್ಕೆ ಗುರಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ತೆಲುಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಆರ್ಸಿ ಕನ್ವೆನ್ಷನ್ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಿಷಬ್ ಜೊತೆಗೆ ಜೂನಿಯರ್ ಎನ್ಟಿಆರ್ ಕೂಡ ಭಾಗವಹಿಸಿದ್ದರು. ರಿಷಭ್ ಶೆಟ್ಟಿ ಪ್ರಚಾರದ ಸಮಯದಲ್ಲಿ ಹಿಂದಿ, ತಮಿಳು ಕಾರ್ಯಕ್ರಮಗಳಲ್ಲಿ ಹಿಂದಿ ಮತ್ತು ತಮಿಳು ಸೇರಿದಂತೆ ಆಯಾ ರಾಜ್ಯದ ಭಾಷೆಗಳಲ್ಲಿ ಮಾತನಾಡಿದ್ದಾರೆ. ಆದರೆ, ಹೈದರಾಬಾದ್ನಲ್ಲಿ ಮಾತ್ರ ಅವರು ತೆಲುಗು ಮತ್ತು ಇಂಗ್ಲಿಷ್ ಎರಡನ್ನೂ ಕಡೆಗಣಿಸಿ, ಕನ್ನಡದಲ್ಲೇ ಮಾತನಾಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
'ಅದು ರಿಷಬ್ ಶೆಟ್ಟಿಯವರ ದುರಹಂಕಾರ. ಹಿಂದಿಯಲ್ಲಿ ಸಂದರ್ಶನಗಳನ್ನು ನೀಡಲು ಅವರಿಗೆ ಯಾವುದೇ ತೊಂದರೆ ಇರಲಿಲ್ಲ. ಅವರು ತೆಲುಗಿನಲ್ಲಿ ಕನಿಷ್ಠ ಕೆಲವು ಪದಗಳನ್ನಾದರೂ ಪ್ರಯತ್ನಿಸಬೇಕಿತ್ತು' ಎಂದು ಎಕ್ಸ್ ಬಳಕೆದಾರರು ಬರೆದಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ, 'ರಿಷಬ್ ಶೆಟ್ಟಿ ತೆಲುಗಿನಲ್ಲಿ ಒಂದು ವಾಕ್ಯವನ್ನು ಸಹ ಪ್ರಯತ್ನಿಸದಿರುವುದನ್ನು ನೋಡಿ ನಿರಾಸೆ ಎನಿಸಿದೆ. ತೆಲುಗು ಪ್ರೇಕ್ಷಕರು ಮೊದಲ ಭಾಗವನ್ನು ದೊಡ್ಡ ಪ್ಯಾನ್-ಇಂಡಿಯಾ ಹಿಟ್ ಮಾಡಿದ್ದಾರೆ. ಹೀಗಾಗಿ, ನಾವು ಆ ಮೂಲಭೂತ ಗೌರವಕ್ಕೆ ಅರ್ಹರು' ಎಂದು ಬರೆದಿದ್ದಾರೆ.
ತೆಲುಗು ಡಬ್ಬಿಂಗ್ ಆವೃತ್ತಿಯ ಟಿಕೆಟ್ ಬೆಲೆ ಏರಿಕೆಯ ವಿವಾದವು ಕಾವು ಪಡೆದಿರುವಾಗಲೇ ಭಾಷೆಯ ವಿಚಾರದಲ್ಲಿ ವಿವಾದ ಎಬ್ಬಿಸಲಾಗಿದೆ. 'ತೆಲುಗು ರಾಜ್ಯಗಳಲ್ಲಿ, ನೀವು ಜನರನ್ನು ಗೌರವಿಸಬೇಕು ಮತ್ತು ಟಿಕೆಟ್ ಹೆಚ್ಚಳ ಬಯಸಿದಾಗಲೆಲ್ಲ ಕನಿಷ್ಠ ತೆಲುಗು ಮಾತನಾಡಬೇಕು' ಒಬ್ಬ ಬಳಕೆದಾರ ಒತ್ತಾಯಿಸಿದ್ದಾರೆ.
The pre-release event of Kantara: Chapter 1 in Hyderabad has sparked controversy after actor-director Rishab Shetty spoke entirely in Kannada, without attempting even a few words in Telugu. Fans expressed disappointment on social media, noting that Rishab had spoken in Hindi and Tamil at other promotional events but ignored Telugu in Hyderabad, despite the first film’s massive success in the Telugu states.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm