ಬ್ರೇಕಿಂಗ್ ನ್ಯೂಸ್
21-08-25 02:03 pm HK News Desk ಕರ್ನಾಟಕ
ಮಂಡ್ಯ, ಆ 21 : ಚನ್ನಪಟ್ಟಣ ತಾಲೂಕಿನ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಆರೋಪಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಮೃತನ ಕುಟುಂಬಸ್ಥರು ಪೊಲೀಸರೇ ಹೊಡೆದು ಸಾಯಿಸಿದ್ದಾರೆಂದು ಆರೋಪಿಸಿದ್ದಾರೆ. ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಂಡ್ಯ ಬೊಮ್ಮನಾಯಕನಹಳ್ಳಿ ಗ್ರಾಮದ ಹೊನ್ನಾರತಿ ದೇವಸ್ಥಾನದಲ್ಲಿ ಕಳ್ಳತನ ಹಿನ್ನೆಲೆ ರಮೇಶ ಹಾಗೂ ಆತನ ಪುತ್ರ ಮಂಜುನನ್ನು ಬಂಧಿಸಲಾಗಿತ್ತು. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 2 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಆರೋಪಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ಧಾರೆ. ಆದರೆ, ಪೊಲೀಸರು ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗುವವರೆಗೂ ಶವ ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪ್ರಕರಣ ಸಿಐಡಿಗೆ ವಹಿಸಲಾಗಿದೆ ಎಂದ ಎಸ್ಪಿ:
ಮೃತದೇಹವನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿ, "ಕಳ್ಳತನ ಪ್ರಕರಣದಲ್ಲಿ 18ರಂದು ಮೃತ ಆರೋಪಿಯನ್ನು ಎಂ.ಕೆ. ದೊಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. 20ರ ಮುಂಜಾನೆ ಆರೋಪಿಯು ಲಾಕಪ್ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ತನಿಖೆ ಮುಗಿದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ನನಗೆ ಒದೆ ತಡೆಯೋಕೆ ಆಗ್ತಾ ಇಲ್ಲ!:
ಮೃತನ ಪುತ್ರಿ ಮಾತನಾಡಿ, "ನಿಮ್ಮ ತಂದೆಯನ್ನು ಬಂಧಿಸಿದ್ದೇವೆ. ನೀವು ಠಾಣೆಗೆ ಬರಬೇಕು ಇಲ್ಲದಿದ್ದರೆ ನಿಮ್ಮ ತಂದೆಯನ್ನು ಕರೆ ತಂದಂತೆ ನಿಮ್ಮನ್ನು ಕರೆದುಕೊಂಡು ಬರುತ್ತೇವೆ. ನಿಮ್ಮ ತಂದೆ ಕೊಟ್ಟಿರುವ ಒಡವೆ ಎಲ್ಲ ತೆಗೆದುಕೊಂಡು ಬರಬೇಕು ಎಂದು ಬೆದರಿಸಿದ್ದರು. ಹೀಗಾಗಿ ನಾನು ನನ್ನ ಕತ್ತಿನಲ್ಲಿ ಇದ್ದ ತಾಳಿ, ಕಾಸು, ಕಿವಿಯಲ್ಲಿ ಒಂದು ಜೊತೆ ಓಲೆ ಹಾಗೂ ಸಿಲಿಂಡರ್ನ್ನು ತೆಗೆದುಕೊಂಡು ಹೋಗಿದ್ದೆವು. ಪೊಲೀಸರು 'ಇನ್ನು ಏನಾದರೂ ಕೊಟ್ಟಿದ್ದಾರಾ ನಿಮ್ಮಪ್ಪ?. ಅದನ್ನು ತೆಗೆದುಕೊಂಡು ಬನ್ನಿ' ಎಂದಿದ್ದರು. ಇವೆಲ್ಲ ನಮ್ಮ ಸ್ವಂತದ್ದೇ ಎಂದು ನಾನು ಹೇಳಿದೆ. ಯಾವುದೇ ನಮ್ಮಪ್ಪ ತಂದು ಕೊಟ್ಟಿಲ್ಲ ಅಂತಾನೂ ಹೇಳಿದೆ. ನಾನು ಕೊಟ್ಟ ವಸ್ತುಗಳನ್ನು ಠಾಣೆಯಲ್ಲಿ ಇಟ್ಟುಕೊಂಡರು".
"ನಂತರ ಊರಿಗೆ ಹೋಗುವಷ್ಟರಲ್ಲಿ ಸಮಯ ಆಗಿತ್ತು. ಹಾಗಾಗಿ ನಾನು ಇಲ್ಲೇ ಸ್ನೇಹಿತೆ ಮನೆಯಲ್ಲಿ ಉಳಿದುಕೊಂಡೆ. ನಮ್ಮಪ್ಪ ಮಾತನಾಡಿ 'ಇಲ್ಲಿ ನನಗೆ ಒದೆ ತಡೆಯೋಕೆ ಆಗ್ತಾ ಇಲ್ಲ ಬೇಗ ಬಂದು ಕರೆದುಕೊಂಡು ಹೋಗಮ್ಮ' ಎಂದರು. ನಮ್ಮ ಅಣ್ಣನಿಗೂ ಸಹ ಹೊಡೆದಿದ್ದು, ಪೊಲೀಸ್ ಅವರು ಚಿತ್ರಹಿಂಸೆ ಕೊಟ್ಟಿದ್ದಾರೆ" ಎಂದು ಆರೋಪಿಸಿದ್ದಾರೆ.
A theft accused allegedly died by suicide inside the toilet of the M.K. Doddi Police Station in Channapatna taluk, Mandya district. However, the deceased’s family has accused the police of custodial torture leading to his death, triggering widespread outrage and emotional scenes outside the Channapatna Government Hospital.
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
28-02-26 10:54 pm
HK News Desk
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
ದೆಹಲಿ ಅಬಕಾರಿ ನೀತಿ ಹಗರಣ ; ಕೇಜ್ರಿವಾಲ್, ಸಿಸೋಡಿಯಾ...
27-02-26 03:55 pm
28-02-26 08:53 pm
HK News Desk
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm