CM Siddaramaiah, Janardhan Reddy; ನವೆಂಬರ್ ಒಳಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡೋದು ಖಚಿತ ; ಜನಾರ್ದನ ರೆಡ್ಡಿ 

16-07-25 09:36 pm       HK News Desk   ಕರ್ನಾಟಕ

ನವೆಂಬರ್ ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ನೀಡುವುದು ಖಚಿತ ಎಂದು ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. 

ಪುತ್ತೂರು, ಜುಲೈ 16: ನವೆಂಬರ್ ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ನೀಡುವುದು ಖಚಿತ ಎಂದು ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. 

ಕಡಬಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಾರ್ದನ ರೆಡ್ಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು ನವೆಂಬರ್ ತಿಂಗಳೊಳಗೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬಗ್ಗೆ ಮಾತುಕತೆ ಹಿಂದೆಯೇ ನಡೆದಿದೆ. ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೂ ಇದೇ ವಿಚಾರವನ್ನು ಸಿದ್ಧರಾಮಯ್ಯ ತಿಳಿಸಿದ್ದಾರೆ. ದೇವರಾಜ ಅರಸ್ ಆಡಳಿತದ ಅವಧಿಗಿಂತ ಒಂದು ದಿನದ ವರೆಗೆ ಅಧಿಕಾರ ಮಾಡಬೇಕು ಎನ್ನೋದು ಸಿದ್ಧರಾಮಯ್ಯರ ಆಸೆ. ಆ ಬಳಿಕ ಮುಖ್ಯಮಂತ್ರಿ‌ ಸ್ಥಾನ ಬಿಟ್ಟುಕೊಡುತ್ತೇವೆ ಎಂದು ಹೈಕಮಾಂಡ್ ಗೆ ಮಾತು ನೀಡಿದ್ದರು. ಈ ವಿಚಾರವನ್ನು ನಾನು ಸಂಡೂರು ಉಪ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದೇನೆ. ಅಧಿಕಾರ ಹಂಚಿಕೆಯನ್ನು 50-50 ಮಾದರಿಯಲ್ಲಿ ಮಾಡಿಕೊಂಡಿದ್ದಾರೆ. 

ಈ ಕಾರಣಕ್ಕಾಗಿಯೇ ಡಿ.ಕೆ.ಶಿವಕುಮಾರ್ ಅದಕ್ಕೆ ಬುನಾದಿ ಹಾಕಲು ಶುರು ಮಾಡಿದ್ದಾರೆ. ಆ ಕಾರಣಕ್ಕಾಗಿ ದೇವರಾಜ ಅರಸರ ಆಡಳಿತ ಅವಧಿ ಮೀರಿದ ತಕ್ಷಣವೇ ಸಿದ್ಧರಾಮಯ್ಯ ಅಧಿಕಾರ ಬಿಟ್ಟುಕೊಡುವ ಸಾಧ್ಯತೆಯಿದೆ. ಇಲ್ಲದೇ ಹೋದಲ್ಲಿ ಡಿ.ಕೆ.ಶಿ ಬಲವಂತವಾಗಿ ಮುಖ್ಯಮಂತ್ರಿ‌ ಕುರ್ಚಿ ಎಳೆದು ಕುಳಿತುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ, ಡಿಕೆಶಿ ಅಧಿಕಾರ ಪಡೆಯಲೇಬೇಕೆಂಬ ಆತುರದಲ್ಲಿದ್ದಾರೆ ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.

In a sensational political statement, former minister and Gangavathi MLA Gali Janardhan Reddy has claimed that Karnataka Chief Minister Siddaramaiah will resign from his post by November 2025.