ಬ್ರೇಕಿಂಗ್ ನ್ಯೂಸ್
19-12-20 04:04 pm Headline Karnataka News Network ಕರ್ನಾಟಕ
ಬೆಂಗಳೂರು, ಡಿ.19: ಹೋರಾಟದ ಹೆಸರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅಕ್ರಮ ಆಸ್ತಿ ಮಾಡಿದ್ದಾರೆ. ಸರಕಾರಗಳನ್ನು ಬ್ಲಾಕ್ ಮೇಲ್ ಮಾಡಿಸಿ, ಐಷಾರಾಮಿ ಕಾರು, ಬಂಗಲೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸರಕಾರ ತನಿಖೆ ನಡೆಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಕೋಡಿಹಳ್ಳಿ ನಕಲಿ ರೈತ ಹೋರಾಟಗಾರ. ಹಸಿರು ಶಾಲು ಹಾಕಿಕೊಂಡು ರೈತರನ್ನು ವಂಚಿಸುವ ದಲ್ಲಾಳಿ. ಸಿದ್ದರಾಮಯ್ಯ, ಕುಮಾರಸ್ವಾಮಿ ಸರಕಾರ ಇದ್ದಾಗ ಮೈಸೂರು, ಮಂಡ್ಯದಲ್ಲಿ ರೈತರು ಸಾವಿಗೆ ಶರಣಾದಾಗ, ಈ ರೈತ ನಾಯಕ ತುಟಿಗೆ ಬೀಗ ಹಾಕಿಕೊಂಡಿದ್ದ. ಇವನ ಹೆಸರಿನಲ್ಲಿ ಹಿಂದೆ ಎರಡು ಎಕರೆ ಆಸ್ತಿ ಇದ್ದದ್ದು ಈಗ ಕೋಟ್ಯಂತರ ಆಸ್ತಿ ಮಾಡಿದ್ದಾನೆ. ಅದು ಎಲ್ಲಿಂದ ಬಂತು ಎನ್ನೋದನ್ನು ರಾಜ್ಯದ ಜನರಿಗೆ ಹೇಳಬಹುದಾ..? ಬೆಂಗಳೂರಿನಲ್ಲಿ ಬಂಗಲೆ ಕಟ್ಟಿಕೊಂಡು ವಾಸ್ತವ್ಯ ಹೂಡಿರುವ ನೀನು ಯಾವ ಸೀಮೆಯ ರೈತ ನಾಯಕ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಈವರೆಗೆ ರೈತರಿಗೆ ದ್ರೋಹ ಮಾಡಿದ್ದೀಯಾ.. ಈಗ ಸಾರಿಗೆ ನೌಕರರ ಜೊತೆ ಸೇರಿ ಸರಕಾರದ ವಿರುದ್ಧ ಎತ್ತಿಕಟ್ಟುತ್ತೀಯಾ.. ನಾಲ್ಕು ದಿನ ಬಸ್ ಸಂಚಾರ ಸ್ಥಗಿತಗೊಳಿಸಿ ರಾಜ್ಯದ ಜನರಿಗೆ ಆಗಿರುವ ನಷ್ಟಕ್ಕೆ ಈತನೇ ಕಾರಣ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದಕ್ಕೆ ಈತ ಕಾಂಗ್ರೆಸಿನವರ ಜೊತೆ ಸೇರಿ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾನೆ ಎಂದು ಮೂದಲಿಸಿದರು.
200 ಜನರಿಗೆ ಮೋಸ ಮಾಡಿ ಅಕ್ರಮ ಆಸ್ತಿ
ಬೆಂಗಳೂರು ನಗರದ ಆರ್ ಪಿಸಿ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಹೇಳಿ 2012ರಲ್ಲಿ 200ಕ್ಕಿಂತಲೂ ಹೆಚ್ಚು ಮಂದಿಗೆ ಮೋಸ ಮಾಡಿದ್ದೀಯಾ.. ಪ್ರತಿ ಕುಟುಂಬದಿಂದ 3ರಿಂದ 6 ಲಕ್ಷ ರೂ. ಪಡೆದು ಮೋಸ ಮಾಡಿದ್ದಾನೆ. ಭೈರಯ್ಯ ಎಂಬವರಿಂದ ಆರು ಲಕ್ಷ ರೂ. ಪಡೆದು ಮೋಸ ಆಗಿರುವ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗ ಸಿದ್ದರಾಮಯ್ಯ ಸರಕಾರ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬೆಂಬಲಿಸಿತ್ತು. ಹಣ ಕೇಳಿದ ಭೈರಯ್ಯ ವಿರುದ್ಧ ಗೂಂಡಾಗಿರಿ ನಡೆಸಿದ್ದರು. ಆಬಳಿಕ ಬೈರಯ್ಯರಿಗೆ 1.50 ಲಕ್ಷ ರೂ. ಕೊಟ್ಟಿದ್ದ. ಹೀಗೆ 200 ಮಂದಿಯ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm